ಮಾನವೀಯತೆ ಮೆರೆದವರ ಗುರುತಿಸಿದ ಗುಲ್ಬರ್ಗದ ವಕೀಲ


Team Udayavani, Jan 31, 2018, 12:25 PM IST

31-26.jpg

ಮಂಗಳೂರು: ದುಷ್ಕರ್ಮಿಗಳಿಂದ ದಾಳಿಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅಮಾಯಕ ಜೀವಗಳಿಬ್ಬರ ರಕ್ಷಣೆಗೆ ಧಾವಿಸಿ ಮಾನವೀಯತೆ ಮೆರೆದ ಮಹನೀಯರಿಬ್ಬರಿಗೆ ತಲಾ 50,000 ರೂ. ಪುರಸ್ಕಾರ ನೀಡಿ ಅಭಿನಂದಿಸುವ ಮೂಲಕ ಗುಲ್ಬರ್ಗದ ನ್ಯಾಯವಾದಿ ಪಿ. ವಿಲಾಸ್‌ ಕುಮಾರ್‌ ಮಾದರಿಯಾಗಿದ್ದಾರೆ.

ಜ. 3ರಂದು ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ಮಚ್ಚಿನೇಟಿಗೆ ಬಲಿಯಾಗಿ ಬಿದ್ದಿದ್ದ ದೀಪಕ್‌ ರಾವ್‌ ಅವರ ರಕ್ಷಣೆಗೆ ಧಾವಿಸಿದ್ದ ಅಬ್ದುಲ್‌ ಮಜೀದ್‌ ಹಾಗೂ ಆದೇ ದಿನ ರಾತ್ರಿ ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಜೀವನ್ಮರಣ ಸ್ಥಿತಿ ಯಲ್ಲಿದ್ದ ಬಶೀರ್‌ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿದ ಶೇಖರ್‌ ಕುಲಾಲ್‌ ಅವರಿಗೆ ಪಿ. ವಿಲಾಸ್‌ ಕುಮಾರ್‌ ಅವರು ಕಳುಹಿಸಿಕೊಟ್ಟಿರುವ ತಲಾ 50,000 ರೂ. ಮೊತ್ತದ ಚೆಕ್‌ ಅನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಪರ ಜಿಲ್ಲಾಧಿಕಾರಿ ಕುಮಾರ್‌ ಅವರು ನೀಡಿ ಅಭಿನಂದಿಸಿದರು.

ನೈಜ ಮಾನವತಾವಾದಿಗಳು
ಚೆಕ್‌ಗಳೊಂದಿಗೆ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರಿಗೆ ಪತ್ರವೊಂದನ್ನು ಬರೆದಿರುವ ಪಿ. ವಿಲಾಸ್‌ ಕುಮಾರ್‌ ಅವರು “ಅಬ್ದುಲ್‌ ಮಜೀದ್‌ ಹಾಗೂ ಶೇಖರ್‌ ಅವರು ಮಾಡಿರುವ ಉದಾತ್ತ ಕಾರ್ಯವನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಮಜೀದ್‌ ಹಾಗೂ ಶೇಖರ್‌ ಮತ್ತು ಅವರ ಸ್ನೇಹಿತ ತಮ್ಮ ಜೀವಕ್ಕೆ ಎದುರಾಗಬಹುದಾದ ಅಪಾಯಗಳನ್ನು ಲೆಕ್ಕಿಸದೆ, ಜಾತಿ, ಧರ್ಮ ನೋಡದೆ ರಕ್ಷಣೆಗೆ ಧಾವಿಸುವ ಮೂಲಕ ತಾವು ನಿಜವಾದ ಮಾನವತಾವಾದಿಗಳು ಮತ್ತು ಜಾತ್ಯತೀತ ವಾದಿಗಳೆಂದು ತಮ್ಮನ್ನು ಸಾಬೀತುಪಡಿಸಿದ್ದಾರೆ. ಸಮಾಜದಲ್ಲಿ ದ್ವೇಷ ವನ್ನು ಹರಡಲು ಪ್ರಯತ್ನಿಸುವ ವ್ಯಕ್ತಿಗಳಿಗೆ ಇವರು ಮಾದರಿಯಾಗಿದ್ದಾರೆ. ಇವರಿಗೆ ನಾನು ಸೆಲ್ಯೂಟ್‌ ಮಾಡುತ್ತೇನೆ ಮತ್ತು ದ.ಕ. ಜಿಲ್ಲೆಗೆ ಇವರು ನೀಡಿರುವ ಸಂದೇಶ ಬಹು ಕಾಲ ಉಳಿಯಬೇಕು’ ಎಂದು ಹೇಳಿದ್ದಾರೆ.

