20 ವರ್ಷ ಹಿಂದಿನ ಮಟ್ಟಕ್ಕೆ ಬಡತನ
Team Udayavani, May 23, 2020, 11:34 AM IST
ಜಿನೀವಾ : ಕೋವಿಡ್ನಿಂದಾಗಿ ಜನರು ಬಡತನ ಮತ್ತು ಹಸಿವಿನಿಂದ ಬಳಲಿದ್ದಾರೆಂದು ವಿಶ್ವ ಬ್ಯಾಂಕ್ ಹಂಚಿಕೊಂಡಿರುವ ಮಾಹಿತಿಯೊಂದರಿಂದ ತಿಳಿದು ಬಂದಿದೆ. ಜಗತ್ತಿನಾದ್ಯಂತ ಸುಮಾರು 6 ಕೋಟಿ ಜನರು ಹೊಸದಾಗಿ ಬಡತನ ರೇಖೆಯ ವ್ಯಾಪ್ತಿಗೆ ಬರಲಿದ್ದಾರೆ ಹಾಗೂ ಹಸಿವು ಹೆಚ್ಚಲಿದೆ ಎಂಬ ಅಂಶ ಈ ಮಾಹಿತಿಯಲ್ಲಿದೆ.
20 ವರ್ಷಗಳ ಬಳಿಕ ಹೆಚ್ಚಳ
ಸದ್ಯದ ಪರಿಸ್ಥಿತಿಯನ್ನು ಮಹಾಬಿಕ್ಕಟ್ಟು ಎಂದು ವಿಶ್ವ ಬ್ಯಾಂಕ್ ಪರಿಗಣಿಸಿದ್ದು, ಮುಂಬರುವ ದಿನಗಳಲ್ಲಿ ಹಲವು ಉದ್ಯಮಗಳು ಮುಚ್ಚುವ ಲಕ್ಷಣಗಳು ಗೋಚರವಾಗುತ್ತಿವೆ ಎಂಬ ಎಚ್ಚರಿಕೆ ನೀಡಿದೆ. ಇದರ ಪರಿಣಾಮ 1998ರ ನಂತರ ಮೊದಲ ಬಾರಿಗೆ ಜಾಗತಿಕವಾಗಿ ಬಡವರ ಪ್ರಮಾಣ ಹೆಚ್ಚಳವಾಗುತ್ತದೆ. ಇತ್ತೀಚೆಗಷ್ಟೇ ಬಹಿರಂಗಗೊಳಿಸಿರುವ ಅಂಕಿಅಂಶಗಳು ಸದ್ಯದಲ್ಲೇ ವಾಸ್ತವದಲ್ಲಿ ಕಾಣಲಿದೆ ಎಂದು ಹೇಳಿದೆ.
ಆಫ್ರಿಕಕ್ಕೆ ಹೆಚ್ಚು ಸಂಕಟ
ಸೋಂಕಿನಿಂದ ನಲುಗಿರುವ ಆಫ್ರಿಕ ಖಂಡದಲ್ಲಿ ಸಮಸ್ಯೆಗಳ ತೀವ್ರತೆ ಹೆಚ್ಚಾಗುತ್ತಲೇ ಇದ್ದು, ಸಹಾರ ಉಪಖಂಡದ ಜನರು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಕುರಿತು ವಿಶ್ವಸಂಸ್ಥೆ ಆಫ್ರಿಕನ್ ಕಮಿಷನ್ ಆನ್ ಹ್ಯೂಮನ್ ಆ್ಯಂಡ್ ಪೀಪಲ್ಸ… ರೈಟ್ಸ್ನ ಅಧ್ಯಕ್ಷ ಸೊಲೊಮನ್ ಡೆಸೊರ್ ಸಾಂಕ್ರಾಮಿಕ ರೋಗಗಳ ನೆಲೆಯಾಗಿರುವ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಶಕ್ತವಾಗಿರುವ ಆಫ್ರಿಕ ದೇಶಗಳ ಸ್ಥಿರತೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬ ಭರವಸೆಯ ನುಡಿಗಳನ್ನಾಡಿದ್ದಾರೆ. ಆದರೂ ವಿಶ್ವ ಬ್ಯಾಂಕಿನ ಪ್ರಕಾರ 100 ದೇಶಗಳ ಪೈಕಿ 39 ದೇಶಗಳ ಕನಿಷ್ಠ 2.3 ಕೋಟಿ ನಿವಾಸಿಗಳು ಕೋವಿಡ್ನಿಂದ ಕಡು ಬಡತನದತ್ತ ಸಾಗುವ ನಿರೀಕ್ಷೆಯಿದೆ.
ದಕ್ಷಿಣ ಏಷ್ಯಾವೂ ಇದೇ ಹಾದಿಯತ್ತ ಸಾಗುತ್ತಿದ್ದು, ನೈಜೀರಿಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದ ಜತೆಗೆ ಭಾರತದಲ್ಲಿಯೂ ಬಡವರ ಪ್ರಮಾಣದಲ್ಲಿ ಅತಿದೊಡ್ಡ ಬದಲಾವಣೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
ಈ ಮಹಾಬಿಕ್ಕಟ್ಟಿನ ವಿರುದ್ಧ ಹೋರಾಡಲು ವೈಯಕ್ತಿಕ ಮತ್ತು ವ್ಯವಹಾರ ಉದ್ಯಮ ಕ್ಷೇತ್ರಗಳಿಗೆ ಅನುದಾನ ಮತ್ತು ಸಾಲಗಳನ್ನು ನೀಡುವ ಮೂಲಕ ದುರ್ಬಲ ಸಮುದಾಯಗಳಿಗೆ ಸಹಾಯ ಮಾಡುವುದರ ಜತೆಗೆ ವಿಶ್ವದ ಕೆಲವು ಬಡ ದೇಶಗಳಿಗೆ ಸಾಲ ಪಾವತಿಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