ಜಗತ್ತು ಚಿಕ್ಕದು, ಸಿಟ್ಟು ಶಾಶ್ವತವಲ್ಲ; ಸುದೀಪ್‌


Team Udayavani, May 3, 2018, 3:53 PM IST

Sudeep-in-Ambi-Nine-Vayassa.jpg

“ನೀವು ಹಾಗೂ ದರ್ಶನ್‌ ಯಾವತ್ತೂ ಸಿನಿಮಾ ಮಾಡುತ್ತೀರಿ’ ಎಂದು ಕೆಲವು ದಿನಗಳ ಹಿಂದೆ ಅಭಿಮಾನಿಯೊಬ್ಬರು ಸುದೀಪ್‌ ಅವರಿಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಸುದೀಪ್‌, “ನಾವಿಬ್ಬರು ಯಾವತ್ತಿಗೂ ಸ್ನೇಹಿತರೇ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಾಗ ಖಂಡಿತಾ ಮಾಡುತ್ತೇವೆ’ ಎಂಬರ್ಥದಲ್ಲಿ ಟ್ವೀಟ್‌ ಮಾಡಿದ್ದರು ಸುದೀಪ್‌. 

ಹಾಗಾದರೆ ಮುಂದೆ ಸುದೀಪ್‌ ಮತ್ತು ದರ್ಶನ್‌ ಒಂದಾಗುತ್ತಾರಾ, ಜೊತೆಗೆ ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆ ಅನೇಕರನ್ನು ಕಾಡಿತ್ತು. ಈಗ ಸುದೀಪ್‌ ಮಾತನಾಡಿದ್ದಾರೆ. “ಈ ಜಗತ್ತಲ್ಲಿ ನಾವು ಎಷ್ಟು ದಿನ ಇರುತ್ತೇವೋ ಅಷ್ಟು ದಿನ ಎಲ್ಲರೂ ಸ್ನೇಹಿತರಾಗಿ, ಖುಷಿಯಿಂದ ಇರಬೇಕು. ಯಾರಲ್ಲೂ ದ್ವೇಷ ಕಟ್ಟಿಕೊಂಡು, ಸಿಟ್ಟನ್ನು ಮುಂದುವರೆಸಿಕೊಂಡು ಹೋಗಬಾರದು’ ಎನ್ನುವುದು ಸುದೀಪ್‌ ಮಾತು. ಈ ಮೂಲಕ ಒಳ್ಳೆಯ ಕಥೆ ಸಿಕ್ಕರೆ ದರ್ಶನ್‌ ಜೊತೆ ನಟಿಸಲು ತಮ್ಮದೇನೂ ಅಭ್ಯಂತರವಿಲ್ಲ ಎಂಬುದನ್ನು ಈ ಮೂಲಕ ಸೂಕ್ಷ್ಮವಾಗಿ ಹೇಳಿದ್ದಾರೆ.

ಇನ್ನು,  ಫಾರಿನ್‌ ಟೂರ್‌ ಮುಗಿಸಿಕೊಂಡು ವಾಪಾಸ್‌ ಬಂದಿರುವ ಸುದೀಪ್‌, ಎಂದಿನಂತೆ ಮತ್ತೆ ಸಿನಿಮಾ ಕೆಲಸದಲ್ಲಿ ತೊಡಗಿದ್ದಾರೆ. ಸುದೀಪ್‌ ಸದ್ಯ, “ದಿ ವಿಲನ್‌’ ಡಬ್ಬಿಂಗ್‌ ಹಾಗೂ “ಅಂಬಿ ನಿಂಗೆ ವಯಸ್ಸಾಯೊ¤à’ ಚಿತ್ರೀಕರಣದಲ್ಲಿ ಬಿಝಿ. ಸುದೀಪ್‌ ಫಾರಿನ್‌ ಟೂರ್‌ ಹೋಗಲು ಕಾರಣ ಅವರ ಮಗಳು ಸಾನ್ವಿ. ಬೇಸಿಗೆ ರಜೆಯಲ್ಲಿ ಮಗಳಿಗೆ ವಿದೇಶದ ಹೊಸ ಹೊಸ ಜಾಗಗಳನ್ನು ತೋರಿಸಿಕೊಂಡು ಬಂದಿದ್ದಾರೆ. 

ಸುದೀಪ್‌ ಮಗಳ ಜೊತೆ 16 ದಿನ ಜಪಾನ್‌ಗೆ ಪ್ರವಾಸ ಹೋಗಲು ಆಲೋಚಿಸಿದ್ದರಂತೆ. ಅದಕ್ಕೆ ಕಾರಣ ಜಪಾನ್‌ನ ಹಳ್ಳಿಗಳು. “ಮಗಳನ್ನು ಕರೆದುಕೊಂಡು 16 ದಿನ ಜಪಾನ್‌ ಪ್ರವಾಸ ಹೋಗಬೇಕೆಂದಿದ್ದೆ. ಜಪಾನ್‌ನ ಹಳ್ಳಿಗಳನ್ನು ಆಕೆಗೆ ತೋರಿಸುವ ಆಸೆ ಇತ್ತು. ಆದರೆ, ನನ್ನ ಬಿಝಿ ಶೆಡ್ನೂಲ್‌ನಿಂದ ಸಾಧ್ಯವಾಗಲಿಲ್ಲ. ಕೇವಲ ಆರು ದಿನ ಮಾತ್ರ ಟೂರ್‌ ಹೋಗಿ ಬಂದೆ’ ಎಂದು ಹೇಳುತ್ತಾರೆ ಸುದೀಪ್‌. 

“ದಿ ವಿಲನ್‌’ ಚಿತ್ರದ ಮೂರು ದಿನಗಳ ಚಿತ್ರೀಕರಣ ಬಾಕಿ ಇದೆ. ಈ ನಡುವೆಯೇ “ಅಂಬಿ ನಿಂಗೆ ವಯಸ್ಸಾಯೊ¤à’ ಚಿತ್ರದಲ್ಲಿ ನಟಿಸುತ್ತಿರುವ ಸುದೀಪ್‌, ಅದಕ್ಕಾಗಿ ಏಳೆಂಟು ಕೆಜಿ ತೂಕ ಕೂಡಾ ಇಳಿಸಿಕೊಂಡರಂತೆ. “ಅಂಬರೀಶ್‌ ಅವರಿಗೆ ಕಥೆ ತುಂಬಾ ಇಷ್ಟವಾಗಿದೆ. ಚಿತ್ರೀಕರಣದಲ್ಲಿ ತುಂಬಾ ಉತ್ಸಾಹದಿಂದ, ಖುಷಿಯಿಂದ ಭಾಗವಹಿಸುತ್ತಾರೆ. ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದಾರೆ’ ಎನ್ನುವುದು ಸುದೀಪ್‌. 

ಸದ್ಯ ಸುದೀಪ್‌ ಅವರ “ಕೋಟಿಗೊಬ್ಬ-3′ ಚಿತ್ರೀಕರಣ ಆರಂಭವಾಗಿದೆ. ಬೇರೆ ಕಲಾವಿದರಿರುವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಜೂನ್‌ನಿಂದ ಸುದೀಪ್‌ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.