ಗೋವಾ: ನರಕಾಸುರನ ದಹನಕ್ಕೆ ಭರ್ಜರಿ ಸಿದ್ದತೆ
Team Udayavani, Nov 1, 2021, 5:04 PM IST
ಪಣಜಿ: ಗೋವಾ ರಾಜ್ಯಾದ್ಯಂತ ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದಂದು ಬೆಳಗಿನ ಜಾವ ನರಕಾಸುರನ ದಹನ ಮಾಡುವ ಪದ್ಧತಿ ರಾಜ್ಯದಲ್ಲಿ ಹಿಂದಿನಿಂದಲೂ ನಡೆದುಬಂದಿದೆ.
ರಾಜ್ಯಾದ್ಯಂತ ಗಲ್ಲಿಗಳಲ್ಲಿ ನರಕಾಸುರನ ಪ್ರತಿಮೆ ಸಿದ್ಧಪಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ವಿವಿದೆಡೆ ನರಕಾಸುವ ಸ್ಫರ್ಧೆಯನ್ನೂ ಆಯೋಜಿಸಲಾಗಿದೆ. ದೀಪಾವಳಿ ಹಬ್ಬದ ಮುನ್ನಾದಿನ ಅಂದರೆ ನರಕ ಚತುರ್ದಶಿಯಂದು ರಾತ್ರಿಯಿಡೀ ರಾಜ್ಯಾದ್ಯಂತ ನರಕಾಸುರನ ಪ್ರದರ್ಶನ ನಡೆಯಲಿದ್ದು, ಮರುದಿನ ಅಂದರೆ ಹಬ್ಬದ ದಿನ ಬೆಳಗಿನ ಜಾವ ನರಕಾಸುರನ ದಹನ ಮಾಡಿ ಅಭ್ಯಂಗ ಸ್ನಾನ ಮಾಡಿ ಹಬ್ಬದ ಆಚರಣೆ ನಡೆಸುವ ಪದ್ಧತಿ ನಡೆದುಬಂದಿದೆ.
ರಾಜ್ಯಾದ್ಯಂತ ನರಕಾಸುರ ಪ್ರತಿಮೆ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, ನರಕಾಸುರನ ದಹನಕ್ಕೆ ಇನ್ನು ಎರಡೇ ದಿನ ಬಾಕಿ ಉಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