Vitla: ಬಸ್ ಡ್ರೈವರ್ ಹೃದಯಾಘಾತದಿಂದ ನಿಧನ
Team Udayavani, Jun 17, 2023, 2:02 PM IST
ವಿಟ್ಲ: ಖಾಸಗಿ ಬಸ್ ಡ್ರೈವರ್ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಕನ್ಯಾನ ಬಂಡಿತ್ತಡ್ಕ ಸಮೀಪ ನಡೆದಿದೆ.
ಕನ್ಯಾನ ಬಂಡಿತ್ತಡ್ಕ ನಿವಾಸಿ ರಮೇಶ್ (42) ಮೃತಪಟ್ಟವರು.
ರಮೇಶ್ ಅವರು ಖಾಸಗಿ ಬಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.