ಹ್ಯಾಟ್ರಿಕ್‌ ಆಕಸ್ಮಿಕ: ಸ್ಯಾಮ್‌ ಕರನ್‌


Team Udayavani, Apr 3, 2019, 6:01 AM IST

b-27

ಮೊಹಾಲಿ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋಲುವ ಹಂತದಲ್ಲಿದ್ದ ಪಂದ್ಯವನ್ನು ಜಯದ ದಡ ಸೇರಿಸಿದ ಕೀರ್ತಿ ಸಂದಿದ್ದು ಪಂಜಾಬ್‌ನ ಯುವ ಆಟಗಾರ ಸ್ಯಾಮ್‌ ಕರನ್‌ಗೆ. ಈ ಐಪಿಎಲ್‌ನ ಮೊದಲ ಹ್ಯಾಟ್ರಿಕ್‌ ಸಾಧನೆ ಮಾಡಿದ್ದು 20 ವರ್ಷದ ಕರನ್‌ ಕೊನೆಯ ಹಂತದಲ್ಲಿ ಪಂದ್ಯದ ಗತಿ ತಿರುಗಿಸಿದ ಪಂಜಾಬ್‌ಗ 14 ರನ್‌ಗಳ ನಂಬಲಸಾಧ್ಯ ಗೆಲುವು ದಕ್ಕಿಸಿಕೊಟ್ಟರು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಪಂಜಾಬ್‌ 9 ವಿಕೆಟಿಗೆ 166 ರನ್ನುಗಳ ಅಲ್ಪ ಮೊತ್ತ ದಾಖಲಿಸಿತು. ಡೆಲ್ಲಿ 19. 2 ಓವರ್‌ಗಳಲ್ಲಿ 152 ರನ್ನಿಗೆ ಅಲೌಟಾಗಿ ಸ್ಪಲ್ಪ ಅಂತರದಲ್ಲೇ ಪಂದ್ಯ ಕಳೆದುಕೊಂಡಿತು. ಉತ್ತಮ ಆರಂಭ ಪಡೆದಿದ್ದ ಡೆಲ್ಲಿ ಗೆಲುವಿಗೆ ಹತ್ತಿರವಿರಬೇಕಾದರೆ ಸತತ ವಿಕೆಟ್‌ ಕಳೆದುಕೊಂಡು ಪಂಜಾಬ್‌ಗ ಶರಣಾಗಿದೆ.

ಈ ಪಂದ್ಯದಲ್ಲಿ ಕರನ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದು ರೋಹಿತ್‌ ಶರ್ಮ ಅವರ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್‌ ಶರ್ಮ ಈ ಮೈಲುಗಲ್ಲನ್ನು ತನ್ನ 22ನೇ ವರ್ಷದಲ್ಲಿ ಸಾಧಿಸಿದ್ದರು. ಕರನ್‌ 11ಕ್ಕೆ 4 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಈ ಬಗ್ಗೆ ಮಾತನಾಡಿದ ಸ್ಯಾಮ್‌ ಕರನ್‌ ಹ್ಯಾಟ್ರಿಕ್‌ ವಿಕೆಟ್‌ ಕಿತ್ತಿರುವ ವಿಷಯ ತಿಳಿದೇ ಇರಲಿಲ್ಲ ಎಂದಿದ್ದಾರೆ.

“ಹ್ಯಾಟ್ರಿಕ್‌ ಬಗ್ಗೆ ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ಪಂದ್ಯ ಗೆದ್ದ ಬಳಿಕ ನಮ್ಮ ಆಟಗಾರ ನನ್ನ ಬಳಿ ಬಂದು “ನೀನು ಹ್ಯಾಟ್ರಿಕ್‌ ವಿಕೆಟ್‌ ಕಿತ್ತೆ’ ಎಂದು ಹೇಳಿದಾಗಲೇ ನನಗೆ ಗೊತ್ತಾಗಿದ್ದು’ ಎಂದು ಹೇಳಿದ್ದಾರೆ.

