ಅಕ್ಷರಗಳಲ್ಲಿ ಅಮರರಾದ ಕಲಾವಿದ


Team Udayavani, Dec 9, 2018, 6:00 AM IST

yakshagana-sss.jpg

ಯಕ್ಷಗಾನ ರಂಗದಲ್ಲಿ ತಮ್ಮ ವಿಶಿಷ್ಟ ಶೈಲಿಯ ಲಯಸಂಪನ್ನ ನೃತ್ಯ ಭಂಗಿ-ಹಾವ-ಭಾವಗಳಿಂದಲೇ ಪ್ರೇಕ್ಷಕರನ್ನು ಪ್ರಬಲವಾಗಿ ಸೆಳೆದುಕೊಂಡವರು ಚಿಟ್ಟಾಣಿ ರಾಮಚಂದ್ರ ಹೆಗಡೆ. ಸಾಂಪ್ರದಾಯಿಕ ಹೆಜ್ಜೆಗಾರಿಕೆಯೊಂದಿಗೆ ಹೊಸ ಕಲ್ಪನೆಯ ಹೆಜ್ಜೆಗತಿಗಳನ್ನು ಬೆರೆಸಿ ಯಕ್ಷನೃತ್ಯದ ಹೊಸ ಪರಿಭಾಷೆಯನ್ನು ಹುಟ್ಟುಹಾಕಿ ಪ್ರೇಕ್ಷಕರಲ್ಲಿ ರೋಮಾಂಚನಕಾರಿ ಅನುಭವವನ್ನು ಮೂಡಿಸಿದವರು. ಪದ್ಮಶ್ರೀ ಪುರಸ್ಕೃತರಾಗಿ ಈ ಕ್ಷೇತ್ರಕ್ಕೆ ವಿಶೇಷ ಗೌರವದ ಕಿರೀಟವನ್ನು ತೊಡಿಸಿದವರು. 

ಕಳೆದ ವರ್ಷವಷ್ಟೆ ನಿಧನರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಆರು ದಶಕ ಕಾಲದ ಕಲಾಯಾನದ ವಿವಿಧ ಮಗ್ಗುಲುಗಳನ್ನು ನೋಡಿ, ಮೆಚ್ಚಿ ಆನಂದಿಸಿದ ಅವರ ಅಭಿಮಾನಿಗಳು, ಸಹಕಲಾವಿದರು, ಮೇಳ-ಪ್ರದರ್ಶನಗಳಲ್ಲಿ ಸಹಯಾನ ನಡೆಸಿದ ಭಾಗವತರು, ಯಕ್ಷಗಾನ ಕಲಾವಿಮರ್ಶಕರು, ಮಕ್ಕಳು, ಬಂದು-ಮಿತ್ರರು ಸಲ್ಲಿಸಿರುವ ನುಡಿ-ನಮನಗಳ ಸಂಕಲನ ಇದು. ಇಲ್ಲಿನ ಹೆಚ್ಚಿನ ಬರಹಗಳಲ್ಲಿ ಜೀವಂತರಾಗಿದ್ದಾಗಲೇ ದಂತಕತೆಯಾಗಿದ್ದ ಚಿಟ್ಟಾಣಿಯವರ ಬಗೆಗಿನ ಅಭಿಮಾನ ಹೇಗೋ ಹಾಗೆಯೇ ಅವರ ಕಲೆಗಾರಿಕೆ-ಕಸುಬುಗಾರಿಕೆಯ ವಸ್ತುನಿಷ್ಠ ಅವಲೋಕನವೂ ಇದೆ. ಅವರು ಯಕ್ಷಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್‌ ಪದವಿ ಗಳಿಸಿರುವ ಸಂಪಾದಕರು ಇಲ್ಲಿ ತಾವು ಸಂಕಲಿಸಿರುವ ಬರಹಗಳ ಬಗ್ಗೆ ಹೇಳುತ್ತ “ಚಿಟ್ಟಾಣಿಯವರ ಲಯಸಿದ್ಧಿ’ ನೃತ್ಯದ ಲಯದಲ್ಲಿ ಮಾತ್ರವಲ್ಲ, ಅದು ಪಾತ್ರಗಳ ಶೀಲಸ್ವಭಾವವೂ ಹೌದು; ಸಾಂಪ್ರದಾಯಿಕ ಕುಣಿತದೊಂದಿಗೆ ಹೊಸ ಕುಣಿತವನ್ನೂ ನೀಡಿದರು; ಅದಿಂದು “ಚಿಟ್ಟಾಣಿ ಕುಣಿತ’ವೆಂದೇ ಕರೆಸಿಕೊಳ್ಳುವಷ್ಟು ಪ್ರಸಿದ್ಧವಾಗಿದೆ’ ಎನ್ನುತ್ತಾರೆ. ಈ ಸಂಕಲದಲ್ಲಿರುವ “ನವರಸ ನಾಯಕ ಚಿಟ್ಟಾಣಿ’ ಎಂಬ ಅವರದೇ ಬರಹ ಈ ಮಾತಿಗೆ ಪುರಾವೆಗಳನ್ನು ಒದಗಿಸುತ್ತದೆ. 

“ಉದ್ಭವ ಕಲಾವಿದ’ (ಕಡತೋಕ ಗೋಪಾಲಕೃಷ್ಣ ಭಾಗವತ), “ಯಕ್ಷಗಾನದ ಕೋಲಿ¾ಂಚು-ಚಿಟ್ಟಾಣಿ’ (ಅಂಬಾತನಯ ಮುದ್ರಾಡಿ), “ರಂಗಮಂಚದ ಮಿಂಚು’ (ಉಮಾಕಾಂತ ಭಟ್ಟ), “ಮಮತೆಯ ಕಡಲು’ (ಸುಶೀಲಾ ರಾಮಚಂದ್ರ ಹೆಗಡೆ) ಮುಂತಾದ ಇಲ್ಲಿನ ನುಡಿಚಿತ್ರಗಳು ಅಭಿಮಾನದ ಅತಿರೇಕವಿಲ್ಲದೆ ಕಲಾ ಸಾಧಕನೊಬ್ಬನನ್ನು ಬೇರೆ ಬೇರೆ ನೆಲೆಗಳಿಂದ ಹೇಗೆ ನೋಡಬಹುದೆಂಬುದನ್ನು ಶ್ರುತಪಡಿಸುವ ಅಕ್ಷರರೂಪೀ ಗೌರವಾರ್ಪಣೆಯ ನುಡಿಕುಸುಮಗಳಾಗಿ ಸಾರ್ಥಕತೆ ಪಡೆದಿವೆ. ಜತೆಗೆ ಅವರ ನಿಲುವನ್ನು ಕಾಣಿಸುವ ಸಂದರ್ಶನ ಬರಹಗಳು, ಕಾವ್ಯರೂಪಿ ಶ್ರದ್ಧಾಂಜಲಿಗಳು, ಅವರ ಕಲಾಯಾನದ ಮಹಣ್ತೀದ ಕ್ಷಣಗಳನ್ನು ಕಾಣಿಸುವ ಅಪರೂಪದ ಛಾಯಾಚಿತ್ರಗಳು, ಅವರು ಪಡೆದ ವಿಶೇಷ ಪ್ರಶಸ್ತಿಗಳ ಪಟ್ಟಿ ಕೂಡ ಇದ್ದು , ಇವೆಲ್ಲವೂ ಈ ಗ್ರಂಥಕ್ಕೆ ಸೊಬಗು ಹಾಗೂ ಘನತೆಯನ್ನು ನೀಡಿವೆ.

– ಜಕಾ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.