ಇಂಡಿಯಾ-ಅಮೆರಿಕ ಟ್ರೇಡ್‌ ವಾರ್‌

ಅಮೆರಿಕದ ಮನವಿಯನ್ನು ಪುರಸ್ಕರಿಸದ ಭಾರತ

Team Udayavani, Jul 23, 2019, 5:00 AM IST

i-27

ಮಣಿಪಾಲ: ಭಾರತ – ಅಮೆರಿಕ ಮಧ್ಯೆ ನಡೆಯುತ್ತಿರುವ ಕೆಲವು ವ್ಯಾಪಾರ ಸಂಬಂಧಿ ಬೆಳವಣಿಗೆಗಳು ದೇಶದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿವೆ. ಅಮೆರಿಕದಿಂದ ಆಮದಾಗು ತ್ತಿರುವ 28 ಉತ್ಪನ್ನಗಳ ಮೇಲೆ ಭಾರತ ನೀಡಿದ್ದ ತೆರಿಗೆ ವಿನಾಯಿತಿಯನ್ನು ಕಳೆದ ತಿಂಗಳು ಕಡಿತಗೊಳಿಸಿದೆ. ಅಮೆರಿಕ ಇದರಿಂದ ಹಾನಿಗೊಳಗಾಗಿದ್ದು, ಭಾರತ ವಿಧಿಸಿದ ಹೆಚ್ಚುವರಿ ತೆರಿಗೆಯನ್ನು ತೆಗೆದು ಹಾಕುವಂತೆ ಕೋರಿಕೊಂಡಿದೆ. ಆದರೆ ಅಮೆರಿಕದ ಮನವಿಯನ್ನು ಭಾರತ ತಿರಸ್ಕರಿಸಿದೆ.

ಆಗಿದ್ದೇನು?
ಅಮೆರಿಕ ಭಾರತದ ಜತೆ ವ್ಯಾಪಾರ ವಹಿವಾಟಿನಲ್ಲಿ ಸಹಕಾರ ಕ್ರಮವನ್ನು ಅನುಸರಿಸಲಾಗಿತ್ತು. ತಾನು ನೀಡಿದ್ದ “ಆದ್ಯತೆಯ ರಾಷ್ಟ್ರ’ ಸ್ಥಾನಮಾನವನ್ನು ಅಮೆರಿಕ ಜೂನ್‌ನಲ್ಲಿ ಹಿಂದೆಗೆದುಕೊಂಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದಿಂದ ಆಮದಾಗುವ 28 ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ಯನ್ನು ಭಾರತ ವಿಧಿಸಿತ್ತು. ಇದು ಈ ಎರಡು ರಾಷ್ಟ್ರಗಳ ವ್ಯಾಪಾರ ಕ್ಷೇತ್ರದಲ್ಲಿ ಮುಸುಕಿನ ಗುದ್ದಾಟಕ್ಕೆ ಕಾರಣ.

ಜೂನ್‌ನಲ್ಲಿ ಏನಾಯಿತು?
ಜೂನ್‌ 5ರಂದು ಅಮೆರಿಕ ಭಾರತಕ್ಕೆ ನೀಡಿದ್ದ ಆದ್ಯತೆಯ ರಾಷ್ಟ್ರ ಸ್ಥಾನಮಾನ (GSP- Generalised System of Preference)ವನ್ನು ಹಿಂತೆಗೆದುಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಅದೇ ದಿನ ಪ್ರಸ್ತಾವನೆ ಹಂತದಲ್ಲಿದ್ದ ಹೆಚ್ಚುವರಿ ತೆರಿಗೆ ವಿಧಿಸುವ ಯೋಜನೆಯನ್ನು ಭಾರತ ಅಮೆರಿಕದ ಮೇಲೆ ಹೇರಿದೆ.

