ಸಂಧಿವಾತ
Team Udayavani, Nov 18, 2018, 6:00 AM IST
ಹಿಂದಿನ ವಾರದಿಂದ- ಈ ಚಿಕಿತ್ಸೆಯಿಂದ ಗಂಟುಗಳಿಗೆ ಔಷಧಯುಕ್ತ ತೈಲಗಳ ಪ್ರಯೋಗದಿಂದ ವಾತದೋಷದ ರೂಕ್ಷತೆ ನಿವಾರಣೆಯಾಗಿ ಸ್ನಿಗ್ಧ ಗುಣದ ವೃದ್ಧಿಯಾಗುವುದರಿಂದ ಗಂಟುಗಳ ಸವಕಳಿಕೆ ತಡೆಗಟ್ಟಬಹುದಾಗಿದೆ.
ಸಂಧಿವಾತದ ಸಮಸ್ಯೆಗೆ ಇದು ಸಹ ಒಂದು ಲಾಭದಾಯಕ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯನ್ನು 7 ದಿನ, 14 ದಿನ, 21 ದಿನಗಳ ಕಾಲ ಮಾಡಿದರೆ ಇನ್ನೂ ಹೆಚ್ಚು ಲಾಭದಾಯಕವಾಗಿದೆ. ಈ ಉಪಕರ್ಮಗಳಲ್ಲದೆ ಪಂಚಕರ್ಮ ಚಿಕಿತ್ಸೆಗಳಿಂದಲೂ ಇನ್ನೂ ಅಧಿಕ ಲಾಭ ಈ ಸಂಧಿಗತವಾತದಲ್ಲಿ ಪಡೆಯಬಹುದಾಗಿದೆ. ಪಂಚಕರ್ಮದ ಪ್ರಾಮುಖ್ಯ ಎಂದರೆ ಬೇರು ಸಮೇತ ಒಂದು ಚಿಕಿತ್ಸಾ ಸಾಧ್ಯ ರೋಗವನ್ನು ಕಿತ್ತೂಗೆಯುವುದು. ಈ ಪಂಚಕರ್ಮಗಳಲ್ಲಿ ಬಸ್ತಿ ಚಿಕಿತ್ಸೆ ಸಂಧಿವಾತ ರೋಗಕ್ಕೆ ಅತ್ಯಂತ ಶ್ರೇಷ್ಠವಾದದ್ದು.
ಬಸ್ತಿ ಚಿಕಿತ್ಸೆ
ಇದು ಪಂಚಕರ್ಮಗಳಲ್ಲಿ ಶ್ರೇಷ್ಠವಾದ ಚಿಕಿತ್ಸೆ ಹಾಗೂ ಇದನ್ನು ಅರ್ಧಚಿಕಿತ್ಸಾ ಎಂದು ಕರೆಯಲಾಗುತ್ತದೆ. ಇದು ವಾತದೋಷಕ್ಕೆ ಅತ್ಯಂತ ಶ್ರೇಷ್ಠ ಚಿಕಿತ್ಸೆಯಾಗಿದೆ. ಅಲ್ಲದೆ ಅನೇಕ ಪ್ರಕಾರದ ಬಸ್ತಿಗಳಿರುವುದರಿಂದ ಪಿತ್ತ ಕಫದೋಷಗಳಿಗೂ ಶ್ರೇಷ್ಠ ಚಿಕಿತ್ಸೆಯಾಗಿದೆ.
ಈ ಚಿಕಿತ್ಸೆಯಿಂದ ವಿಕೃತ ವಾತದೋಷ ಶಮನವಾಗಿ ಎಲುಬುಗಳಿಗೆ ಒಳ್ಳೆಯ ಪೋಷಣೆ ಸಿಗುತ್ತದೆ ಹಾಗೂ ಅವುಗಳ ಸವಕಳಿಕೆಯನ್ನು ತಡೆಗಟ್ಟಿ ನೋವು ಹಾಗೂ ಸ್ತಬ್ಧತೆಯ ನಿವಾರಣೆ ಆಗುತ್ತದೆ. ಈ ಚಿಕಿತ್ಸೆಯನ್ನು 8 ದಿನ, 16 ದಿನ, 30 ದಿನಗಳವರೆಗೆ ಕೊಡಬಹುದು. ಈ ಚಿಕಿತ್ಸೆಯಲ್ಲಿ ಔಷಧಯುಕ್ತ ಕಷಾಯವನ್ನು ಅಥವಾ ತೈಲ, ಘೃತವನ್ನು ಗುದದ್ವಾರದ ಮುಖಾಂತರ ಕೊಡಲಾಗುತ್ತದೆ ಹಾಗೂ ಗುದದ್ವಾರದ ಮುಖಾಂತರವೇ ದೇಹದಲ್ಲಿರುವ ದೂಷಿತ ಅಂಶ ಹೊರಹಾಕಲ್ಪಡುತ್ತದೆ. ಈ ಚಿಕಿತ್ಸೆ ಅನೇಕ ಪ್ರಕಾರದ ವಾತವ್ಯಾಧಿಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ. ಈ ರೀತಿ ಸಂಧಿವಾತ ರೋಗಕ್ಕೆ ಅನೇಕ ಬಾಹ್ಯ ಉಪಕ್ರಮಗಳು ಹಾಗೂ ಪಂಚಕರ್ಮ ಚಿಕಿತ್ಸೆಗಳಲ್ಲದೆ ಅನೇಕ ತರಹದ ಮಾತ್ರೆ, ಕಷಾಯ, ಅರಿಷ್ಠಗಳು, ಲೇಹ, ಚೂರ್ಣ ಇತ್ಯಾದಿಗಳಿಂದಲೂ ಅನೇಕ ಲಾಭಗಳಿವೆ.
ಸಂಧಿವಾತವನ್ನು ತಡೆಗಟ್ಟಲು ಒಳ್ಳೆಯ ಹಾಗೂ ಶ್ರೇಷ್ಠವಾದ ಉಪಾಯವೆಂದರೆ ವಾರಕ್ಕೆ ಒಂದು ಬಾರಿ ಆದರೂ ತೈಲದ ಅಭ್ಯಂಗ ಮಾಡುವುದು. ದೇಹದ ತೂಕ ಸಮರ್ಪಕವಾಗಿ ಇಟ್ಟುಕೊಳ್ಳುವುದು, ಸರಿಯಾದ ಆಹಾರಕ್ರಮ ಪಾಲಿಸುವುದು ಹಾಗೂ ವ್ಯಾಯಾಮವನ್ನು ಮಾಡುವುದು. ರೋಗದ ಚಿಕಿತ್ಸೆಗಿಂತಲೂ ರೋಗವನ್ನು ತಡೆಗಟ್ಟುವುದು ಅತ್ಯಂತ ಶ್ರೇಯಸ್ಕರ ಉಪಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