Karnataka: ದೇವಾಲಯಗಳ ಮೇಲಿನ ಸರಕಾರದ ಕಪಿಮುಷ್ಟಿಗೆ ಕೊನೆ ಎಂದು?


Team Udayavani, Jan 29, 2024, 7:00 AM IST

vidhana soudha

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಎ ವರ್ಗದ ಅನೇಕ ದೇಗುಲಗಳ ವ್ಯವಸ್ಥಾಪನ ಮಂಡಳಿಯ ಅವಧಿ ಮುಗಿದಿದ್ದು ಹೊಸ ಸಮಿತಿ ರಚನೆಯ ಉದ್ದೇಶದಿಂದ ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ಆಡಳಿತದಲ್ಲಿರುವ ಸರಕಾರ ತನ್ನ ಪಕ್ಷದ ನಂಟಿರುವವರನ್ನೇ ಈ ಸಮಿತಿಗೆ ನೇಮಿಸುವುದು ಸಾಮಾನ್ಯ. ಡೊಡ್ಡ ದೇವಾಲಯಗಳ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲು ತೆರೆಮರೆಯಲ್ಲಿ ಈಗಾಗಲೇ ರಾಜಕಾರಣಿಗಳ ಹಗ್ಗ ಜಗ್ಗಾಟ ನಡೆದಿರುವ ವರದಿ ಇದೆ. ಹಿಂದೂ ದೇವಾಲಯಗಳಲ್ಲಿ ರಾಜಕಾರ ಣಿಗಳ ಪಾರುಪತ್ಯಕ್ಕೆ ಕೊನೆ ಯಾವಾಗ ಎನ್ನುವ ಪ್ರಶ್ನೆ ಆಗಾಗ್ಗೆ ಮುನ್ನೆಲೆಗೆ ಬರುತ್ತಿರುತ್ತದೆ.

ದೇವರ ಅಸ್ತಿತ್ವವನ್ನೇ ನಂಬದ ನಾಸ್ತಿಕ/ಸೆಕ್ಯುಲರ್‌ ಸರಕಾರಗಳೂ ಆಸ್ತಿಕರ ಶ್ರದ್ಧಾಕೇಂದ್ರಗಳಾದ ದೇವಾಲಯಗಳನ್ನು ನಿಯಂತ್ರಿಸುತ್ತಾ ಬಂದಿವೆ. ರಾಜಕಾರಣಿಗಳು ತಮ್ಮ ಚೇಲಾಗಳನ್ನು ಧರ್ಮದರ್ಶಿಗಳ ಕುರ್ಚಿಯಲ್ಲಿ ಆಸೀನರಾಗುವಂತೆ ಮಾಡಲು ನಡೆಸುವ ಗುದ್ದಾಟ ಇತ್ತೀಚೆಗಂತೂ ರೇಜಿಗೆ ಹುಟ್ಟಿಸುವಷ್ಟು ಮೇರೆ ಮೀರಿದೆ. ಸರಕಾರದಿಂದ ನೇಮಕಗೊಳ್ಳುವ ಧರ್ಮದರ್ಶಿಗಳು ತಮ್ಮ ನೇಮಕದೊಂದಿಗೆ ಅಭಿನಂದನೆಯ ದೊಡ್ಡ ಕಟೌಟುಗಳನ್ನು ಹಾಕಿ ಕೊಳ್ಳುವುದು, ಕ್ಷೇತ್ರಕ್ಕೆ ಬರುವ ಗಣ್ಯರೊಂದಿಗೆ ಫೋಟೋಗೆ ಪೋಸು ಕೊಡುವುದರಲ್ಲಿ ಸಂತೋಷ ಕಾಣುವುದನ್ನು ನಾವು ಕಾಣುತ್ತಲೇ ಬಂದಿದ್ದೇವೆ!