ಜಿಂಬಾಬ್ವೆ ತಂಡದ ಮಾಜಿ ಅಲ್‌ರೌಂಡರ್‌ ಕೆವಿನ್‌ ಕರನ್‌ ಮತ್ತು ಇಂಗ್ಲೆಂಡ್‌ ತಂಡದ ಆಟಗಾರ ಟಾಮ್‌ ಕರನ್‌ ಅವರ ತಮ್ಮನಾಗಿರುವ ಸ್ಯಾಮ್‌ ಕರನ್‌ ಬೆನ್ನು ನೋವಿನಿಂದಾಗಿ ಪಂದ್ಯದಿಂದ ಹೊರಗುಳಿದ ಕ್ರಿಸ್‌ ಗೆಲ್‌ ಸ್ಥಾನಕ್ಕೆ ಬಂದಿದ್ದರು. ಮೊದಲ ಐಪಿಎಲ್‌ನ 2ನೇ ಪಂದ್ಯವನ್ನಾಡಿದ ಕರನ್‌ ಎಲ್ಲರಿಂದಲೂ ಸಾಕಷ್ಟು ಪ್ರಶಂಸೆ ಗಳಿಸಿದ್ದಾರೆ.

ಗೇಲ್‌ ಸ್ಥಾನವನ್ನು ಸ್ವಲ್ಪಮಟ್ಟಿಗೆ ತುಂಬಿದ ಕರನ್‌ ಇನ್ನಿಂಗ್ಸ್‌ ಆರಂಭಿಸಿ 10 ಎಸೆತಗಳಲ್ಲಿ 20 ರನ್‌ ಗಳಿಸಿದರು. ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿದ್ದರೂ ಕರನ್‌ 3 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿದರು. ಬೌಲಿಂಗ್‌ ವೇಳೆ ಕರನ್‌ ದಾಳಿ ಅಮೋಘವಾಗಿತ್ತು. ಕರನ್‌ ಬೌಲಿಂಗ್‌ ಮಾಡಿದ್ದು ಕೇವಲ 2.2 ಓವರ್‌. ಇದರಲ್ಲೇ ಅವರು ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ಸಂಭ್ರಮಿಸಿದ್ದಾರೆ. ಕರನ್‌ ಅವರ ಹ್ಯಾಟ್ರಿಕ್‌ ಸಾಧನೆ ಆರಂಭವಾಗಿದ್ದು 18ನೇ ಓವರ್‌ನಲ್ಲಿ. 17.6ನೇ ಎಸೆತದಲ್ಲಿ ಹರ್ಷಲ್‌ ಪಟೇಲ್‌ ಅವರ ವಿಕೆಟ್‌ ಕಿತ್ತು ಮೊದಲ ವಿಕೆಟ್‌ ಪಡೆದರು. ಆ ಬಳಿಕ 19ನೇ ಓವರ್‌ ಮೊಹಮ್ಮದ್‌ ಶಮಿ ಎಸೆದರು. ಪಂದ್ಯದ ಕೊನೆಯ ಓವರ್‌ ಹಾಕಿದ ಕರನ್‌ ಮೊದಲೆರಡು ಎಸೆತಗಳಲ್ಲಿ ಕಾಗಿಸೊ ರಬಾಡ ಮತ್ತು ಸಂದೀಪ್‌ ಲಮಿಶಾನೆ ಅವರ ವಿಕೆಟ್‌ ಕೀಳುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದರು.

21 ಎಸೆತದಲ್ಲಿ 23 ರನ್‌ ಬೇಕಿತ್ತು
ಡೆಲ್ಲಿಗೆ ಅಂತಿಮ 21 ಎಸೆತಗಳಲ್ಲಿ ಗೆಲ್ಲಲು ಕೇವಲ 23 ರನ್‌ ಬೇಕಿತ್ತು. 7 ವಿಕೆಟ್‌ ಕೂಡ ಕೈಯಲ್ಲಿತ್ತು. ಆದರೆ ಕರನ್‌ ಪಂದ್ಯದ ಗತಿಯನ್ನೇ ಬದಲಾಯಿಸಿ ಡೆಲ್ಲಿಗೆ ಅಘಾತವಿಕ್ಕಿದರು. ಡೆಲ್ಲಿ ಕೊನೆಯ 7 ವಿಕೆಟನ್ನು 8 ರನ್‌ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ಸುಲಭವಾಗಿ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತ್ತು. ಇದರಲ್ಲಿ 5 ಆಟಗಾರರು ಡಕ್‌ಔಟ್‌ ಆಗಿದ್ದಾರೆ.