ಪ್ರಮುಖ ಆಮದುಗಳು
ಸೇಬು, ಬಾದಾಮ್‌, ವಾಲ್‌ನಟ್‌, ಸಿಗಡಿ, ಚಣ, ಮಸೂರ್‌ ದಾಲ್‌, ಕಡಲೆ, ಬೋರಿಕ್‌ ಆಮ್ಲ ಸೇರಿದಂತೆ 28 ಉತ್ಪನ್ನಗಳ ಮೇಲೆ ಭಾರತದ ಹೆಚ್ಚುವರಿ ತೆರಿಗೆ ಹೇರಿದೆ. ಇದರಿಂದ ಭಾರತ ಖರೀದಿಸಬೇಕಾದರೆ ಈಗಿರುವ ದರಕ್ಕಿಂತ ಶೇಕಡ 30 ಅನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಬಾದಾಮಿ ಶೇ. 30ರಿಂದ 120 ಶೇಕಡದಷ್ಟು ದರ ಹೆಚ್ಚಾಲಿದೆ. ಉಳಿದ 27 ಉತ್ಪನ್ನಗಳ ದರಗಳು ಶೇ. 30-70 ಹೆಚ್ಚಾಗಲಿವೆ. ಈ ಹೆಚ್ಚುವರಿ ಹೊರೆ ಗ್ರಾಹಕರ ಮೇಲೆ ಬೀಳಲಿದೆ. ಇದರಿಂದ ಭಾರತಕ್ಕೆ ಸುಮಾರು 200 ಮಿಲಿಯನ್‌ ಡಾಲರ್‌ ಆದಾಯ ಹೆಚ್ಚುವರಿಯಾಗಿ ದೊರೆಯಲಿದೆ.

ಅಮೆರಿಕ ಏನು ಮಾಡಿತ್ತು?
ಕಳೆದ ವರ್ಷ ಜೂನ್‌ ತಿಂಗಳಲ್ಲಿ ಭಾರತದಿಂದ ಆಮದಾಗುವ ಇಂಡಿಯನ್‌ ಸ್ಟೀಲ್‌ ಮೇಲೆ 10 ಶೇ. ಮತ್ತು ಅಲ್ಯುಮಿನಿಯಂಗಳ ಮೇಲೆ ಶೇ. 25 ಹೆಚ್ಚುವರಿ ತೆರಿಗೆಗಳನ್ನು ನೂತನ ಟ್ರಂಪ್‌ ಸರಕಾರ ವಿಧಿಸಿತ್ತು. ಇದರಿಂದ ಭಾರತ ಇಲ್ಲಿನ ವಸ್ತುಗಳನ್ನು ಅಮೆರಿಕದಲ್ಲಿ ಪರಿಚಯಿಸಲು ಹೆಚ್ಚುವರಿ ಹಣವನ್ನು ತೆರಿಗೆ ರೂಪದಲ್ಲಿ ಪಾವತಿ ಮಾಡಬೇಕಾಗಿತ್ತು.

ಮಾರುಕಟ್ಟೆ ಮೇಲೆ ಹಾನಿ
ಡೊನಾಲ್ಡ್‌ ಟ್ರಂಪ್‌ 2017ರಲ್ಲಿ ಅಧ್ಯಕ್ಷರಾದ ಬಳಿಕ ಪೂರ್ಣವಾಗಿ ಅಮೆರಿಕ ಪರವಾದ ನಿಲುವು ಮತ್ತು ವಿದೇಶಗಳ ಮೇಲೆ ಕಠಿನ ಕ್ರಮಗಳನ್ನು ಸಾರುತ್ತಾ ಬಂದಿದ್ದಾರೆ. ಇದೀಗ ವ್ಯಾಪಾರ ಕ್ಷೇತ್ರಕ್ಕೂ ಅದು ಕಾಲಿಟ್ಟಿದೆ. ಈ ಉಭಯ ದೇಶಗಳ ಈ ನಿರ್ಧಾರ ಮಾರುಕಟ್ಟೆಯಲ್ಲಿ ಪ್ರತಿಕೂಲ ಪರಿಣಾಮವನ್ನು ತಂದಿರಿಸಿದೆ.

ಮಣಿಪಾಲ, ಸ್ಪೆಷಲ್‌ ಡೆಸ್ಕ್

ಟಾಪ್ ನ್ಯೂಸ್

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.