ಬ್ರಾಂಕಯಲ್‌ ಆಸ್ತಮಾ


Team Udayavani, Jun 11, 2017, 3:16 PM IST

Asthma-Inhaler-vs.jpg

– ಹಿಂದಿನ ವಾರದಿಂದ 18. ಇನ್‌ಹೇಲರ್‌ ಉಪಯೋಗಿಸುವ ವಿವಿಧ ಹಂತಗಳು ಯಾವುವು?
ಎಂಡಿಐ:
ಉಪಯೋಗಿಸುವುದು ಹೀಗೆ:
– ಇನ್‌ಹೇಲರ್‌ನ ಮುಚ್ಚಳ ತೆರೆದು ಚೆನ್ನಾಗಿ ಕುಲುಕಿ. 
– ಎದ್ದು ನಿಂತು ಉಸಿರು ಹೊರಗೆ ಬಿಡಿ. 
– ಇನ್‌ಹೇಲರ್‌ನ ಬಾಯ್ತುದಿಯನ್ನು ನಿಮ್ಮ ಬಾಯಿಯೊಳಗೆ ಇರಿಸಿಕೊಳ್ಳಿ. 
– ನಿಧಾನವಾಗಿ ಉಸಿರು ಎಳೆದುಕೊಳ್ಳಿ. 
– ಉಸಿರು ಒಳತೆಗೆದುಕೊಳ್ಳಲು ಆರಂಭಿಸಿದಾಗ ಇನ್‌ಹೇಲರ್‌ನ ಮೇಲ್ಭಾಗವನ್ನು ಅದುಮಿ ಉಸಿರು ಹಿಡಿದು ತೆಗೆದುಕೊಳ್ಳುವುದನ್ನು ಮುಂದುವರಿಸಿ.
– ಬಾಯಿಯನ್ನು ಮುಚ್ಚಿ 10 ಸೆಕೆಂಡುಗಳ ಕಾಲ ಉಸಿರು ತಡೆ ಹಿಡಿಯಿರಿ 
– ಈಗ ಉಸಿರು ಹೊರಬಿಡಿ. ಈ ಹಂತಗಳನ್ನು ಸರಿಯಾಗಿ ಸಂಯೋಜಿಸಿ ಅನುಸರಿಸಲಾರದವರಿಗಾಗಿ ಸ್ಪೇಸರ್‌ ಉಪಯೋಗಿಸಲಾಗುತ್ತದೆ. 

ಡಿಪಿಐ: 
ಈ ಇನ್‌ಹೇಲರ್‌ ಬಳಸುವಾಗ ನೀವು ನಿಮ್ಮ ಉಸಿರಾಟವನ್ನು ಮತ್ತು ಇನ್‌ಹೇಲರ್‌ನ ಮೇಲ್ಭಾಗ ಒತ್ತಿ ಹಿಡಿಯುವುದನ್ನು ಸಂಯೋಜಿಸಿ ಅನುಸರಿಸಬೇಕಾಗಿಲ್ಲ. ಏಕೆಂದರೆ, ಇದರಲ್ಲಿ ನೀವು ಆಳವಾಗಿ, ವೇಗವಾಗಿ ಉಸಿರು ತೆಗೆದುಕೊಂಡಾಗ ಇದರಲ್ಲಿ ಔಷಧಿ ಬಿಡುಗಡೆಯಾಗುತ್ತದೆ. ಇದು ಕೆಲವರಿಗೆ ಸುಲಭವಾಗುತ್ತದೆಯಾದರೂ ಇನ್ನು ಕೆಲವರಿಗೆ ಕಷ್ಟವಾಗಿ ಕಾಣಬಹುದು. ಮೀಟರ್‌ಡ್‌ -ಡೋಸ್‌ ಇನ್‌ಹೇಲರ್‌ಗಳಲ್ಲಿಯಾದರೆ, ನೀವು ಮೊದಲು ಉಸಿರನ್ನು ಪೂರ್ಣವಾಗಿ ಹೊರಬಿಟ್ಟು ಇನ್‌ಹೇಲರನ್ನು ಬಾಯೊಳಗಿಟ್ಟು ಆಮೇಲೆ ಉಸಿರು ಹೊರಬಿಡಬೇಕಾಗುತ್ತದೆ. 