ಬ್ಯಾಟಿಂಗ್‌ ಇನ್ನೂ ಉತ್ತಮಗೊಳಿಸಬೇಕು
ಕಳೆದ ಕೆಲವು ತಿಂಗಳಿನಿಂದ ಬ್ಯಾಟಿಂಗ್‌ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. 3 ವಿಭಾಗಗಳಲ್ಲೂ ಕಠಿನ ತರಬೇತಿ ಪಡೆಯುತ್ತಿದ್ದೇನೆ. ಶಾಲಾ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಇಳಿದಿದ್ದೆ. ಇದೇ ಮೊದಲ ಬಾರಿಗೆ ವೃತ್ತಿಪರ ಕ್ರಿಕೆಟ್‌ನಲ್ಲಿ ಆರಂಭಕಾರನಾಗಿ ಆಡಲಿಳಿದೆ. ಮುಂದಿನ ಪಂದ್ಯಗಳಲ್ಲೂ ಹೀಗೆ ಜಯ ಸಾಧಿಸುತ್ತೇವೆ ಎಂಬ ನಂಬಿಕೆ ಇದೆ.
ಸ್ಯಾಮ್‌ ಕರಣ್‌

ಸಂಕ್ಷಿಪ್ತ ಸ್ಕೋರ್‌
ಕಿಂಗ್ಸ್‌ ಇಲೆವೆನ್‌ ಪಂಜಾಬ್‌-9 ವಿಕೆಟಿಗೆ 166 (ಡೇವಿಡ್‌ ಮಿಲ್ಲರ್‌ 43, ಸಫ್ìರಾಜ್‌ ಖಾನ್‌ 39, ಮನ್‌ದೀಪ್‌ ಸಿಂಗ್‌ ಔಟಾಗದೆ 29). ಡೆಲ್ಲಿ ಕ್ಯಾಪಿಟಲ್ಸ್‌- 19.2 ಓವರ್‌ಗಳಲ್ಲಿ 152ಕ್ಕೆ ಅಲೌಟ್‌ (ರಿಷಬ್‌ ಪಂತ್‌ 39, ಕಾಲಿನ್‌ ಇನ್‌ಗಾಮ್‌ 38, ಶಿಖರ್‌ ಧವನ್‌ 30, ಕರನ್‌ 11ಕ್ಕೆ 4, ಅಶ್ವಿ‌ನ್‌ 31ಕ್ಕೆ 2, ಶಮಿ 27ಕ್ಕೆ 2. ಪಂದ್ಯಶ್ರೇಷ್ಠ: ಸ್ಯಾಮ್‌ ಕರಣ್‌

ಎಕ್ಸ್‌ಟ್ರಾ ಇನ್ನಿಂಗ್ಸ್‌
ಮೊಹಾಲಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಡೆಲ್ಲಿ ವಿರುದ್ಧ ಕಳೆದ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಡೆಲ್ಲಿ 2010ರಲ್ಲಿ ತವರಿನ ತಂಡದ ವಿರುದ್ಧ ಜಯಿಸಿತ್ತು. ಆದರೆ 2014ರಿಂದ ಎಲ್ಲ 5 ಪಂದ್ಯಗಳಲ್ಲಿ ಸೋಲನುಭವಿಸಿದೆ.

ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಪಂಜಾಬ್‌ ಕಳೆದ 6 ಪಂದ್ಯಗಳನ್ನು ಗೆದ್ದಿದೆ. ಇದು ಈ ಸ್ಟೇಡಿಯಂನಲ್ಲಿ ಪಂಜಾಬ್‌ನ ಅತ್ಯಧಿಕ ಗೆಲುವಾಗಿದೆ. 2008ರ ಉದ್ಘಾಟನ ಆವೃತ್ತಿಯಲ್ಲಿ ಅದು ಕೊನೆಯ 6 ಪಂದ್ಯಗಳನ್ನು ಗೆದ್ದಿತ್ತು.

ಪಂಜಾಬ್‌ ತಂಡದ ಸ್ಯಾಮ್‌ ಕರನ್‌ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ‌ ಯುವ ಆಟಗಾರ ಎನಿಸಿಕೊಂಡಿದ್ದಾರೆ (20 ವರ್ಷ 302 ದಿನ). ಹಿಂದಿನ ದಾಖಲೆ ರೋಹಿತ್‌ ಶರ್ಮ ಅವರ ಹೆಸರಿನಲ್ಲಿದೆ. ಅವರು 2009ರ ಆವೃತ್ತಿಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತಿದ್ದರು. ಆಗ ಅವರಿಗೆ 22 ವರ್ಷ 6 ದಿನ ವಯಸ್ಸು.

