ಆರ್‌ಸಿಬಿಗೆ ಪ್ಲೇ-ಆಫ್ ಚಾನ್ಸ್‌ ಇದೆಯೇ?

ಮುಂದಿನ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು

Team Udayavani, Apr 26, 2019, 6:05 AM IST

PTI4_24_2019_000270A

ಬೆಂಗಳೂರು: ಪಂಜಾಬ್‌ ವಿರುದ್ಧ ಗೆಲುವಿನ ಓಟ ಮುಂದುವರಿಸಿದ ಆರ್‌ಸಿಬಿ ತನ್ನ 4ನೇ ಜಯವನ್ನು ಒಲಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ ಏಳಕ್ಕೆ ತಲುಪಿದೆ. ಉಳಿದ ಮೂರೂ ಪಂದ್ಯ ಗೆದ್ದರೆ ಬೆಂಗಳೂರು ತಂಡಕ್ಕೆ ಪ್ಲೇ-ಆಫ್ ಚಾನ್ಸ್‌ ಇದೆಯೇ ಎಂಬುದು ಮುಂದಿನ ಕುತೂಹಲ!

ಬುಧವಾರ ರಾತ್ರಿ ಪಂಜಾಬ್‌ ವಿರುದ್ಧ 17 ರನ್ನಿನಿಂದ ಗೆದ್ದ ಬಳಿಕ ಪ್ರತಿಕ್ರಿಯಿಸಿದ ಕಪ್ತಾನ ವಿರಾಟ್‌ ಕೊಹ್ಲಿ, ಕಳೆದ 5 ಪಂದ್ಯಗಳಲ್ಲಿ ನಾವು ನಾಲ್ಕನ್ನು ಗೆದ್ದಿದ್ದೇವೆ. ಉಳಿದ ಮೂರೂ ಪಂದ್ಯಗಳನ್ನು ಗೆದ್ದರೆ ಮುಂದಿನ ಸುತ್ತು ತಲಪುವ ಅವಕಾಶ ನಮಗೂ ಇದೆ ಎಂದಿದ್ದಾರೆ.

ತವರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 4 ವಿಕೆಟಿಗೆ 202 ರನ್‌ ಪೇರಿಸಿ ಸವಾಲೊಡ್ಡಿದರೆ, ಪಂಜಾಬ್‌ 7 ವಿಕೆಟಿಗೆ 185 ರನ್‌ಗಳನ್ನಷ್ಟೇ ಗಳಿಸಿತು. ಇದರೊಂದಿಗೆ ಪ್ರಸಕ್ತ ಋತುವಿನಲ್ಲಿ ಆರ್‌ಸಿಬಿ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಅಶ್ವಿ‌ನ್‌ ಪಡೆ ಸೋಲನುಭವಿಸಿತು.

ಸದ್ಯದ ಲೆಕ್ಕಾಚಾರ….
ಆರ್‌ಸಿಬಿ-ಪಂಜಾಬ್‌ ಪಂದ್ಯದ ಬಳಿಕ ಕಂಡುಬಂದ ಬಲಾಬಲದ ಲೆಕ್ಕಾಚಾರದಲ್ಲಿ ಚೆನ್ನೈ (11 ಪಂದ್ಯ, 16 ಅಂಕ) ಮತ್ತು ಡೆಲ್ಲಿ (11 ಪಂದ್ಯ, 14 ಅಂಕ) ತಂಡಗಳ ಮುಂದಿನ ಸುತ್ತಿನ ಪಯಣ ಬಹುತೇಕ ಖಚಿತವಾಗಿದೆ. ಮುಂಬೈ 3ನೇ ಸ್ಥಾನದಲ್ಲಿದೆ (10 ಪಂದ್ಯ, 12 ಅಂಕ). ತಲಾ 10 ಅಂಕ ಹೊಂದಿರುವ ಹೈದರಾಬಾದ್‌ ಮತ್ತು ಪಂಜಾಬ್‌ 3ನೇ ಹಾಗೂ 4ನೇ ಸ್ಥಾನದಲ್ಲಿವೆ. ಕೆಕೆಆರ್‌ 10ರಲ್ಲಿ 4 ಪಂದ್ಯ ಜಯಿಸಿ ಆರರಲ್ಲಿ ಉಳಿದುಕೊಂಡಿದೆ. ಹೀಗಾಗಿ ಕೊನೆಯ 2 ಸ್ಥಾನಗಳ ಪ್ಲೇ-ಆಫ್ ಸ್ಥಾನಕ್ಕಾಗಿ 4 ತಂಡಗಳ ಸ್ಪರ್ಧೆ ಕಂಡುಬಂದಿದೆ. ಈ ತಂಡಗಳನ್ನೆಲ್ಲ ಮೀರಿಸಿ ಆರ್‌ಸಿಬಿ ಮೇಲೆ ಬಂದಿತೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ!

