ಚೆನ್ನೈಯಲ್ಲೇ ಉಳಿಯಲಿದ್ದಾರೆ ಮಹೇಂದ್ರ ಸಿಂಗ್ ಧೋನಿ
Team Udayavani, Oct 17, 2021, 10:07 PM IST
ಹೊಸದಿಲ್ಲಿ: ಮುಂದಿನ ವರ್ಷದ ಐಪಿಎಲ್ಗಾಗಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.ಹೆಚ್ಚಿನ ಆಟಗಾರರ ಸ್ಥಾನಪಲ್ಲಟವಾಗಲಿದೆ. ಇದಕ್ಕೆ ಸ್ಟಾರ್ ಆಟಗಾರರೂ ಹೊರತಲ್ಲ. ರಾಹುಲ್ ಆರ್ಸಿಬಿ ಸೇರ ಬಹುದೆಂಬ ಗುಸುಗುಸು ಕೇಳಿ ಬರುತ್ತಿದೆ.
ಎಸ್ಆರ್ಎಚ್ನಿಂದ ಕಡೆಗಣಿಸಲ್ಪಟ್ಟ ವಾರ್ನರ್ ಅವರನ್ನು ಬೇರೊಂದು ಫ್ರಾಂಚೈಸಿ ಸೆಳೆಯುವ ಸಾಧ್ಯತೆ ಇದೆ.
ಈ ನಡುವೆ “ಯೆಲ್ಲೊ ಆರ್ಮಿ’ ಚೆನ್ನೈ ಸೂಪರ್ ಕಿಂಗ್ಸ್ಗೆ 4ನೇ ಐಪಿಎಲ್ ಟ್ರೋಫಿ ತಂದಿತ್ತ ಮಹೇಂದ್ರ ಸಿಂಗ್ ಧೋನಿ ಇನ್ನೂ ಒಂದು ವರ್ಷ ಐಪಿಎಲ್ನಲ್ಲಿ ಮುಂದು ವರಿಯುವುದು ಖಾತ್ರಿಯಾಗಿದೆ. ಅಂದ ಮೇಲೆ ಅವರು ಚೆನ್ನೈ ಬಿಟ್ಟು ಹೋಗಲಾರರು ಎಂಬುದೂ ನಿಜ. ಈ ಬಗ್ಗೆ ಸುಳಿವು ನೀಡಿ ರುವ ಸಿಎಸ್ಕೆ ಫ್ರಾಂಚೈಸಿ, ಧೋನಿಗೆ ಮೊದಲ “ರಿಟೆನ್ಶನ್ ಕಾರ್ಡ್’ (ಆಟಗಾರರನ್ನು ಉಳಿಸಿ ಕೊಳ್ಳುವುದನ್ನು ಖಾತ್ರಿಗೊಳಿಸುವ ಪ್ರಕ್ರಿಯೆ) ನೀಡಲಾಗುವುದು ಎಂದಿದೆ.
ಇದನ್ನೂ ಓದಿ:ಡ್ರಗ್ಸ್ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್ ಸೂದ್
“ನಾವು ಎಷ್ಟು ಮಂದಿ ಆಟಗಾರರನ್ನು ಉಳಿಸಿಕೊಳ್ಳಲಿದ್ದೇವೆ ಎಂಬುದು ಇನ್ನಷ್ಟೇ ಅಂತಿಮವಾಗಬೇಕಿದೆ. ಆದರೆ ಮೊದಲ ರಿಟೆನ್ಶನ್ ಕಾರ್ಡ್ ಧೋನಿಗೇ ನೀಡಲಾಗು ವುದು. ಆದರೆ ಈ ಸಂದರ್ಭದಲ್ಲಿ ಐಪಿಎಲ್ ನಿಯಮವನ್ನೂ ಗಮನಿಸಬೇಕಾಗುತ್ತದೆ ಎಂದು ಸಿಎಸ್ಕೆ ಮೂಲವೊಂದು ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