ಸ್ಯಾಮ್‌ ಕರನ್‌ ಐಪಿಎಲ್‌ನಲ್ಲಿ ಆರಂಭಿಕನಾಗಿ ಆಡಿ ಮತ್ತು ಅದೇ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ 2ನೇ ಆಟಗಾರರಾಗಿದ್ದಾರೆ. 2009ರ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪರ ಯುವರಾಜ್‌ ಸಿಂಗ್‌ ಇನ್ನಿಂಗ್ಸ್‌ ಆರಂಭಿಸಿದ್ದರು ಮತ್ತು ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿದಾಗ ಯುವರಾಜ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದಿದ್ದರು.

ಕರನ್‌ ಐಪಿಎಲ್‌ನಲ್ಲಿ 3 ಬ್ಯಾಟ್ಸ್‌ಮನ್‌ಗಳನ್ನು ಡಕ್‌ ಔಟ್‌ ಮಾಡಿ
ಟ್ರಿಕ್‌ ಸಾಧಿಸಿದ 3ನೇ ಆಟಗಾರ. 2013ರಲ್ಲಿ ಪುಣೆ ವಾರಿಯರ್ ವಿರುದ್ಧ ಸನ್‌ರೈಸರ್ ಹೈದರಾಬಾದ್‌ನ ಅಮಿತ್‌ ಮಿಶ್ರಾ ಮತ್ತು ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 2014ರ ಐಪಿಎಲ್‌ನಲ್ಲಿ ರಾಜಸ್ಥಾನ ತಂಡದ ಪರ ಪ್ರವೀನ್‌ ತಾಂಬೆ ಡಕ್‌ ಔಟ್‌ ಮಾಡಿ ಹ್ಯಾಟ್ರಿಕ್‌ ಸಾಧಿಸಿದ ಇನ್ನಿಬ್ಬರು ಆಟಗಾರರು.

ಡೆಲ್ಲಿ ಕ್ಯಾಪಿಟಲ್ಸ್‌ನ ಇನ್ನಿಂಗ್ಸ್‌ನಲ್ಲಿ 6 ಆಟ ಗಾರರು ಡಕ್‌ ಔಟ್‌ ಆಗಿದ್ದಾರೆ. ಇದು ಐಪಿಎಲ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಆಟಗಾರರು ಡಕ್‌ ಔಟ್‌ ಆಗಿರುವ 4ನೇ ನಿದರ್ಶನ. 2011ರ ಆವೃತ್ತಿಯಲ್ಲಿ ಡೆಕ್ಕನ್‌ ಚಾರ್ಜರ್ ವಿರುದ್ಧ ಕೊಚ್ಚಿ ಟಸ್ಕರ್ನ 6 ಆಟಗಾರರು, 2008ರಲ್ಲಿ ಕಿಂಗ್ಸ್‌ ಇಲೆವೆನ್‌ ವಿರುದ್ಧ ಆರ್‌ಸಿಬಿಯ ಮತ್ತು 2011ರಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಡೆಲ್ಲಿ ತಂಡದ 5 ಆಟಗಾರರು ಡಕ್‌ ಔಟ್‌ ಆಗಿದ್ದರು.

ಇನ್ನಿಂಗ್ಸ್‌ನ ಮೊದಲ ಓವರ್‌ ಎಸೆದ ಸಂದರ್ಭ 7ನೇ ಬಾರಿಗೆ ಆರ್‌. ಅಶ್ವಿ‌ನ್‌ ವಿಕೆಟ್‌ ಕಿತ್ತ ಸಾಧನೆ ಮಾಡಿದರು. ಇದು ಸ್ಪಿನ್ನರ್‌ಗಳ ಪೈಕಿ ಗರಿಷ್ಠ ಸಾಧನೆ. ಪೃಥ್ವಿ ಶಾ ವಿಕೆಟ್‌ ಅಂತೂ ಇನ್ನಿಂಗ್ಸ್‌ ಮೊದಲ ಎಸೆತದಲ್ಲಿ ಬಂದಿದ್ದು ವಿಶೇಷ.

ಟಾಪ್ ನ್ಯೂಸ್

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.