ಕೊಂಕಣ ರೈಲ್ವೇ ಸಾರ್ಥಕ ಸೇವೆಗೆ 22 ವರ್ಷ

ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕರಾವಳಿ ಭಾಗಗಳನ್ನು ಬೆಸೆಯುವ ರೈಲ್ವೇ ನಿಗಮ

Team Udayavani, May 3, 2020, 6:35 AM IST

ಕೊಂಕಣ ರೈಲ್ವೇ ಸಾರ್ಥಕ ಸೇವೆಗೆ 22 ವರ್ಷ

1998ರ ಮೇ 1ರಂದು ಅಟಲ್‌ ಬಿಹಾರಿ ವಾಜಪೇಯಿಯವರು ಕೊಂಕಣ ರೈಲ್ವೇ ಸೇವೆಯನ್ನು ಲೋಕಾರ್ಪಣೆಗೊಳಿಸಿದ ಸಂದರ್ಭ.

ಉಡುಪಿ: ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕರಾವಳಿ ಭಾಗಗಳನ್ನು ಬೆಸೆಯುವ ಕೊಂಕಣ ರೈಲ್ವೇ ನಿಗಮ ಜನ್ಮತಾಳಿ 22 ವರ್ಷಗಳಾಗಿವೆ.

ದೇಶದ ಕರಾವಳಿ ಮತ್ತು ಉತ್ತರ ಭಾರತವನ್ನು ಸಂಪರ್ಕಿಸುವ ಪ್ರಮುಖ ರೈಲ್ವೇ ಸಂಚಾರ ಮಾರ್ಗವೂ ಇದಾಗಿದ್ದು, ಭಾರತೀಯ ಎಂಜಿನಿಯರಿಂಗ್‌ ಕೌಶಲಕ್ಕೊಂದು ಉದಾಹರಣೆಯೂ ಆಗಿದೆ. ಕೊಂಕಣ ರೈಲ್ವೇ ಶುರುವಾದ ಬಳಿಕ ರಾಜ್ಯದ ಕರಾವಳಿಗೆ ಬಹಳಷ್ಟು ಪ್ರಯೋಜವಾಗಿದ್ದು, ಜನಜೀವನದ ಪ್ರಮುಖ ಕೊಂಡಿಯಾಗಿದೆ.

ಹಲವು ವರ್ಷಗಳ ಇತಿಹಾಸ
ಆದರೆ ಕೊಂಕಣ ರೈಲ್ವೇ ಇತಿಹಾಸ ಇದಕ್ಕೂ ಬಹು ದಶಕಗಳ ಹಿಂದಕ್ಕೆ ಇದೆ. 1971-73, 1975-77ರ ಅವಧಿಯಲ್ಲಿ ಯೋಜನೆಯ ಸಂಭವನೀಯತೆ ಕುರಿತು ಸಮೀಕ್ಷೆ ನಡೆಸಲಾಗಿತ್ತು. 1984ರಲ್ಲಿ ಪಶ್ಚಿಮ ಕರಾವಳಿಯ ಸಂಪರ್ಕವನ್ನು ರೋಹಾದಿಂದ ಮಂಗಳೂರುವರೆಗೆ ಸಂಚಾರ ಸಮೀಕ್ಷೆಯನ್ನು ನಡೆಸ ಲಾಯಿತು. 1977ರಲ್ಲಿ ಪ್ರೊ| ಮಧು ದಂಡವತೆ ಅವರು ರೈಲ್ವೇ ಸಚಿವರಾಗಿದ್ದಾಗ ಆಪಾrದಿಂದ ರೋಹಾ ವರೆಗೆ ಪ್ರಥಮ ಹಂತವನ್ನು ಮಂಜೂರುಗೊಳಿಸಿದ್ದರು. ಇದು 1986ರಲ್ಲಿ ಉದ್ಘಾಟನೆಗೊಂಡಿತು. 1989ರಲ್ಲಿ ಜಾರ್ಜ್‌ ಫೆರ್ನಾಂಡಿಸ್‌ ಅವರು ರೈಲ್ವೇ ಸಚಿವರಾದಾಗ ಇವರ ದೃಢ ಸಂಕಲ್ಪದಿಂದ ಪೂರ್ಣ ಪ್ರಮಾಣ ದಲ್ಲಿ ಜಾರಿಗೊಂಡಿತು. ರೋಹಾದಿಂದ ತೋಕೂರು ವರೆಗಿನ 741 ಕಿ.ಮೀ. ಮಾರ್ಗ ವನ್ನು ತಾಂತ್ರಿಕವಾಗಿ ಯಶಸ್ವಿಗೊಳಿಸಿದ ಕೀರ್ತಿ ಪ್ರಥಮ ಆಡಳಿತ ನಿರ್ದೇಶಕ ಇ.ಶ್ರೀಧರನ್‌ ಅವರಿಗೆ ಸಲ್ಲುತ್ತದೆ.

ವಾಜಪೇಯಿ ಉದ್ಘಾಟಿಸಿದ್ದರು
1993ರ ಮಾರ್ಚ್‌ 20ರಂದು ಮಂಗಳೂರು ಮತ್ತು ಉಡುಪಿ ನಡುವೆ ಪ್ರಥಮ ಪ್ರಯಾಣಿಕ ರೈಲು ಸಂಚರಿಸಿತು. 1998ರ ಜನವರಿಯಲ್ಲಿ ಎಲ್ಲ ಕೆಲಸಗಳು ಮುಗಿದು ಮೇ ತಿಂಗಳಲ್ಲಿ ಮುಂಬಯಿ ಮತ್ತು ಮಂಗಳೂರು ನಡುವೆ ರೈಲು ಸಂಚಾರ ಆರಂಭವಾಯಿತು. ಆ ವರ್ಷ ಮೇ 1 ಕಾರ್ಮಿಕರ ದಿನಾಚರಣೆಯಂದು ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರು ಕೊಂಕಣ ರೈಲ್ವೇ ಸೇವೆಯನ್ನು ಉದ್ಘಾಟಿಸಿದ್ದರು.

2,825 ಕೋಟಿ  ರೂ. ಆದಾಯ
2018-19ರ ಆರ್ಥಿಕ ವರ್ಷಾಂತ್ಯದಲ್ಲಿ 2,825 ಕೋ.ರೂ. ಆದಾಯವನ್ನು ಸಂಸ್ಥೆ ಗಳಿಸಿದೆ. 101 ಕೋ.ರೂ. ನಿವ್ವಳ ಲಾಭ ಗಳಿಸಿದೆ. ಸುಮಾರು 5,000 ನೌಕರರು ಇದರಲ್ಲಿ ತೊಡಗಿಕೊಂಡಿದ್ದಾರೆ. ಈಗ ಕೋವಿಡ್-19 ಲಾಕ್‌ಡೌನ್‌ ಇದ್ದಾಗಲೂ ಅಗತ್ಯದ ಸರಕು ಸಾಗಣೆ ವಹಿವಾಟು ನಡೆಸುತ್ತಿದೆ. ಪ್ರಸ್ತುತ ಆಡಳಿತ ನಿರ್ದೇಶಕರಾಗಿ ಸಂಜಯ ಗುಪ್ತ ಅವರು ಸೇವೆ ಸಲ್ಲಿಸುತ್ತಿದ್ದಾರೆ.

 

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.