ಪ್ರಮುಖ ಹಿಂದೂ ದೇವಾಲಯಗಳು ವರ್ಷದಿಂದ ವರ್ಷಕ್ಕೆ ಆದಾಯ ವೃದ್ಧಿ ದಾಖಲಿಸಿದರೂ ಕ್ಷೇತ್ರದಲ್ಲಿ ಯಾತ್ರಿಕರ ಸೌಲಭ್ಯ ಮಾತ್ರ ಸುಧಾರಣೆ ಕಾಣದೇ ನೂರಾರು ಕಿಲೋ ಮೀಟರ್‌ ದೂರದಿಂದ ಬರುವ ಬಡ ಯಾತ್ರಿಕರು ಅರೆ ಹೊಟ್ಟೆ ಉಣ್ಣಬೇಕಾದ, ಯಾವುದೋ ಅಂಗಡಿ-ಮುಂಗಟ್ಟುಗಳ ಮುಂದೆ ರಾತ್ರಿ ಕಳೆದು ಹೋಗಬೇಕಾದ ಸ್ಥಿತಿ ಇದೆ. ಶೌಚ, ಸ್ನಾನಾದಿಗಳಂತಹ ಮೂಲಸೌಲಭ್ಯವಂತೂ ಕೇಳಲೇಬಾರದು ಎನ್ನುವಂತಿದೆ. ತುಂಬಿ ಹರಿಯುವ ಗಠಾರಗಳು, ನೈರ್ಮಲ್ಯವಿಲ್ಲದ ಬೀದಿಗಳು, ಪಾರ್ಕಿಂಗ್‌ ಸೌಲಭ್ಯವಿಲ್ಲದ ವಸತಿ ಸಮುಚ್ಚಯಗಳು. ತಾಪತ್ರಯ ಒಂದೆರಡಲ್ಲ.

ಆದರೆ ಕರಾವಳಿ ಜಿಲ್ಲೆಗಳಲ್ಲಿ ಸರಕಾರದ ನಿಯಂತ್ರಣದಿಂದ ಹೊರತಾದ ಕೆಲವು ದೇಗುಲಗಳಲ್ಲಿ ಅತ್ಯುತ್ತಮ ಎನಿಸುವ ವ್ಯವಸ್ಥೆ ಕಂಡವರ ಮನದಲ್ಲಿ ಸರಕಾರಿ ನಿಯಂತ್ರಣದ ಔಚಿತ್ಯದ ಪ್ರಶ್ನೆ ಸ್ವಾಭಾವಿಕವಾಗಿಯೇ ಉದಿಸದೇ ಇರದು. ಅಷ್ಟು ಮಾತ್ರವಲ್ಲದೆ ಭಕ್ತರಿಗೆ ಆವಶ್ಯವಿರುವ ಮೂಲಸೌಕರ್ಯ, ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆಗಳೊಂದಿಗೆ ಈ ದೇಗುಲಗಳು ಭಕ್ತರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಈ ದೇಗುಲಗಳನ್ನು ಸಂದರ್ಶಿಸಿದ ಭಕ್ತರು ಕೂಡ ನೆಮ್ಮದಿಯಿಂದ ದೇವರ ದರ್ಶನಗೈದು ನಿರಾಳರಾಗಿ ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಗುಲಗಳು ಯಾವುದೇ ಹಣಕಾಸು ಅಕ್ರಮಗಳಿಗೆ ಎಡೆ ಇಲ್ಲದಂತೆ ಪಾರದರ್ಶಕವಾಗಿ ಕಾರ್ಯ ನಿರ್ವಹಿ ಸುತ್ತಿರುವುದು ಇವುಗಳ ಮತ್ತೂಂದು ಹೆಗ್ಗಳಿಕೆ.

ಈ ಹಿನ್ನೆಲೆಯಲ್ಲಿ ಆಗಾಗ್ಗೆ ಹಿಂದೂ ದೇವಾ ಲಯಗಳ ಮೇಲೆ ಸರಕಾರದ ನಿಯಂತ್ರಣ ಕೊನೆಗೊಳ್ಳಲಿ ಎನ್ನುವ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ದೇವಾಲಯಗಳ ಹುಂಡಿಯ ಹಣವನ್ನು ಸರಕಾರ ದುರುಪಯೋಗ ಪಡಿಸಿ ಕೊಳ್ಳುತ್ತಿದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಹುಂಡಿಯ ಹಣದಲ್ಲಿ ವಾಹನಗಳನ್ನು ಖರೀದಿಸುವುದು ಹಾಗೂ ಅದನ್ನು ಅಧಿಕಾರಿಗಳು ಮತ್ತೆಲ್ಲೋ ಬಳಕೆ ಮಾಡಿಕೊಳ್ಳುವ ದೃಷ್ಟಾಂತಗಳು ಆಗಾಗ್ಗೆ ಕೇಳಿ ಬರುವುದು ಆಸ್ತಿಕರ ಕೆಂಗಣ್ಣಿಗೆ ಕಾರಣವಾಗಿದೆ. ದೇವಾಲಯಗಳ ಆದಾಯ ಅಲ್ಲಿನ ಮೂಲಸೌಕರ್ಯ ವೃದ್ಧಿ, ದಾಸೋಹ ಮತ್ತಿತರ ಸತ್ಕಾರ್ಯಗಳಿಗೆ ವಿನಿಯೋಗವಾಗಲಿ ಎನ್ನುವ ಭಕ್ತರ ಕೂಗು ತಥ್ಯವಿಲ್ಲದ್ದೇನಲ್ಲ.

