Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Team Udayavani, Mar 28, 2024, 1:25 PM IST
ಬೆಂಗಳೂರು: ಸಾಲ ವಾಪಸ್ ನೀಡಿಲ್ಲ ಎಂದು ಜಗನ್ನಾಥ್ ಎಂಬವರ ಆಟೋವನ್ನು ಅಕ್ರಮವಾಗಿ ಜಪ್ತಿ ಮಾಡಿದ ಇಬ್ಬರು ಆರೋಪಿಗಳನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಲ್ಮಾನ್ ಮತ್ತು ಪಠಾಣ್ ಬಂಧಿತರು.
ಎಂ.ಜಿ.ರಸ್ತೆಯಲ್ಲಿರುವ ಫೈನಾನ್ಸ್ ಕಂಪನಿಯಲ್ಲಿ ಜಗನ್ನಾಥ್ 3 ತಿಂಗಳ ಹಿಂದೆ 2 ಲಕ್ಷ ರೂ. ಸಾಲ ಪಡೆದಿದ್ದರು. ರಂಗಸ್ವಾಮಿ ಎಂಬವರು ಜಾಮೀನು ನೀಡಿದ್ದರು. ಜಗನ್ನಾಥ್ ಮಾರ್ಚ್ ತಿಂಗಳ ಹಣ ಕಟ್ಟಿರಲಿಲ್ಲ. ಹೀಗಾಗಿ ರಂಗಸ್ವಾಮಿ ಆಟೋ ಜಪ್ತಿ ಮಾಡುವಂತೆ ಕರ್ನಾಟಕ ರಿಕವರಿ ಏಜೆನ್ಸಿ ಯಲ್ಲಿ ಕೆಲಸ ಮಾಡುವ ಆರೋಪಿಗಳಿಗೆ ಹೇಳಿದ್ದರು. ಅದರಿಂದ ಸೋಮವಾರ ತಡರಾತ್ರಿ ಬಿಟಿಎಂ ಲೇಔಟ್ ಕಡೆ ಹೋಗುವಾಗ ಆರೋಪಿಗಳು ಅಡ್ಡಗಟ್ಟಿ ಆಟೋ ಜಪ್ತಿಗೆ ಮುಂದಾಗಿದ್ದಾರೆ.
ಮನವಿ ಮಾಡಿದರೂ ಆಟೋ ಜಪ್ತಿ ಮಾಡಿದ್ದರು. ಜಗನ್ನಾಥ್ ಸಲ್ಮಾನ್ಗೆ ಕರೆ ಮಾಡಿ ಆಟೋ ಬಿಡುವಂತೆ ಕೇಳಿದ್ದರು. ಆಗ ಆರೋಪಿ, ಧರ್ಮವನ್ನು ಪ್ರಸ್ತಾಪಿಸಿ ನಿಂದಿಸಿ, ಆಟೋ ಬಿಡುವುದಿಲ್ಲ ಎಂದಿದ್ದಾನೆ. ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಗನ್ನಾಥ್ ದೂರು ನೀಡಿದ್ದರು. ಇಬ್ಬರನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್