ಬೀಳುವ ಆತಂಕದ ಮನೆಯಲ್ಲಿ ದಿನಕಳೆಯುತ್ತಿರುವ ಮಹಿಳೆ
Team Udayavani, Jul 10, 2018, 6:00 AM IST
ಕುಂದಾಪುರ: ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ವಿಧವೆ ಮಹಿಳೆಯೊಬ್ಬರು ಹಾವು ಚೇಳಿನೊಟ್ಟಿಗೆ ಬದುಕು ಸಾಗಿಸುತ್ತಿದ್ದಾರೆ.ವಿದ್ಯುತ್ ಇಲ್ಲದ ಸೀಮೆಎಣ್ಣೆ ದೀಪದ ಬೆಳಕು ಇವರ ಬಾಳಿಗೆ ಬೆಳಕು ಹರಿಸಲಿಲ್ಲ. ಸರಕಾರದ ಹತ್ತಾರು ಭಾಗ್ಯಗಳು ಕೂಡಾ ಇವರಿಗೆ ನೆರವಾಗಿಲ್ಲ.
ಈಗಲೋ ಆಗಲೋ ಬೀಳಬಹುದು ಎನ್ನುವ ಮನೆ, ಮಣ್ಣಿನ ಗೋಡೆಗೆ ಮಳೆ ನೀರು ಸಿಡಿದು ಬಿರುಕುಬಿಟ್ಟ ಗೋಡೆ, ಗೋಡೆ ಬುಡದಲ್ಲಿ ಹೆಗ್ಗಣ ಕೊರೆದ ಬಿಲ. ಇಡೀ ಮನೆ ವಾತಾವರಣ ಭಯ ಬೀಳಿಸುತ್ತದೆ. ಕುಂದಾಪುರ ಪುರಸಭೆ ಕೋಡಿ ವಾರ್ಡ್ನಲ್ಲಿ ವಾಸಿಸುತ್ತಿರುವ ಲಕ್ಷ್ಮೀ ದೇವಿ ಪೈ ಯಾನೆ ಪ್ರೇಮಲತಾ ಎಂಬವರ ಮನೆ ಬದುಕು ಎಲ್ಲವೂ ಸಾಹಸ. ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡಿ ಮನೆಗೆ ಬಂದರೆ ಮನೆ ಎಲ್ಲಿ ಕುಸಿಯುತ್ತದೋ ಎಂಬ ಭಯದಲ್ಲಿ ರಾತ್ರಿ ಕಳೆಯಬೇಕು. ಮಳೆ ನೀರು ಒಳ ಬಾರದಂತೆ ಮಾಡಿಗೆ ಟರ್ಪಾಲ್ ಹೊದೆಸಿದ್ದು, ಮಳೆ ನೀರು ಮನೆ ಒಳಗೆ ಜಿನುಗದಿದ್ದರೂ, ಗೋಡೆಗೆ ಮಳೆನೀರು ಎರಚಿ ಬೀಳುವ ಸ್ಥಿತಿಯಲ್ಲಿದೆ. ಕಲ್ಲುಗಳು ಕಳಚಿಕೊಳ್ಳುವ ಸ್ಥಿತಿ ಇದೆ. ಮನೆಯ ಕಿಟಕಿಗಳಿಗೆ ಬಾಗಿಲೇ ಇಲ್ಲ! ಮನೆಯೊಳಗೆ ಹಾವು ಬರುವುದೂ ಉಂಟು. ಒಟ್ಟಾರೆ ಲಕ್ಷ್ಮೀ ದೇವಿ ಅಂಗೆ„ಯಲ್ಲಿ ಜೀವ ಹಿಡಿದು ಬದುಕುತ್ತಿದ್ದಾರೆ.
