Deepavali: ಪಟಾಕಿ ಬದಲಿಗೆ ಗೃಹೋಪಯೋಗಿ ವಸ್ತುಗಳ ಕೊಡಿ

ಕೆಂಪು ಪಟಾಕಿ ಸಿಗದ್ದಕ್ಕೆ ಬೇರೆ ವಸ್ತುಗಳತ್ತ ಗ್ರಾಹಕರ ಕಣ್ಣು

Team Udayavani, Nov 10, 2023, 7:57 AM IST

2-bangalore

ಬೆಂಗಳೂರು: ನಗರದಲ್ಲಿ ದೀಪಾವಳಿ ಬಂದರೆ ಸಾಕು ಪಟಾಕಿ ಚೀಟಿಗಳ ಸದ್ದು ಕೇಳಿ ಬರುತ್ತದೆ. ಪಟಾಕಿ ಜೊತೆಗೆ ಕೊಡುವ ಗಿಫ್ಟ್ ಗಾಗಿ ಮಹಿಳೆಯರು ವರ್ಷವಿಡೀ ಇಂತಿಷ್ಟು ಹಣವನ್ನು ಕಟ್ಟುತ್ತಾರೆ. ಈ ಚೀಟಿ ವ್ಯವಹಾರಗಳು ಪರೋಕ್ಷವಾಗಿ ಪಟಾಕಿಗಳ ಖರೀದಿಗೆ ಪ್ರೇರಣೆಯಾಗಿದ್ದವು. ಆದರೆ, ಈಗ ಚಿತ್ರಣ ಬದಲಾಗಿದೆ. ಚೀಟಿ ಗ್ರಾಹಕರೇ ಪಟಾಕಿ ಬದಲಿಗೆ ಗೃಹೋಪಯೋಗಿ ವಸ್ತುಗಳಿಗೆ ಬೇಡಿಕೆ ಇಡುತ್ತಿರುವ ಹೊಸ “ಟ್ರೆಂಡ್‌’ ಶುರುವಾಗಿದೆ.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪಟಾಕಿ ಚೀಟಿ ವ್ಯವಹಾರ ಸರ್ವೇ ಸಾಮಾನ್ಯ. ಯುಗಾದಿ, ದಸರಾ ಹಾಗೂ ದೀಪಾವಳಿ ಹೆಸರಿನಲ್ಲಿ ಚೀಟಿ ವ್ಯವಹಾರಗಳು ನಡೆಯುತ್ತವೆ. ಪಟಾಕಿ ಜತೆಗೆ ಚಿನ್ನ ಅಥವಾ ಬೆಳ್ಳಿ ನಾಣ್ಯಗಳನ್ನು ಸಿಗುತ್ತದೆ ಎಂಬ ಕಾರಣಕ್ಕೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮಹಿಳೆಯರು ಚೀಟಿ ಮೂಲಕ ಪ್ರತಿ ತಿಂಗಳು ಒಂದಿಷ್ಟು ಹಣ ಹೂಡುತ್ತಾರೆ. ಆ ಮೂಲಕ ಬರುವ ಪಟಾಕಿಗಳನ್ನು ಹೊಡೆಯುವುದು ವಾಡಿಕೆ. ಆದರೆ, ಈ ಬಾರಿ ರಾಜ್ಯ ಸರ್ಕಾರ ಹಸಿರು ಪಟಾಕಿ ಮಾತ್ರ ಬಳಸಬೇಕು, ದಾಸ್ತಾನು ಮಾಡುವಂತಿಲ್ಲ, ಹೀಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದರಿಂದ ಪಟಾಕಿ ಬೇಡಿಕೆ ತುಸು ತಗ್ಗಿದೆ.

ಪಟಾಕಿಗೆ ಬೇಡಿಕೆ ಕಡಿಮೆ:

“ಈ ಮೊದಲು ನೇರವಾಗಿ ತಮಿಳುನಾಡಿನ ಶಿವಕಾಶಿ ಅಥವಾ ನಗರದಲ್ಲಿರುವ ಮಧ್ಯವರ್ತಿಗಳ ಮೂಲಕ ನೇರವಾಗಿ ಬಾಕ್ಸ್‌ ಗಟ್ಟಲೇ ಪಟಾಕಿಗಳನ್ನು ಖರೀದಿಸುತ್ತಿದ್ದೆವು. ಅದರಿಂದ ತಮಗೂ ಒಂದಿಷ್ಟು ಲಾಭವಾಗುತ್ತಿತ್ತು. ಆದರೆ, ದೀಪಾವಳಿ ಹೊಸ್ತಿಲಲ್ಲೇ ನಡೆದ ಪಟಾಕಿ ದುರಂತ, ನಂತರದಲ್ಲಿ ದಾಸ್ತಾನಿಗೆ ಬ್ರೇಕ್‌ ಹಾಕಿದ್ದು ಸೇರಿದಂತೆ ಹತ್ತಾರು ನಿರ್ಬಂಧಗಳನ್ನು ವಿಧಿಸಿದ್ದರಿಂದ ಮಳಿಗೆಯಿಂದಲೇ ನೇರವಾಗಿ ಗ್ರಾಹಕರಿಗೆ ಪಟಾಕಿ ಕೊಡಿಸುತ್ತೇವೆ. ಮಳಿಗೆ ಬಳಿ ಚೀಟಿದಾರರನ್ನು ಕರೆದುಕೊಂಡು ಹೋಗಿ, ಮೊತ್ತಕ್ಕೆ ಅನುಗುಣವಾಗಿ ಪಟಾಕಿ ಬಾಕ್ಸ್‌ ಕೊಡುತ್ತೇವೆ’ ಎಂದು ಪಟಾಕಿ ಚೀಟಿ ನಡೆಸುವ ನಾರಾಯಣ ತಿಳಿಸುತ್ತಾರೆ.

