ಅಭಿಷೇಕ್ ಚಿತ್ರಕ್ಕೆ ಚೇತನ್ ನಿರ್ದೇಶನ
Team Udayavani, Jan 23, 2018, 10:53 AM IST
ಅಂಬರೀಶ್ ಅವರ ಪುತ್ರ ಅಭಿಷೇಕ್ ನಾಯಕರಾಗಿ ನಟಿಸುವ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಚೇತನ್ ಕುಮಾರ್ ಈಗ ಚಿತ್ರದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಆರಂಭದಲ್ಲಿ ಅಭಿಷೇಕ್ ಚಿತ್ರಕ್ಕೆ ಅನೇಕ ನಿರ್ದೇಶಕರ ಹೆಸರುಗಳು ಕೇಳಿಬಂದುವು. ಅದರಲ್ಲಿ ಜೋರಾಗಿ ಕೇಳಿಬಂದ ಹೆಸರು ಪವನ್ ಒಡೆಯರ್ ಅವರದು.
ಆದರೆ, ಈಗ ಅಂತಿಮವಾಗಿ ಚೇತನ್ ಕುಮಾರ್ಗೆ ಅಭಿಷೇಕ್ ಅವರ ಮೊದಲ ಚಿತ್ರವನ್ನು ನಿರ್ದೇಶಿಸುವ ಜವಾಬ್ದಾರಿ ಸಿಕ್ಕಿದೆ. “ಬಹದ್ದೂರ್’, “ಭರ್ಜರಿ’ಯಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಚೇತನ್ ಈಗ ಅಭಿಷೇಕ್ ಅವರನ್ನು ಕೂಡಾ ಪಕ್ಕಾ ಕಮರ್ಷಿಯಲ್ ಹೀರೋ ಆಗಿ ಲಾಂಚ್ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.
ಅಭಿಷೇಕ್ ಅವರು ನಾಯಕರಾಗುತ್ತಿರುವ ಮೊದಲ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದಾರೆ. ಚೇತನ್ ನಿರ್ದೇಶಕರಾಗಿ ಆಯ್ಕೆಯಾಗಿರುವುದನ್ನು ಸ್ವತಃ ಸಂದೇಶ್ ನಾಗರಾಜ್ ಖಚಿತಪಡಿಸುತ್ತಾರೆ. “ಅಭಿಷೇಕ್ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶಿಸಲಿದ್ದಾರೆ. ಈಗಾಗಲೇ ಮಾತುಕತೆಯಾಗಿ ಅವರು ಅಂತಿಮವಾಗಿದ್ದಾರೆ.
ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಅವರು ಚೇತನ್ ಅವರನ್ನು ಅಂತಿಮಗೊಳಿಸಿದ್ದಾರೆ. ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗಲಿದೆ’ ಎಂದು ಚಿತ್ರಕ್ಕೆ ನಿರ್ದೇಶಕರಾದ ಬಗ್ಗೆ ಹೇಳುತ್ತಾರೆ ಸಂದೇಶ್ ನಾಗರಾಜ್. ಚಿತ್ರದ ಟೈಟಲ್, ತಾಂತ್ರಿಕ ವರ್ಗ, ನಾಯಕಿ ಸೇರಿದಂತೆ ಇತರ ಅಂಶಗಳು ಇನ್ನೊಂದು ವಾರದಲ್ಲಿ ಅಂತಿಮವಾಗಲಿದೆ. ಈಗಾಗಲೇ ನಾಯಕ ಅಭಿಷೇಕ್ ನಟನೆಗೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