Paris Olympics: ಭಾರತದ ಏಷ್ಯಾಡ್‌ ಸಾಧನೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ದೊಡ್ಡ ಸ್ಫೂರ್ತಿ


Team Udayavani, Oct 8, 2023, 11:44 PM IST

PARIS OLYMPIC

ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲೇ ಭಾರತ ಮೊದಲ ಬಾರಿಗೆ 100 ಪದಕಗಳನ್ನು ದಾಟಿ 107ಕ್ಕೆ ಮುಟ್ಟಿದೆ. ಕೇಂದ್ರ ಸರಕಾರ ಪದಕ ಗೆಲ್ಲಬಲ್ಲ ಆ್ಯತ್ಲೀಟ್‌ಗಳನ್ನು ಗುರುತಿಸಿ, ಅವರ ತರಬೇತಿಗೆ ಕೋಟ್ಯಂತರ ರೂ. ಖರ್ಚು ಮಾಡಿದ್ದು ಈ ಸಾಧನೆಯಲ್ಲಿ ದೊಡ್ಡ ಪರಿಣಾಮ ಬೀರಿದೆ. ಕುಸ್ತಿಯೊಂದನ್ನು ಹೊರತುಪಡಿಸಿದರೆ ಭಾರತ ಎಲ್ಲ ವಿಭಾಗಗಳಲ್ಲೂ ಮಹತ್ವದ ಸಾಧನೆಯನ್ನೇ ಮಾಡಿದೆ. ಹೊಸಹೊಸ ಕ್ರೀಡೆಗಳಲ್ಲಿ ಪದಕಗಳನ್ನು ಪಡೆದುಕೊಂಡಿದೆ.

ಇಲ್ಲಿ ಹಲವಾರು ದಾಖಲೆಗಳೂ ನಿರ್ಮಾಣವಾಗಿವೆ. 72 ವರ್ಷಗಳ ಏಷ್ಯಾಡ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯರು 100 ಪದಕಗಳನ್ನು ಮುಟ್ಟಿದ್ದಾರೆ ಎನ್ನುವುದು; ದೇಶದಲ್ಲಿ ಹೊಸ ಕ್ರೀಡಾಕ್ರಾಂತಿ ಜರಗುತ್ತಿದೆ ಎನ್ನುವುದರ ಸ್ಪಷ್ಟ ಸಂಕೇತ. ಬಹುಶಃ ಇಷ್ಟು ವರ್ಷಗಳ ಭಾರತೀಯರ ಕೊರಗು ಇನ್ನು ಮುಂದೆ ಕಡಿಮೆಯಾಗುತ್ತ ಹೋಗ­ಬಹುದು. ಒಲಿಂಪಿಕ್ಸ್‌ನಲ್ಲೂ ಭಾರತ ಇನ್ನೊಂದು ಎತ್ತರಕ್ಕೆ ಹೋಗಬಹುದು. 2021ರಲ್ಲಿ ಜಪಾನಿನ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಬಾರಿಗೆ, ಚಿನ್ನ-ಬೆಳ್ಳಿ-ಕಂಚು ಮೂರೂ ಪದಕಗಳನ್ನು ಗೆದ್ದಿತ್ತು. ಅದಕ್ಕೂ ಮುನ್ನ ಮೂರೂ ಪದಕಗಳು ಒಂದೇ ಕೂಟದಲ್ಲಿ ಭಾರತಕ್ಕೆ ಬಂದಿದ್ದೇ ಇಲ್ಲ!

