ಪ್ರೀತಿಗೆ ಶರಣಾಗುವ ಜೀವನ


Team Udayavani, Feb 18, 2021, 8:00 AM IST

ಪ್ರೀತಿಗೆ ಶರಣಾಗುವ ಜೀವನ

ಪ್ರೀತಿ ಇದ್ದಾಗ ಮಾತ್ರ ಬದುಕಿಗೆ ಚೆಲುವು. ಪ್ರೀತಿಯು ಬದುಕಿಗಿಂತಲೂ ಅಮೂಲ್ಯವಾದುದು. ಪ್ರೀತಿಗಾಗಿ ಜೀವನವನ್ನೇ ನೀಡಬಹುದು, ಆದರೆ ಬದುಕಿಗಾಗಿ ಪ್ರೀತಿಯನ್ನು ಬಲಿ ಕೊಡಬಾರದು.

ಇದು ದ್ವಿತೀಯ ಮಹಾಯುದ್ಧ ಕಾಲದಲ್ಲಿ ನಡೆದ ಒಂದು ಕಥೆ.

ಇಬ್ಬರು ಯೋಧರು ಅತ್ಯಂತ ಸ್ನೇಹಿತರಾಗಿದ್ದರು. ಗೆಳೆತನ ಅಂದರೆ ಇದು ಎನ್ನಬಹುದಾದಂಥ ಸ್ನೇಹ ಅವರ ನಡುವಿನದು.
ಯುದ್ಧ ನಡೆ ಯುತ್ತಿತ್ತು. ಒಂದು ದಿನ ಸಂಜೆಯ ಹೊತ್ತಿಗೆ ಸೈನಿಕರೆಲ್ಲರೂ ಯುದ್ಧ ಭೂಮಿಯಿಂದ ಶಿಬಿರಕ್ಕೆ ಮರಳಿದರು. ಆದರೆ ಇಬ್ಬರು ಗೆಳೆಯರಲ್ಲಿ ಒಬ್ಬನಿಗೆ ತನ್ನ ಸ್ನೇಹಿತ ಬಂದಿಲ್ಲ ಎನ್ನುವುದು ಅರಿವಿಗೆ ಬಂತು. ಅನುದಿನವೂ ಅನೇಕರು ಯುದ್ಧದಲ್ಲಿ ಪ್ರಾಣ ತೆರುತ್ತಿದ್ದಾರೆ, ತನ್ನ ಗೆಳೆಯನೂ ಹಾಗೆ ಸತ್ತನೇನೋ ಎಂಬ ಸಂಶಯ ಇನ್ನೊಬ್ಬ ಯೋಧನಿಗೆ.

ಆತ ಕಳವಳದಿಂದ ಶಿಬಿರದೆಲ್ಲೆಡೆ ಓಡಾಡಿ ಹಲವರನ್ನು ವಿಚಾರಿಸಿದ. ಕೆಲವರು ಹೇಳಿದರು, “ಅವನನ್ನು ಮಧ್ಯಾಹ್ನದಿಂದೀಚೆಗೆ ಕಂಡಿಲ್ಲ. ಪ್ರಾಯಃ ಸತ್ತಿರಬಹುದು.’ ಒಬ್ಬ ಸೈನಿಕ ಮಾತ್ರ, “ಆತ ಸತ್ತಿದ್ದಾನೆಯೋ ಇಲ್ಲವೋ ಖಚಿತವಾಗಿ ಗೊತ್ತಿಲ್ಲ. ಆದರೆ ಆತ ತೀವ್ರ ವಾಗಿ ಗಾಯಗೊಂಡು ಬಿದ್ದಿರುವುದನ್ನು ಸಂಜೆಯ ಹೊತ್ತಿಗೆ ಕಂಡಿದ್ದೇನೆ. ಇಷ್ಟು ಹೊತ್ತಿಗೆ ರಕ್ತಸ್ರಾವವಾಗಿ ಸತ್ತುಹೋಗಿರಲೂ ಬಹುದು’ ಎಂದ.

ಕತ್ತಲು ಸರಿಯುತ್ತಿತ್ತು. ಅಲ್ಲಲ್ಲಿ ಗುಂಡಿನ ಮೊರೆತ ಕೇಳಿಸುತ್ತಿತ್ತು. ಈ ಸೈನಿಕನಿಗೆ ಗೆಳೆಯನನ್ನು ಕರೆತರುವ ಆಸೆ. ಆತ ಜೀವಂತವಾಗಿರಬಹುದು ಎಂಬ ಕುಟುಕು ಆಸೆ. ಆ ರಾತ್ರಿಯಲ್ಲೇ ಮತ್ತೆ ಯುದ್ಧಭೂಮಿಯತ್ತ ಹೊರಡಲು ಆತ ಮುಂದಾದ.
ಮೇಲಧಿಕಾರಿಗಳು ಬುದ್ಧಿವಾದ ಹೇಳಿದರು, “ಬೇಡ, ಈಗ ಹೋಗಬೇಡ. ನಾಳೆ ನೋಡೋಣ. ನೀನು ಹೋದರೆ ಶತ್ರುಗಳ ದಾಳಿಗೆ ಸಿಲುಕುತ್ತೀ. ನೀನೂ ಗಾಯಗೊಳ್ಳುತ್ತೀ… ಬೇಡ, ಹೋಗಬೇಡ.’ ಆದರೆ ಈತ ಕೇಳದೆ ಶಿಬಿರದಿಂದ ಹೊರಗಡಿಯಿರಿಸಿದ.