ಸಮಾಜ ಸ್ಪಂದಿಸಬೇಕಾಗಿದೆ…
ಲಕ್ಷ್ಮೀ ದೇವಿ ಹುಟ್ಟೂರು ಮೂಡಬಿದಿರೆ. ತವರು ಮನೆಯಲ್ಲಿ ಸುಖವಾಗಿದ್ದುದು ಬಿಟ್ಟರೆ ವೈವಾಹಿಕ ಬದುಕು ಕಷ್ಟಕೋಟಲೆಗಳ ಸರಮಾಲೆ. ಪತಿ ದಿಣಮಂಜುನಾಥ ಪೈ. ಮದುವೆ ನಂತರ ಲಕ್ಷ್ಮೀ ಅವರು ಕೋಡಿಯಲ್ಲಿ ನೆಲೆಸಿದರು. ಪತಿ ಮೊದಲು ಅಡುಗೆ ವೃತ್ತಿ ಮಾಡಿಕೊಂಡಿದ್ದು, ಅನಂತರ ಖಾಸಗಿ ಅಂಗಡಿಯೊಂದರ ಭದ್ರತಾ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕಾಡಿದ ಅನಾರೋಗ್ಯ ಪತಿಯ ಕೆಲಸವನ್ನೇ ನುಂಗಿ ಹಾಕಿತು. ಎಂಟು ವರ್ಷ ಮಂಜುನಾಥ ಪೈ ಕುರ್ಚಿಯಲ್ಲಿ ಬಂಧಿಯಾದರು. ಪತಿಯ ಜವಾಬ್ದಾರಿ ಕೂಡಾ ಮಕ್ಕಳಿಲ್ಲದ ಲಕ್ಷ್ಮೀ ದೇವಿ ಮೇಲೆ ಬಿತ್ತು. ಆದರೂ ಧೃತಿಗೆಡದೆ,ಬೀಡಿಕಟ್ಟಿ, ಯಾರ್ಯಾರಧ್ದೋ ತೋಟದಲ್ಲಿ ಬಿದ್ದ ತೆಂಗಿನ ಮಡಿಲು ಆಯ್ದು ಹಿಡಿಸೂಡಿ ಕಟ್ಟಿ ಜೀವನ ನಿರ್ವಹಣೆ ಜತೆ ಪತಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಮೂರು ವರ್ಷದ ಹಿಂದೆ ಪತಿ ನಿಧನರಾಗಿದ್ದು ಈಗ ಕುಂದಾಪುರದಲ್ಲಿ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸರಕಾರದಿಂದ ವಿಧವಾ ವೇತನ ಬರುತ್ತಿದೆ.
ಪುರಸಭೆಗೆ ನೆರವಿಗೆ ಮನವಿ
ಕುಂದಾಪುರದಲ್ಲಿ ಕಳೆದ ಮೂರು ವರ್ಷದಿಂದ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ರಾತ್ರಿ ಮನೆಯಲ್ಲಿ ಉಳಿಯುತ್ತೇನೆ. ಮನೆ ಮಾಡು ಸೋರುತ್ತಿದ್ದರಿಂದ ಮಳೆಗಾದಲ್ಲಿ ಬೀಳಬಾರದು ಎಂದು ಟರ್ಪಾಲ್ ಹೊದಿಸಿದ್ದು, ಮಣ್ಣಿನಗೋಡೆ ಆಗಿದ್ದರಿಂದ ಮಳೆ ನೀರು ಸಿಡಿದು ಇಡೀ ಗೋಡೆಗೆ ಥಂಡಿ ಆವರಿಸಿದ್ದರಿಂದ ಗೋಡೆ ಬೀಳುವ ಸ್ಥಿತಿಯಲ್ಲಿದೆ. ಪುರಸಭೆ ಯಾವುದಾದರೂ ಯೋಜನೆಯಲ್ಲಿ ಮನೆ ಮಂಜೂರು ಮಾಡಿದರೆ, ನನ್ನ ಮನೆಯಲ್ಲಿ ನೆಮ್ಮದಿಯ ಗಂಜಿ ಕುಡಿಯುತ್ತೇನೆ.
– ಲಕ್ಷ್ಮೀ ದೇವಿ ಪೈ, ಶಿಥಿಲ ಮನೆಯಲ್ಲಿ ವಾಸಮಾಡುತ್ತಿರುವ ಹಿರಿಯ ಮಹಿಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