2018ರ ಜಕಾರ್ತಾ ಏಷ್ಯಾಡ್‌ನ‌ಲ್ಲಿ ಭಾರತ 16 ಚಿನ್ನದೊಂದಿಗೆ 70 ಪದಕಗಳನ್ನು ಗೆದ್ದಿತ್ತು. ಈ ಬಾರಿ 28 ಚಿನ್ನ , 38 ಬೆಳ್ಳಿ , 41 ಕಂಚು ಲಭಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ಭಾರೀ ಏರಿಕೆ ಸಾಧಿಸಿದೆ. ಹಾಗಂತ ಸ್ಥಾನಗಳನ್ನು ಪರಿಗಣಿಸಿದರೆ ಇದು ಭಾರತದ ಶ್ರೇಷ್ಠ ಸಾಧನೆಯಲ್ಲ! 1951ರಲ್ಲಿ ದಿಲ್ಲಿಯಲ್ಲಿ ಮೊದಲ ಬಾರಿಗೆ ಏಷ್ಯಾಡ್‌ ನಡೆದಾಗ ಭಾರತ 2ನೇ ಸ್ಥಾನ ಗಳಿಸಿತ್ತು. 1962ರ ಜಕಾರ್ತಾ ಏಷ್ಯಾಡ್‌ನ‌ಲ್ಲಿ 3ನೇ ಸ್ಥಾನ ಗಳಿಸಿತ್ತು. ಈ ಬಾರಿ 4ನೇ ಸ್ಥಾನ ಗಳಿಸಿದೆ. ಹಾಗಾಗಿ ಇದು 3ನೇ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಭಾರತ 2, 3ನೇ ಸ್ಥಾನ ಪಡೆದಿದ್ದರೂ ಆಗ ಪದಕಗಳ ಸಂಖ್ಯೆ ಬಹಳ ಕಡಿಮೆಯಿತ್ತು. ಈ ಬಾರಿ ಪದಕಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಬಹಳ ಸೂಕ್ಷ್ಮವಾಗಿಯೇ ಗಮನಿಸಬೇಕಾಗುತ್ತದೆ. ಭಾರತದ ಕ್ರೀಡಾವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿರುವುದೇ ಇದಕ್ಕೆ ಕಾರಣ. ಪದಕ ಗೆಲ್ಲಬಲ್ಲ ಉತ್ಸಾಹಿ ಕ್ರೀಡಾಪಟುಗಳಿಗೆ ಪ್ರಸ್ತುತ ಅತ್ಯುತ್ತಮ ತರಬೇತಿಯನ್ನು ಸರಕಾರವೇ ನೀಡುತ್ತಿದೆ. ಅದಕ್ಕೆ ಬೇಕಾದ ವಿದೇಶಿ ಕೋಚ್‌ಗಳು, ಹಣವನ್ನು ನೀಡುತ್ತಿದೆ. ಪ್ರತೀ ವರ್ಷ ಹೊಸಹೊಸ ಕ್ರೀಡಾಪಟುಗಳನ್ನು ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯಡಿ ಸೇರಿಸಿಕೊಳ್ಳಲಾಗುತ್ತಿದೆ. ಇದರಿಂದ ಆ್ಯತ್ಲೀಟ್‌ಗಳಿಗೆ ಒಂದು ಹೊಸ ಭರವಸೆ ಬಂದಿದೆ. ಪ್ರಸ್ತುತ ಆ್ಯತ್ಲೀಟ್‌ಗಳು ತಮ್ಮ ಸಮಸ್ಯೆಯನ್ನು ಟ್ವೀಟ್‌ ಮಾಡಿದರೂ ಸಾಕು, ಅದನ್ನು ಗಮನಿಸಿ ಸರಿಪಡಿಸುವ ಮನೋಭಾವವಿದೆ.

ಹಿಂದೆ ಆ್ಯತ್ಲೀಟ್‌ಗಳು ವಿದೇಶಗಳಿಗೆ ಹೋಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಅವರ ಅಪ್ಪ-ಅಮ್ಮನೋ ತರಬೇತುದಾರರೋ ಸರಕಾರಗಳ ನೆರವಿಗಾಗಿ ಗೋಗರೆಯುತ್ತಿದ್ದರು. ಈಗ ಪರಿಸ್ಥಿತಿ ಸಾಕಷ್ಟು ಸುಧಾರಣೆ­ಯಾಗಿದೆ. ಇದು ಹೀಗೆಯೇ ಮುಂದುವರಿದರೆ ಒಂದು ಬಲಿಷ್ಠ ಕ್ರೀಡಾಸಂಸ್ಕೃತಿ ಸಿದ್ಧ­ವಾಗುತ್ತದೆ. ಆಗ ಒಲಿಂಪಿಕ್ಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಪದಕ ಗೆಲ್ಲು­ವುದೂ ದೊಡ್ಡ ವಿಷಯವಾಗುವುದಿಲ್ಲ. ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂದಿದ್ದು ಒಟ್ಟು 7 ಪದಕಗಳು ಮಾತ್ರ. ಮುಂದಿನ ಪ್ಯಾರಿಸ್‌ನಲ್ಲಿ ಆ ಸಂಖ್ಯೆ ದುಪ್ಪಟ್ಟಾಗುತ್ತದೆ ಎಂಬ ಭರವಸೆ ಈಗಾಗಲೇ ಬಂದಿದೆ.

ಟಾಪ್ ನ್ಯೂಸ್

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.