“ಈ ಮಧ್ಯೆ ಕೆಲ ಗ್ರಾಹಕರು ಕೆಂಪು ಪಟಾಕಿಗಳೇ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಅದನ್ನು ಕೊಡಲು ಸಾಧ್ಯವಿಲ್ಲ ಎಂದಿದ್ದೇವೆ. ಬದಲಿಗೆ ಬೇರೆ ವಸ್ತುಗಳನ್ನು ಕೇಳಿದ್ದಾರೆ. ಇನ್ನು ಕೆಲವರು ಎರಡು ಗಂಟೆ ಸಿಡಿಸಲು ಸಾವಿರಾರು ರೂ. ಪಟಾಕಿ ಯಾಕೆ ಬೇಕು? ಬದಲಿ ವಸ್ತುಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಕಳೆದ ಬಾರಿಯೇ ಈ ಅನುಭವವಾಗಿತ್ತು. ಹೀಗಾಗಿ ಈ ಬಾರಿ ಕಡಿಮೆ ಪಟಾಕಿ ಬಾಕ್ಸ್‌ಗಳ ಬುಕಿಂಗ್‌ (ಮಳಿಗೆ ಮಾಲಿಕರ ಬಳಿ) ಮಾಡಲಾಗಿದೆ. ಗ್ರಾಹಕರಿಗೆ ಒಂದು ಗ್ರಾಂ ಬೆಳ್ಳಿ ನಾಣ್ಯದ ಜತೆಗೆ ಬೇರೆ ಗೃಹೋಪಯೋಗಿ ವಸ್ತುಗಳ ಕೂಪನ್‌ ಕೊಡುತ್ತಿದ್ದೇವೆ’ ಎಂದೂ ಮಹಾಲಕ್ಷ್ಮೀ ಲೇಔಟ್‌ ನಿವಾಸಿ ನಾರಾಯಣ ಮಾಹಿತಿ ನೀಡಿದರು.

ಆನ್‌ಲೈನ್‌ನಲ್ಲೂ ಪಟಾಕಿಗಳು ಲಭ್ಯ:

ಇ-ಕಾಮರ್ಸ್‌ ವೇದಿಕೆಗಳಲ್ಲೂ ಪಟಾಕಿಗಳು ಮಾರಾಟಕ್ಕಿವೆ. ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಹಸಿರು ಪಟಾಕಿಗಳನ್ನೇ ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಈ ವೇದಿಕೆಗಳ ಮೇಲೆ ನಿಗಾ ವಹಿಸುವುದು ಕಷ್ಟದ ಕೆಲಸ. ಆದರೂ, ನಮ್ಮ ಐಟಿ ವಿಭಾಗದ ಸಿಬ್ಬಂದಿಗೆ ಇ-ಕಾಮರ್ಸ್‌ ವೆಬ್‌ಸೈಟ್‌ ಗಳ ಮೇಲೆ ಕಣ್ಗಾವಲು ಇಡುವಂತೆ ಸೂಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪಟಾಕಿ ಮಾದರಿಯ ಚಾಕೋಲೇಟ್‌!

ಇ-ಕಾಮರ್ಸ್‌ ವೇದಿಕೆಯಲ್ಲಿ ಪಟಾಕಿ ಬುಕ್‌ ಮಾಡಿದಾಗ ಪಟಾಕಿ ಮಾದರಿಯ ಚಾಕೋಲೇಟ್‌ಗಳು ಬಂದಿವೆ. ಇ-ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಕ್ರ್ಯಾಕರ್ ಅಂತ ಟೈಪ್‌ ಮಾಡಿ, ಎಲ್ಲ ಮಾದರಿಯ ಎರಡೆರಡು ಪಟಾಕಿಗಳಿರುವ ಬಾಕ್ಸ್‌ ಬುಕ್‌ ಮಾಡಲಾಗಿತ್ತು. ಆದರೆ, ಮನೆಗೆ ಬಂದ ಬಾಕ್ಸ್‌ ತೆರೆದಾಗ ಪಟಾಕಿ ಮಾದರಿಯ ಚಾಕೋಲೇಟ್‌ ಇದ್ದವು. ಅದನ್ನು ವಾಪಸ್‌ ಕಳುಹಿಸಿ, ಅಸಲಿ ಹಸಿರು ಪಟಾಕಿ ತರಿಸಿಕೊಂಡಿದ್ದೇವೆ ಎಂದು ಗ್ರಾಹಕರೊಬ್ಬರು ಮಾಹಿತಿ ನೀಡಿದರು.

320 ಪಟಾಕಿ ಮಳಿಗೆ ತೆರೆಯಲು ಅವಕಾಶ

ನಗರದ 62 ಬಿಬಿಎಂಪಿ ಮೈದಾನಗಳಲ್ಲಿ 320 ಪಟಾಕಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಮಳಿಗೆ ಮಾಲಿಕರಿಗೆ ಹಸಿರು ಪಟಾಕಿಯ ನಿಬಂಧನೆಗಳು, ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

-ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.