ತುಂಬಾ ರಾತ್ರಿಯಾಗಿತ್ತು. ಯುದ್ಧಭೂಮಿಯಲ್ಲಿ ಎಲ್ಲೆಡೆ ಶವಗಳು ಬಿದ್ದಿದ್ದವು. ಕತ್ತಲು ಬೇರೆ. ಹುಡುಕುವುದು ತುಂಬಾ ಕಷ್ಟ. ಆಗೀಗ ಗುಂಡುಗಳು ತೂರಿ ಬರುತ್ತಿದ್ದವು.

ಸೈನಿಕ ತನ್ನ ಸ್ನೇಹಿತ ನಿಗಾಗಿ ಹುಡುಕಾಡಿದ. ಕೊನೆಗೆ ನಟ್ಟಿರುಳಿನಲ್ಲಿ ಗೆಳೆಯನ ಶವವನ್ನು ಬೆನ್ನ ಮೇಲೆ ಹೊತ್ತುಕೊಂಡು ತೂರಾಡುತ್ತ ಶಿಬಿರ ತಲುಪಿದ. ಅವನಿಗೂ ಗುಂಡೇಟು ತಗುಲಿತ್ತು, ಮೈಯಿಂದ ರಕ್ತ ಸೋರುತ್ತಿತ್ತು. ಶಿಬಿರದ ಬಾಗಿಲಿನ ಬಳಿಗೆ ಬಂದವನೇ ಗೆಳೆಯನ ಶವವನ್ನು ಇಳುಹಿ ತಾನೂ ಅದರ ಪಕ್ಕದಲ್ಲಿ ಉರುಳಿಕೊಂಡ. ಜೀವ ಹೋಗುವುದು ಆಗಲೋ ಈಗಲೋ ಎಂಬಂತಿತ್ತು.

ಮೇಲಧಿಕಾರಿಗಳು ಮತ್ತು ಜತೆಯ ಸೈನಿಕರು ಸುತ್ತ ನೆರೆದರು. ಮೇಲಧಿಕಾರಿ ಹೇಳಿದ, “ನಾನು ಆಗಲೇ ಹೇಳಿದ್ದೆ, ಇದು ಮೂರ್ಖತನದ ಕೆಲಸ. ಹೋಗಬೇಡ ಎಂದು. ನೋಡೀಗ, ನಾವು ನಿನ್ನನ್ನೂ ಕಳೆದುಕೊಳ್ಳುವಂತಾಯಿತು. ನಿನ್ನ ಗೆಳೆಯ ಸತ್ತಿದ್ದಾನೆ, ನೀನೂ ಸಾಯುತ್ತಿದ್ದೀ…’

ಕುಟುಕು ಜೀವ ಹಿಡಿದುಕೊಂಡಿದ್ದ ಯೋಧ ಕಣ್ತೆರೆದು, “ಆದರೆ ನನ್ನ ಪಾಲಿಗೆ ಅದು ಅಮೂಲ್ಯವಾಗಿತ್ತು. ನೀನು ಬಂದೇ ಬರುತ್ತೀ ಎಂಬುದು ಗೊತ್ತಿತ್ತು ಗೆಳೆಯಾ ಎಂದು ಹೇಳಿಯೇ ಇವನು ಜೀವ ತೊರೆದದ್ದು’ ಎಂದ.

ಪ್ರೀತಿಗಾಗಿ ಪ್ರಾಣವನ್ನೂ ಕೊಡಬಹುದು. ನಾವು ಇದುವರೆಗೆ ತಿಳಿದುಕೊಂಡದ್ದು ಎಂದರೆ, ಬದುಕುವುದಕ್ಕಾಗಿ ಎಲ್ಲವನ್ನೂ ಬಲಿ ಕೊಡಬಹುದು, ತ್ಯಾಗ ಮಾಡಬಹುದು, ಜೀವಿಸುವುದಕ್ಕಾಗಿ ಎಲ್ಲವನ್ನೂ ತೊರೆಯಬಹುದು. ಆದರೆ ನಿಜ ಹಾಗಲ್ಲ; ಪ್ರೀತಿಗಾಗಿ ಎಲ್ಲವನ್ನೂ – ಜೀವನವನ್ನು ಕೂಡ ಅರ್ಪಿಸಬಹುದು.

( ಸಾರ ಸಂಗ್ರಹ)

ಟಾಪ್ ನ್ಯೂಸ್

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.