ದಿನವೂ ಯೋಗ ಮಾಡಿದರೆ ಏನು ಲಾಭ?
Team Udayavani, Jun 21, 2020, 11:00 AM IST
– ಸೂರ್ಯ ನಮಸ್ಕಾರ ಮತ್ತು ಕಪಾಲಭಾತಿ ಪ್ರಾಣಾಯಾಮ ತೂಕ ಕಳೆದುಕೊಳ್ಳಲು ಬಲು ಉಪಯುಕ್ತಕರ. ಯೋಗಾಭ್ಯಾಸದಿಂದ ನಾವು ನಮ್ಮ ದೇಹದ ಬಗ್ಗೆ ಹೆಚ್ಚು ಅರಿಯುತ್ತೇವೆ. ಇದರಿಂದ ನಮ್ಮ ಆಹಾರ ಹಾಗೂ ದೇಹದ ತೂಕದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ.
– ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನವು ಸರ್ವಾಂಗೀಣ ಸುಸ್ಥಿತಿಯನ್ನು ಉಂಟು ಮಾಡುವ ಅಂಶಗಳು. ಯೋಗದ ನಿತ್ಯಾಭ್ಯಾಸದಿಂದ ಅನೇಕ ಲಾಭಗಳಿವೆ. ಆರೋಗ್ಯ ದಲ್ಲಿ ಸುಧಾರಣೆ, ಮಾನಸಿಕ ಬಲವರ್ಧನೆ, ದೈಹಿಕ ಬಲ ಹೆಚ್ಚಳದ ಜತೆಗೆ ದೇಹದಲ್ಲಿನ ವಿಷಕಾರಿ ಅಂಶಗಳ ನಿವಾರಣೆ.
– ಪ್ರಸ್ತುತ ದಿನಗಳಲ್ಲಿ ಒತ್ತಡ ನಿವಾರಣೆ ಬಹಳ ದೊಡ್ಡ ಸಮಸ್ಯೆ. ನಿತ್ಯವೂ ಕೆಲವು ನಿಮಿಷಗಳ ಕಾಲ ಯೋಗ ಮಾಡಿದರೆ ದೇಹ ಮತ್ತು ಮನಸ್ಸಿನಲ್ಲಿ ನಿತ್ಯ ಶೇಖರಣೆಯಾಗುವ ಒತ್ತಡದ ಬಿಡುಗಡೆಯಾಗುತ್ತದೆ. ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಒತ್ತಡ ನಿವಾರಣೆಗೆ ರಾಮಬಾಣ.
– ದೇಹದಲ್ಲಿ ಶಕ್ತಿ ವರ್ಧನೆಗೆ ಯೋಗ ಪೂರಕ. ಎಲ್ಲ ಕೆಲಸಗಳನ್ನೂ ಮಾಡಿ ಅಥವಾ ನಿರಂತರವಾಗಿ ಅನೇಕ ಕೆಲಸಗಳನ್ನು ಒಮ್ಮೆಲೇ ಮಾಡಿ ದಣಿಯುವುದು ಸಹಜ. ಪ್ರತಿದಿನ ಕೆಲವು ನಿಮಿಷಗಳ ಯೋಗಾಭ್ಯಾಸ ಮಾಡಿದರೆ ನಮ್ಮ ಶಕ್ತಿ ವರ್ಧಿಸುತ್ತದೆ, ನಮ್ಮನ್ನು ತಾಜಾ ಆಗಿ ಇಡುತ್ತದೆ.
– ಯೋಗದಿಂದ ಪ್ರೀತಿಪಾತ್ರರೊಡನೆ ನೀವು ಹೊಂದಿರುವ ಸಂಬಂಧ ಸುಧಾರಿಸುತ್ತದೆ. ಸಂತೋಷದಿಂದಿರುವ ಮತ್ತು ತೃಪ್ತವಾಗಿರುವ ಮನಸ್ಸು ಸಂಬಂಧಗಳಲ್ಲಿನ ಸೂಕ್ಷ್ಮ ವಿಷಯಗಳನ್ನು ನಿರ್ವಹಿಸಬಲ್ಲುದು. ಯೋಗ ಮತ್ತು ಧ್ಯಾನವು ಮನಸ್ಸನ್ನು ಸಂತೋಷವಾಗಿರಿಸಿ, ಶಾಂತಿ ಒದಗಿಸುತ್ತದೆ.
– ದೇಹ, ಮನಸ್ಸು ಮತ್ತು ಆತ್ಮ ಒಂದಾಗಿ ಹೆಣೆಯಲ್ಪಟ್ಟಿದೆ. ದೇಹದಲ್ಲಿ ಅಸಮತೋಲನ ಉಂಟಾದರೆ ಅದು ಮನಸ್ಸನ್ನು ಬಾಧಿಸುತ್ತದೆ. ಮನಸ್ಸಿನಲ್ಲಿ ಅಹಿತ ಭಾವನೆ ಉಂಟಾದರೆೆ ಅದು ದೇಹ ದಲ್ಲಿ ರೋಗವಾಗಿ ಪ್ರಕಟವಾಗುತ್ತದೆ. ಯೋಗಾಸನಗಳು ಅವಯವ ಗಳನ್ನು ತೀಡುತ್ತವೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತವೆ.
– ಯೋಗ ಮತ್ತು ಧ್ಯಾನಕ್ಕೆ ನಿಮ್ಮ ಅಂತರ್ದೃಷ್ಟಿಯ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯಿದೆ. ಏನು ಮಾಡಬೇಕು, ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂದು ನಿಮಗೆ ಸ್ವಯಂಸು#ರಿತವಾಗಿ ತಿಳಿಯುತ್ತದೆ. ಇದರಿಂದ ಸಕಾರಾತ್ಮಕವಾದ ಫಲಿತಾಂಶಗಳು ಸಿಗುತ್ತವೆ.
– ಮನಸ್ಸಿನ ನೆಮ್ಮದಿಗೂ ಯೋಗ ಸಹಕಾರಿ. ದಿನದ ಯಾವುದೇ ಸಮಯದಲ್ಲೂ ಕೈಗೊಳ್ಳಬಹುದು. ಪ್ರತಿನಿತ್ಯ ಸಣ್ಣ ಬಿಡುವು ಮಾಡಿಕೊಂಡು ಯೋಗ ಮತ್ತು ಧ್ಯಾನವನ್ನು ಮಾಡ ಬೇಕು. ಗೊಂದಲದ ಮನಸ್ಸನ್ನು ಪ್ರಶಾಂತಗೊಳಿಸಲು
ಇದು ಅತ್ಯುತ್ತಮ ದಾರಿ.
– ಬಲಿಷ್ಠ, ಮೃದು ಮತ್ತು ನಮ್ಯವಾದ ದೇಹ ನಿಮಗೆ ಬೇಕೆಂದರೆ ಯೋಗ ನಿಮ್ಮ ದಿನಚರಿಯ ಭಾಗವಾಗಬೇಕು. ನಿತ್ಯ ಯೋಗಾಭ್ಯಾಸ, ವ್ಯಾಯಾಮ ದೇಹದ ಸ್ನಾಯುಗಳನ್ನು ಸದೃಢಗೊಳಿಸಿ, ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ.
– ಸಂಜೀವಣ್ಣ ಕುಂದಾಪುರ, ಯೋಗ ಗುರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?