ಸತತ 6 ಸೋಲು ಹೊಸತಲ್ಲ!
ಸತತ 6 ಪಂದ್ಯಗಳನ್ನು ಸೋತ ಬಳಿಕ ಪ್ಲೇ ಆಫ್ಗೆ ನೆಗೆದ ನಿದರ್ಶನ ಈಗಾಗಲೇ ಆರ್‌ಸಿಬಿ ಮುಂದಿದೆ. 2016ರ ಋತುವಿನಲ್ಲಿ ಆರ್‌ಸಿಬಿ ಇಂಥದೇ ಸಂಕಟದಿಂದ ಪಾರಾಗಿ ಲೀಗ್‌ ಹಂತದಲ್ಲಿ ದ್ವಿತೀಯ ಸ್ಥಾನಿಯಾಗಿತ್ತು. ಇಲ್ಲಿಂದ ಮುಂದುವರಿದು ಫೈನಲಿಗೂ ಲಗ್ಗೆ ಹಾಕಿತ್ತು. ಆದರೆ ಇಲ್ಲಿ ಮಾತ್ರ ಸನ್‌ರೈಸರ್ ಹೈದರಾಬಾದ್‌ಗೆ 8 ರನ್ನುಗಳಿಂದ ಶರಣಾಗಿ ಕಪ್‌ ಕಳೆದುಕೊಂಡಿತ್ತು.

ಈ ಸಲವೂ ಕೊನೆಯ ಹಂತದಲ್ಲಿ ಅದೃಷ್ಟ ಕೈಹಿಡಿದರೆ ಆರ್‌ಸಿಬಿಯಿಂದ ಪವಾಡ ನಡೆಯಬಾರದೆಂದೇನೂ ಇಲ್ಲ. ಉಳಿದ ತಂಡಗಳ ಫ‌ಲಿತಾಂಶವನ್ನು ಗಮನಿಸದೆ, ಮುಂದಿನ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು, ರನ್‌ರೇಟ್‌ ಏರಿಸಿಕೊಂಡರೆ ಕೊಹ್ಲಿ ಪಡೆಗೆ ಪ್ಲೇ ಆಫ್ ಅಸಾಧ್ಯವೇನಲ್ಲ. ಆದರೆ ಈ ಮೂರರಲ್ಲಿ ಒಂದು ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಹೊರಬೀಳಲಿದೆ!

ನಮ್ಮದು ಒತ್ತಡ ರಹಿತ ಆಟ
ಆರಂಭದಲ್ಲಿ ನಮಗೆ ಅದೃಷ್ಟ ಕೈಕೊಟ್ಟಿತ್ತು. ಗೆಲ್ಲಬಹುದಾಗಿದ್ದ ಪಂದ್ಯಗಳನ್ನೂ ಕಳೆದುಕೊಂಡೆವು. ಸತತ 6 ಪಂದ್ಯಗಳನ್ನು ಸೋತ ನೋವು ಎಲ್ಲರಲ್ಲೂ ಆವರಿಸಿತ್ತು. ಮೊಹಾಲಿಯಲ್ಲಿ ನಮ್ಮ ಲಕ್‌ ತಿರುಗಿತು. ನಾವು ಒತ್ತಡವನ್ನು ಹೇರಿಕೊಳ್ಳದೆ ಪ್ರತಿಯೊಂದು ಪಂದ್ಯವನ್ನೂ ಎಂಜಾಯ್‌ ಮಾಡುತ್ತಲೇ ಆಡುತ್ತಿದ್ದೇವೆ. ನಮ್ಮ ಫೀಲ್ಡಿಂಗ್‌, ಬೌಲಿಂಗ್‌ ಬಹಳಷ್ಟು ಸುಧಾರಣೆ ಆಗಬೇಕಿದೆ ಎಂದು ಕೊಹ್ಲಿ ಹೇಳಿದರು.

ಪಂಜಾಬ್‌ ವಿರುದ್ಧ 175 ರನ್‌ ನಿರೀಕ್ಷೆಯಲ್ಲಿದ್ದೆವು. ಆದರೆ ಎಬಿಡಿ ಮತ್ತು ಸ್ಟೋಯಿನಿಸ್‌ ಅಮೋಘ ಆಟವಾಡಿ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಇದರಿಂದ ಲಾಭವಾಯಿತು ಎಂದರು.

ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ರವಿವಾರ ಡೆಲ್ಲಿ ವಿರುದ್ಧ ಕೋಟ್ಲಾದಲ್ಲಿ ಆಡಲಿದೆ.

ಸಂಕ್ಷಿಪ್ತ ಸ್ಕೋರ್‌: ಆರ್‌ಸಿಬಿ-4 ವಿಕೆಟಿಗೆ 202. ಪಂಜಾಬ್‌-7 ವಿಕೆಟಿಗೆ 185 (ರಾಹುಲ್‌ 42, ಗೇಲ್‌ 23, ಅಗರ್ವಾಲ್‌ 35, ಮಿಲ್ಲರ್‌ 24, ಪೂರಣ್‌ 46, ಯಾದವ್‌ 36ಕ್ಕೆ 3, ಸೈನಿ 33ಕ್ಕೆ 2, ಸ್ಟೋಯಿನಿಸ್‌ 13ಕ್ಕೆ 1, ಅಲಿ 22ಕ್ಕೆ 1).

ಪಂದ್ಯಶ್ರೇಷ್ಠ: ಎಬಿ ಡಿ ವಿಲಿಯರ್.

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.