“ಲಾಕ್ಡೌನ್ನಲ್ಲೂ ಅಭಿವೃದ್ಧಿಯಾದದ್ದು ಕೃಷಿ ಕ್ಷೇತ್ರ ಮಾತ್ರ’
ಬ್ರಹ್ಮಾವರ: ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣ ಬಿಡುಗಡೆ
Team Udayavani, Sep 12, 2020, 9:03 PM IST
ಡಾ| ಮಂಜುನಾಥ ನಾಯಕ್ ಅವರು ಸಮ್ಮಿಶ್ರಣವನ್ನು ಅನಾವರಣಗೊಳಿಸಿದರು.
ಬ್ರಹ್ಮಾವರ: ಗ್ರಾಮೀಣ ಯುವಕರಿಗೆ ಆರು ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಸಹ್ಯಾದ್ರಿ ತ್ರಿಶೂಲ್ (ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣ) ಉತ್ಪನ್ನದ ಅನಾವರಣ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ| ಮಂಜುನಾಥ ನಾಯಕ್ ಅವರು ಸಮ್ಮಿಶ್ರಣವನ್ನು ಅನಾವರಣಗೊಳಿಸಿ ಮಾತನಾಡಿ, ಲಾಕ್ಡೌನ್ನಿಂದ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಆದರೆ ಕೃಷಿ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ಉನ್ನತ ಮಟ್ಟಕ್ಕೆ ತಲುಪಿದೆ. ಕೋವಿಡ್ ಪರಿಸ್ಥಿತಿಯಲ್ಲೂ ಕೂಡ ಆಹಾರ ವ್ಯವಸ್ಥೆ ಶೇ.10 ಹೆಚ್ಚಾಗಿ ಧಾನ್ಯಗಳ ಪ್ರಮಾಣ ಶೇ.7ರಷ್ಟು ಹೆಚ್ಚಾಗಿದೆ ಎಂದರು.
ಕೆ.ವಿ.ಕೆ.ಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಧನಂಜಯ ಬಿ. ಅವರು ಮಾತನಾಡಿ, ಅರ್ಕಾ ಮೈಕ್ರೋಬಿಯಲ್ ಐ.ಐ.ಎಚ್.ಆರ್. ಬೆಂಗಳೂರಿನಿಂದ ತರಿಸಬೇಕಾಗಿತ್ತು. ಈಗ ಅದನ್ನು ನಾವೇ ತಯಾರಿಸಿ ಬಿಡುಗಡೆ ಮಾಡುತ್ತಿರುವುದು ಸಂಸ್ಥೆಗೆ ಒಂದು ಹೆಮ್ಮೆಯ ವಿಷಯ ಎಂದರು.
ಅತಿಥಿಗಳಾಗಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ| ಶಶಿಧರ್ ಕೆ.ಸಿ. ಮಾತನಾಡಿ, ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ಉಪಯೋಗ ಪಡೆದುಕೊಂಡು ಕಡಿಮೆ ಖರ್ಚಿನಲ್ಲಿ ತಾವೇ ಸ್ವತಃ ಈ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣವನ್ನು ತಯಾರಿಸುವಂತೆ ರೈತರಿಗೆ ಪ್ರೇರೇಪಿಸಿದರು. ಸಹವಿಸ್ತರಣಾ ನಿರ್ದೇಶಕ ಡಾ| ಎಸ್.ಯು. ಪಾಟೀಲ್ ಅವರು ಮಾತನಾಡಿ, 3 ಸೂಕ್ಷ್ಮಾಣು ಜೀವಿಗಳಿದ್ದು ಎಲ್ಲಾ ಶೂಲವನ್ನು ದೂರ ಮಾಡುವಂತಹ ಒಂದು ಸಮ್ಮಿಶ್ರಣ ಸಹ್ಯಾದ್ರಿ ತ್ರಿಶೂಲ್ ಎಂದು ತಿಳಿಸಿದರು.
ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ, ಸಹ ಸಂಶೋಧನಾ ನಿರ್ದೇಶಕ ಡಾ| ಲಕ್ಷ್ಮಣ ಮತ್ತು ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಧೀರ್ ಕಾಮತ್ ಉಪಸ್ಥಿತರಿದ್ದರು. ಶಿಬಿರಾರ್ಥಿ ಗುರುರಾಜ್ ಗಂಟಿಹೊಳೆ ಅನುಭವ ಹಂಚಿಕೊಂಡರು. ವಿಜ್ಞಾನಿಗಳಾದ ಡಾ| ಎನ್.ಈ ನವೀನ್ ಕಾರ್ಯಕ್ರಮವನ್ನು ನಿರೂಪಿಸಿ, ಎಚ್.ಎಸ್. ಚೈತನ್ಯ ವಂದಿಸಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, (ವಿಸ್ತರಣಾ ನಿರ್ದೇಶನಾಲಯ), ಬ್ರಹ್ಮಾವರ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ಮತ್ತು ಗ್ರಾಮ ವಿಕಾಸ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪೋಷಕಾಂಶಗಳ ಲಭ್ಯತೆ
ಮಣ್ಣಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ದೊರಕಿಸುವ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣ ಇದಾಗಿದೆ. ಕಸದಿಂದ ರಸ ಮಾಡಬೇಕು ಎಂದರೆ ಸೂಕ್ಷ್ಮಾಣು ಜೀವಿಗಳನ್ನು ಬೆಳೆಸುವುದು ಅತ್ಯಾವಶ್ಯಕ. ಇದು ಸಸ್ಯಗಳನ್ನು ಪ್ರಚೋದಿಸುವ ಹಾಗೂ ರೋಗಗಳ ತಡೆಗಟ್ಟುವ ಕೆಲಸವನ್ನು ಮಾಡುತ್ತದೆ. ಸಾವಯವ ಕೃಷಿ, ಪರಂಪರಾಗತ ಕೃಷಿಯನ್ನು ಉಳಿಸಬೇಕಾದರೆ ರಾಸಾಯನಿಕ ಗೊಬ್ಬರಗಳ ಜೊತೆಗೆ ಈ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣವನ್ನು ಉಪಯೋಗಿಸುವುದು ಒಳ್ಳೆಯದು ಎಂದು ಡಾ| ಮಂಜುನಾಥ ನಾಯಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