ಗುಳೇದಗುಡ್ಡದಲ್ಲಿ ಹಾಡಹಗಲೇ ಫೈರಿಂಗ್
ಮಹಿಳೆಗೆ ಗುಂಡು ಹಾರಿಸಿ ಅಪರಿಚಿತ ಪರಾರಿ
Team Udayavani, May 9, 2022, 1:29 PM IST
ಗುಳೇದಗುಡ್ಡ: ನಿರ್ಮಾಣ ಹಂತದಲ್ಲಿರುವ ಮನೆಗೆ ಹಾಡಹಗಲೇ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಗೆ ಗುಂಡು ಹಾರಿಸಿ ಪರಾರಿಯಾದ ಘಟನೆ ಪಟ್ಟಣದ ಬಾದಾಮಿ ನಾಕಾ ಹತ್ತಿರದ ನಗ್ಲಿ ಪೇಟೆಯಲ್ಲಿ ನಡೆದಿದೆ.
ಪಟ್ಟಣದ ದ್ಯಾಮವ್ವ ಯಲ್ಲಪ್ಪ ಪೂಜಾರಿ ಊರ್ಫ್ ಕಕ್ಕೇರಿ(45) ಅಪರಿಚಿತ ವ್ಯಕ್ತಿಯ ಗುಂಡಿಗೆ ಬಲಿಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಲ್ಲಿ ಕಟ್ಟಡದ ಗೋಡೆಗೆ ನೀರು ಹಾಯಿಸುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಸಿನಿಮೀಯ ರೀತಿಯಲ್ಲಿ ಮಹಿ ಳೆಯ ಗುತ್ತಿಗೆಯ ಭಾಗಕ್ಕೆ ಎರಡು ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಗುಂಡಿನ ಸದ್ದಿಗೆ ಅಕ್ಕಪಕ್ಕದ ಜನರು ಬಂದು ನೋಡುತ್ತಿದ್ದಂತೆ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಮಹಿಳೆ ಒದ್ದಾಡುತ್ತಿದ್ದಳು. ಮಹಿಳೆಯನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.
ಘಟನೆ ವಿವರ: ಗುಂಡಿಗೆ ಬಲಿಯಾದ ಮಹಿಳೆ ದ್ಯಾಮವ್ವಳ ಗಂಡನ ಊರು ಪರ್ವತಿ ಗ್ರಾಮವಾಗಿದ್ದು, ಗಂಡ ತೀರಿಕೊಂಡ ಮೇಲೆ ತವರೂರಾದ ಗುಳೇದಗುಡ್ಡದಲ್ಲಿ ಬಂದು ವಾಸವಾಗಿದ್ದಳು. ಮಹಿಳೆಯ ಗಂಡ ತೀರಿಕೊಂಡು ಸುಮಾರು 10 ವರ್ಷ ಕಳೆದಿವೆ. ಮಹಿಳೆಗೆ ಎರಡು ಹೆಣ್ಣು ಮಕ್ಕಳಿದ್ದು ಅವರಿಬ್ಬರಿಗೂ ಮದುವೆ ಮಾಡಿಕೊಟ್ಟಿದ್ದಾಳೆ. ಮನೆ ಕಟ್ಟುತ್ತಿರುವ ಜಾಗೆಯ ವಿಷಯವಾಗಿ ಈ ಮಹಿಳೆಗೂ ಹಾಗೂ ಚಿಕ್ಕಪ್ಪನ ಮಗನ ನಡುವೆ ಆಸ್ತಿ ವಿವಾದ ಇತ್ತೆಂದು ಗುಂಡಿಗೆ ಬಲಿಯಾದ ಮಹಿಳೆಯ ಸಹೋದರ ಕನಕಪ್ಪ ಆರೋಪಿಸಿದ್ದಾನೆ.
ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪ್ರಭಾರಿ ಡಿವೈಎಸ್ಪಿ ಪ್ರಭುಗೌಡ, ಪಿಎಸ್ಐ ಐ.ಎಂ.ದುಂಡಸಿ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುಳೇದಗುಡ್ಡದ ಬಾದಾಮಿ ನಾಕಾದ ಹತ್ತಿರ ಹೊರವಲಯದ ಕಟ್ಟಡ ನಡೆದಿರುವ ಮನೆಯಲ್ಲಿ ಫೈರಿಂಗ್ ನಡೆದ ಬಗ್ಗೆ ಅವಳ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಅಪರಿಚಿತ ವ್ಯಕ್ತಿಯ ಮಾಹಿತಿ ಸಿಕ್ಕಿಲ್ಲ. ಎಫ್ಐಆರ್ ದಾಖಲಿಸಿ, ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ. –ಲೋಕೇಶ ಜಗಲಾಸರ್, ಎಸ್ಪಿ, ಬಾಗಲಕೋಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