ನಿಮ್ಮ ಲಕ್ಷಣಗಳನ್ನು ಆಧರಿಸಿ ವೈದ್ಯರು ಯಾವುದೇ ಒಂದು ವಿಧದ ಇನ್‌ಹೇಲರನ್ನು ನಿಮಗೆ ಶಿಫಾರಸು ಮಾಡುತ್ತಾರೆ ಮತ್ತು ಯಾವುದು ನಿಮಗೆ ಹೆಚ್ಚು ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಇನ್‌ಹೇಲರನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ವೈದ್ಯರು ಅಥವಾ ಕರ್ತವ್ಯದಲ್ಲಿರುವ ದಾದಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಚೆಕ್‌- ಅಪ್‌ ಸಂದರ್ಭದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ನಿಮ್ಮ ಆಸ್ತಮಾ ನಿಯಂತ್ರಣಕ್ಕೆ ಬಾರದೆ ಇರುವ ಸಂದರ್ಭದಲ್ಲಿ ನೀವು ಇನ್‌ಹೇಲರನ್ನು ಸರಿಯಾಗಿ ಉಪಯೋಗಿಸುವಿರೋ ಎಂಬುದನ್ನು ಅವರು ಪರೀಕ್ಷಿಸಬಹುದು. 

19. ನೆಬ್ಯುಲೈಸರ್‌ ಉಪಯೋಗಿಸ ಬೇಕಾಗುತ್ತದೆಯೇ?
ಸಮರ್ಪಕವಾಗಿ ಸಂಯೋಜನೆಗೊಂಡ ಇನ್‌ಹೇಲರ್‌ ಚಿಕಿತ್ಸೆಯು ನೆಬ್ಯುಲೈಸೇಶನ್‌ ಚಿಕಿತ್ಸೆಯಷ್ಟೇ ಪರಿಣಾಮಕಾರಿಯಾಗುವುದನ್ನು ಅಧ್ಯಯನಗಳು ಶ್ರುತಪಡಿಸಿವೆ. ಅಲ್ಲದೆ, ನೆಬ್ಯುಲೈಸರ್‌ಗಳು ಎಲ್ಲ ಕಾಲದಲ್ಲೂ ಜತೆಗಿರಿಸಿಕೊಳ್ಳಬಹುದಾದ, ಎಲ್ಲೆಡೆಗೂ ಒಯ್ಯಬಹುದಾದ ಸಣ್ಣ ಉಪಕರಣಗಳಲ್ಲ; ಅವುಗಳಿಗೆ ಸತತ ವಿದ್ಯುತ್‌ ಸಂಪರ್ಕ ಬೇಕು, ಆರ್ಥಿಕವಾಗಿಯೂ ಮಿತವ್ಯಯಿಯಲ್ಲ. ಎಂಡಿಐ ಮತ್ತು ಡಿಪಿಐಗಳು ಉಪಯೋಗಿಸಲು ಸುಲಭ, ಸಣ್ಣ ಸಾಧನಗಳು ಮತ್ತು ಶುದ್ಧತೆಯನ್ನು ಕಾಪಾಡಿಕೊಳ್ಳಲು ಸುಲಭ. 

20. ನಿಮ್ಮಷ್ಟಕ್ಕೆ ನೀವೇ ಮಾಡಿಕೊಳ್ಳಬಹುದಾದದ್ದು
– ನಿಮ್ಮ ಆಸ್ತಮಾ ಸಮಸ್ಯೆಯ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ತಿಳಿದುಕೊಂಡಿರುವುದು
– ನಿಮ್ಮಲ್ಲಿ ಆಸ್ತಮಾ ಲಕ್ಷಣಗಳನ್ನು ಪ್ರಚೋದಿಸುವ ಅಂಶಗಳ ಬಗ್ಗೆ ತಿಳಿದಿರುವುದು
– ನಿಮ್ಮ ಔಷಧಿಗಳನ್ನು ನಿಯ ಮಿತವಾಗಿ ತೆಗೆದುಕೊಳ್ಳುವುದು ಮತ್ತು ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುವುದು.
– ನಿಮ್ಮ ಆಸ್ತಮಾ ಲಕ್ಷಣಗಳ ಮೇಲೆ ನಿಯಂತ್ರಣ ಸಾಧಿಸಲು ಆದಷ್ಟು ಕ್ಷಿಪ್ರವಾಗಿ ಕಾರ್ಯತತ್ಪರರಾಗುವುದು. 

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.