Udupi: ಮಾದರಿ ನೀತಿ ಸಂಹಿತೆ ಉಲ್ಲಂಘನೆ; ವಿವಿಧೆಡೆ ಪ್ರಕರಣ ದಾಖಲು
Team Udayavani, Mar 27, 2024, 11:30 AM IST
ಉಡುಪಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಾವರ ಚೆಕ್ಪೋಸ್ಟ್ನಲ್ಲಿ 4.51 ಲಕ್ಷ, ಶಿರೂರು ಚೆಕ್ ಪೋಸ್ಟ್ನಲ್ಲಿ 3.50 ಲಕ್ಷ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 7 ಎಫ್ಐಆರ್ ದಾಖಲಾಗಿದ್ದು, ಅದರಲ್ಲಿ 4 ಚುನಾವಣೆಗೆ ಸಂಬಂಧಿಸಿದ್ದಾಗಿದೆ.
ಮಾ.26ರಂದು 7,500 ರೂ.ಮೌಲ್ಯದ 100 ಲೀ. ಶೇಂದಿಯನ್ನು ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, 44,000 ರೂ.ಮೌಲ್ಯದ 1.108 ಕೆಜಿ ಗಾಂಜಾವನ್ನು ಸೆನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, 1,440 ರೂ.ಮೌಲ್ಯದ 3.240 ಲೀ. ಮದ್ಯವನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಹೆಜಮಾಡಿ ಚೆಕ್ಪೋಸ್ಟ್ನಲ್ಲಿ 25 ಶರ್ಟ್ ಮತ್ತು 30 ಪ್ಯಾಂಟ್ ಸಹಿತ ಒಟ್ಟು 79,737 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಚ್ಚಿಟ್ಟಿದ್ದ 13.16 ಲಕ್ಷ ರೂ. ವಶಕ್ಕೆ
ಕಾಸರಗೋಡು: ಉಳಿತ್ತಡ್ಕದ ವರ್ಕತ್ತೋಡಿಯ ಅಬ್ದುಲ್ ಲತೀಫ್ ಅವರ ಮಜಿಲ ಅಪಾರ್ಟ್ಮೆಂಟ್ನಿಂದ ವಿದ್ಯಾನಗರ ಪೊಲೀಸರು ದಾಖಲೆ ಪತ್ರಗಳಿಲ್ಲದ 13.16 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
500 ರೂ.ಗಳನ್ನು 26 ಕಟ್ಟು ಮಾಡಿ ಬ್ಯಾಗ್ನಲ್ಲಿ ತುಂಬಿಸಿಡಲಾಗಿತ್ತು. ರಹಸ್ಯ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಅಬ್ದುಲ್ ಲತೀಫ್ನ ಹೇಳಿಕೆಗಳನ್ನು ದಾಖಲಿಸಿ ಆತನನ್ನು ಬಿಡುಗಡೆಗೊಳಿಸಿದ್ದಾರೆ.
ದ.ಕ.: 1.39 ಲ.ರೂ. ವಶಕ್ಕೆ
ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅಕ್ರಮ ಹಣ, ಮದ್ಯ ಸಾಗಾಟ ಪತ್ತೆಗಾಗಿ ತಪಾಸಣೆ ಮುಂದುವರಿದಿದ್ದು ಮಾ. 25ರ ಬೆಳಗ್ಗೆ 9ರಿಂದ 26ರ ಬೆಳಗ್ಗೆ 9 ಗಂಟೆಯ ನಡುವೆ ಒಟ್ಟು 1,39,300 ರೂ. ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಮಾ. 17ರಿಂದ 26ರವರೆಗೆ ಒಟ್ಟು 8,71,500 ರೂ. ನಗದು ವಶಪಡಿಸಿಕೊಂಡಂ ತಾಗಿದೆ. ಈ ಪೈಕಿ ದಾಖಲೆ ಪರಿಶೀಲನೆಯ ಅನಂತರ 1.32 ಲ.ರೂ.ಗಳನ್ನು ಸಂಬಂಧಿಸಿದವರೆಗೆ ವಾಪಸ್ ನೀಡಲಾಗಿದೆ.
46 ಲೀ. ಮದ್ಯ ವಶ
ಮಾ. 25ರ ಬೆಳಗ್ಗೆ 9ರಿಂದ 26ರ ಬೆಳಗ್ಗೆ 9ರ ಅವಧಿಯಲ್ಲಿ 46 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಮಾ. 17ರಿಂದ 26ರ ವರೆಗೆ 5,72,342 ರೂ. ಮೌಲ್ಯದ ಒಟ್ಟು 1078.98 ಲೀ. ಮದ್ಯ ವಶಪಡಿಸಿಕೊಂಡಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