ಸರಕಾರವೂ ಅಭಿನಂದಿಸಲಿ
“ಮಜೀದ್‌ ಮತ್ತು ಶೇಖರ್‌ ಅವರ ಪರಿಚಯ ನನಗಿಲ್ಲ. ನಾನು ಶ್ರೀಮಂತನಲ್ಲ. ಓರ್ವ ಸಾಮಾನ್ಯ ನ್ಯಾಯವಾದಿ. ನಾನು ಯಾವುದೇ ಪ್ರಚಾರಕ್ಕೋಸ್ಕರ ಈ ಚೆಕ್‌ಗಳನ್ನು ಅವರಿಗೆ ಕಳುಹಿಸಿಕೊಡುತ್ತಿಲ್ಲ. ಸಮಾಜ ದಲ್ಲಿ ದ್ವೇಷ, ಅಶಾಂತಿಯನ್ನು ಹರಡುವ ಉದ್ದೇಶದಿಂದ ಇಂದು ಕೆಲವು ಮಂದಿ ಕೊಲೆ ಮಾಡಲು, ಮೂಗು, ನಾಲಗೆ, ಕಿವಿ ಕತ್ತರಿಸಲು ಲಕ್ಷ, ಕೋಟಿ ರೂಪಾಯಿಗಳ ಬಹುಮಾನ ಘೋಷಿಸುವುದನ್ನು ಕಾಣು ತ್ತಿದ್ದೇವೆ. ಇಂತಹ ಶಕ್ತಿಗಳಿಗೆ ಉತ್ತರ ನೀಡುವ ಹಾಗೂ ಜಾತ್ಯತೀತವಾದ ಮತ್ತು ಶಾಂತಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹಾಗೂ ಮಜೀದ್‌ ಹಾಗೂ ಶೇಖರ್‌ ಅವರು ಮಾಡಿರುವ ಉದಾತ್ತ ಕಾರ್ಯವನ್ನು ಗೌರವಿಸಿ ಅವರಿಗೆ ತಲಾ 50,000 ರೂ. ಮೊತ್ತದ ಚೆಕ್‌ಗಳನ್ನು ಕಳುಹಿಸುತ್ತಿದ್ದೇನೆ. ಮಾನವೀ ಯತೆ, ಜಾತ್ಯತೀತವಾದದ ಮೇಲೆ ನಂಬಿಕೆ ಇರುವವರಿಂದ ಮಾತ್ರ ಇವರಿಗೆ ಅಭಿನಂದನೆಗಳು ದೊರೆ ತರೆ ಸಾಲದು. ಸರಕಾರದಿಂದಲೂ ಅಭಿ ನಂದನೆ ಗಳು ಸಲ್ಲ ಬೇಕು. 800 ಕಿ.ಮೀ. ದೂರದಲ್ಲಿರು ವುದ ರಿಂದ ಮತ್ತು ಕೆಲವು ಪೂರ್ವನಿರ್ಧರಿತ ಕೆಲಸಗಳ ಕಾರಣದಿಂದಾಗಿ ನನಗೆ ವೈಯಕ್ತಿಕ ವಾಗಿ ಅಲ್ಲಿಗೆ ಬರಲಾಗುತ್ತಿಲ್ಲ. ಆದುದ ರಿಂದ ನನ್ನ ಈ ಚೆಕ್‌ಗಳನ್ನು ಇಬ್ಬ ರಿಗೆ ಹಸ್ತಾಂ ತರಿಸ ಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ’ ಎಂದ ವರು ಜಿಲ್ಲಾಧಿಕಾರಿಯವರನ್ನು ಕೋರಿದ್ದರು. 

ಜಿಲ್ಲಾಧಿಕಾರಿಯವರು ತುರ್ತು ಕಾರ್ಯ ಕ್ರಮ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಇರದ ಕಾರಣ ಅಪರ ಜಿಲ್ಲಾಧಿಕಾರಿಯವರು ಚೆಕ್‌ಗಳನ್ನು ಹಸ್ತಾಂತರಿಸಿದರು. ಚೆಕ್‌ ಸ್ವೀಕರಿಸಿದ ಅಬ್ದುಲ್‌ ಮಜೀದ್‌ ಮತ್ತು ಶೇಖರ ಕುಲಾಲ್‌ ಅವರು ಮಾತನಾಡಿ, ಎಲ್ಲಕ್ಕಿಂತಲೂ ಮಾನವೀಯ ತೆಯೇ ಮುಖ್ಯ ಎಂದರು. ಚೆಕ್‌ ವಿತರಣೆ ಸಮಾರಂಭದಲ್ಲಿ ಡಿಸಿಪಿ ಹನುಮಂತರಾಯ ಉಪಸ್ಥಿತರಿದ್ದರು.

ಜೀವ ಉಳಿಸಲು ನೆರವಾಗಿ 
ಯಾವುದೇ ವ್ಯಕ್ತಿ ಅಪಘಾತಕ್ಕೀಡಾದಾಗ, ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದಾಗ ಅಥವಾ ಇನ್ನಿತರ ತುರ್ತು ಸಂದರ್ಭಗಳಲ್ಲಿ ಅವರ ರಕ್ಷಣೆಗೆ ಧಾವಿಸುವ ಮೂಲಕ ಮಾನವೀàಯತೆ ಮತ್ತು ಸಾಮಾಜಿಕ ಕಳಕಳಿಯನ್ನು ಎಲ್ಲರೂ ತೋರ್ಪಡಿಸಬೇಕು ಮತ್ತು ಜೀವ ಉಳಿಸಲು ಸಹಾಯ ಮಾಡಬೇಕು. ಸಹಾಯ ಮಾಡಿದವರ ರಕ್ಷಣೆಗೆ ಕಾನೂನು ಕೂಡ ನೆರವಿಗೆ ಬರುತ್ತದೆ ಎಂದು ಡಿಸಿಪಿ ಹನುಮಂತರಾಯ ಸಾರ್ವಜನಿಕರಲ್ಲಿ ಕೋರಿದರು.

ಟಾಪ್ ನ್ಯೂಸ್

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.