India-Bangla: 3 ಪ್ರಮುಖ ಯೋಜನೆಗಳಿಗೆ ಜಂಟಿ ಚಾಲನೆ
Team Udayavani, Nov 1, 2023, 9:48 PM IST
ನವದೆಹಲಿ: ಭಾರತ-ಬಾಂಗ್ಲಾ ನಡುವಿನ ಸಂಬಂಧ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವಿನ ಮೂರು ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಬುಧವಾರ ಜಂಟಿಯಾಗಿ ಚಾಲನೆ ನೀಡಿದ್ದಾರೆ.
ತ್ರಿಪುರಾದ ನಿಶ್ಚಿತಾಪುರದಿಂದ ಬಾಂಗ್ಲಾದ ಗಂಗಾಸಾಗರ್ಗೆ ಸಂಪರ್ಕ ಒದಗಿಸುವ ರೈಲ್ವೆ ಮಾರ್ಗವೂ ಸೇರಿದಂತೆ ಸಂಪರ್ಕ ಹಾಗೂ ಇಂಧನ ಸಹಕಾರಕ್ಕೆ ಪೂರಕವಾದ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉಭಯ ಪ್ರಧಾನಿಗಳು ಉದ್ಘಾಟಿಸಿದರು.
ಈ ಕುರಿತು ಮಾತನಾಡಿದ ಮೋದಿ, ಭಾರತ-ಬಾಂಗ್ಲಾದ ನಡುವಿನ ಸಹಕಾರಕ್ಕೆ ಈ ಕ್ಷಣಗಳು ಸಾಕ್ಷಿಯಾಗಿವೆ. ಹಲವು ದಶಕಗಳಿಂದಲೂ ಸಾಧ್ಯವಾಗದಂಥ ಅಭಿವೃದ್ಧಿಯನ್ನು 9 ವರ್ಷಗಳಲ್ಲಿ ಜಂಟಿಯಾಗಿ ನಾವು ಪೂರ್ಣಗೊಳಿಸಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಇದೇ ವೇಳೆ ಉಭಯ ರಾಷ್ಟ್ರಗಳ ನಡುವಿನ ಮೂಲಸೌಕರ್ಯ ಅಭಿವೃದ್ಧಿ ಸಹಯೋಗವನ್ನು ಯೋಜನೆಗಳು ಬಲಪಡಿಸುತ್ತವೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಯಾವ ಯೋಜನೆ?
ಅಗರ್ತಲಾ -ಅಖೌರಾ ಗಡಿಯಾಚೆಗಿನ ರೈಲು ಸಂಪರ್ಕ
ಈಶಾನ್ಯರಾಜ್ಯಗಳನ್ನು ಬಾಂಗ್ಲಾದೇಶದೊಂದಿಗೆ ಸಂಪರ್ಕಿಸುವ ಮೊದಲ ರೈಲು ಯೋಜನೆ. 12.24 ಕಿ.ಮೀ. ವ್ಯಾಪ್ತಿಯ ಈ ಯೋಜನೆ ಗಡಿಯಾಚೆಗಿನ ವ್ಯಾಪಾರ ಉತ್ತೇಜನಕ್ಕೆ ಅನುಕೂಲ
ಖುಲ್ನಾ-ಮೊಂಗ್ಲಾ ಬಂದರು ರೈಲುಮಾರ್ಗ
ಮೊಂಗ್ಲಾ ಬಂದರನ್ನು ಹಾಗೂ ಖುಲ್ನಾದಲ್ಲಿ ಅಸ್ತಿತ್ವದಲ್ಲಿರುವ ರೈಲು ಜಾಲದ ನಡುವೆ ಸಂಪರ್ಕಿಸುವ 65 ಕಿ.ಮೀ.ವ್ಯಾಪ್ತಿಯ ಬ್ರಾಡ್ಗೆಜ್ ಮಾರ್ಗ.
ಮೈತ್ರೀ ಸೂಪರ್ ಥರ್ಮಲ್ ಪವರ್ಪ್ಲಾಂಟ್ ಯೂನಿಟ್-2
ಮೈತ್ರೀ ಯೂನಿಟ್-2 ಭಾರತ-ಬಾಂಗ್ಲಾ ಜತೆಗೂಡಿ ಸ್ಥಾಪಿಸಿರುವ ವಿದ್ಯುತ್ ಉತ್ಪಾದನಾ ಸ್ಥಾವರ. 1,320 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಅದಕ್ಕೆ ಇದೆ.
392. 52 ಕೋಟಿ ರೂ.- ಭಾರತ ಬಾಂಗ್ಲಾಕ್ಕೆ ನೀಡಿದ ನೆರವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ
PM ಮೋದಿ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ: ಕಾಂಗ್ರೆಸ್
NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್ ಭಾಗಿ ಅನುಮಾನ
ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ
Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್