ಕರಾವಳಿ ಜಿಲ್ಲೆಗಳ ಸರಕಾರದ ನಿಯಂತ್ರಣದಿಂದ ಹೊರತಾದ ಕೆಲವು ದೇಗುಲಗಳಲ್ಲಿ ಅತ್ಯುತ್ತಮ ಎನಿಸುವ ವ್ಯವಸ್ಥೆ ಕಂಡವರ ಮನದಲ್ಲಿ ಸರಕಾರಿ ನಿಯಂತ್ರಣದ ಔಚಿತ್ಯದ ಪ್ರಶ್ನೆ ಸ್ವಾಭಾವಿಕವಾಗಿಯೇ ಉದಿಸದೇ ಇರದು.

ಇಹದ ಬದುಕಿನಲ್ಲಿ ಶಾಂತಿ ಹಾಗೂ ಪರದಲ್ಲಿ ಮೋಕ್ಷಕ್ಕಾಗಿಯೇ ಮನುಷ್ಯ ಧರ್ಮ-ದೇವರ ಶರಣು ಹೋಗುವುದು ಸಾಮಾನ್ಯ. ವಿಜ್ಞಾನ- ತಂತ್ರಜ್ಞಾನ ಅದೆಷ್ಟು ಮುಂದುವರಿದರೂ ಅಲೌಕಿಕ ಶಕ್ತಿಯ ಅಗಾಧತೆಯನ್ನು ಅರಿಯಲು ಮನುಷ್ಯನಿಗೆ ಸಾಧ್ಯವಾಗಿಲ್ಲ. ಆದ್ದರಿಂದಲೇ ದೇವರ ಆಲಯಗಳು ಭಕ್ತ ಸಾಗರದಿಂದ ತುಂಬಿ ತುಳುಕುತ್ತಿವೆ. ಧರ್ಮವನ್ನು ನಾಗರಿಕರ ಖಾಸಗಿ ಬದುಕು ಎನ್ನುವುದನ್ನು ಸಂವಿಧಾನ ಒಪ್ಪಿದರೂ ಸರಕಾರದ ಹಿಡಿತದಲ್ಲಿ ಸಿಲುಕಿ ನಮ್ಮ ದೇವಾಲಯಗಳು ಅವ್ಯವಸ್ಥೆಯ ಆಗರವಾಗಿವೆ. ದೇವಾಲಯಗಳ ವ್ಯವಸ್ಥಾಪನ ಮಂಡಳಿಗಳಿಗೆ ನೇಮಕವಾಗುವವರು ತಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆಗಮಿಸುವ ಭಕ್ತರಲ್ಲಿ ದೇವರನ್ನು ಕಾಣುವಂತಾಗಲಿ.

ಹಿಂದೂ ದೇವಾಲಯಗಳ ಮೇಲೆ ಸರಕಾರದ ನಿಯಂತ್ರಣ ಕೊನೆಗೊಳ್ಳಲಿ ಎನ್ನುವ ಕೂಗು ಹೊಸದೇನಲ್ಲ. ದೇವಾಲಯಗಳ ಹುಂಡಿಯ ಹಣವನ್ನು ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎನ್ನುವ ಆರೋಪವೂ ಇಂದು ನಿನ್ನೆಯದಲ್ಲ. ದೇವಾಲಯಗಳ ಆದಾಯ ಅಲ್ಲಿನ ಮೂಲಸೌಕರ್ಯ ವೃದ್ಧಿ, ದಾಸೋಹ ಮತ್ತಿತರ ಸತ್ಕಾರ್ಯಗಳಿಗೆ ವಿನಿಯೋಗವಾಗಲಿ ಎನ್ನುವ ಭಕ್ತರ ಆಗ್ರಹ ಸದುದ್ದೇಶದಿಂದ ಕೂಡಿದ್ದಾಗಿದೆ. ಸರಕಾರದ ನಿಯಂತ್ರಣದಿಂದ ಹೊರತಾದ ಕರಾವಳಿ ಜಿಲ್ಲೆಗಳಲ್ಲಿನ ಕೆಲವು ದೇಗುಲಗಳಲ್ಲಿರುವ ಅತ್ಯುತ್ತಮ ಎನಿಸುವ ವ್ಯವಸ್ಥೆಯನ್ನು ಕಂಡವರ ಮನದಲ್ಲಿ ಸರಕಾರಿ ನಿಯಂ ತ್ರಣದ ಔಚಿತ್ಯದ ಬಗ್ಗೆ ಪ್ರಶ್ನೆ ಮೂಡದೇ ಇರಲಾರದು.

 ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.