ಮೂಲರಪಟ್ಣದಿಂದ ತೂಗುಸೇತುವೆವರೆಗೆ ಬಾರದ ಬಸ್‌ಗಳು!


Team Udayavani, Sep 20, 2018, 9:54 AM IST

20-sepctember-1.jpg

ಎಡಪದವು: ಮೂಲರಪಟ್ಣ ಸೇತುವೆ ಕುಸಿದು ಹಲವು ತಿಂಗಳುಗಳೇ ಕಳೆದಿವೆ. ಆದರೆ ಇಲ್ಲಿ ಬಸ್‌ ಬಾರದೆ ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆ ಈಗಲೂ ಮುಂದುವರಿದಿದೆ. ಸೇತುವೆ ಕಡಿತಗೊಂಡ ಬಳಿಕ ಗಂಜಿಮಠ, ಕುಪ್ಪೆಪದವು, ಮಾರ್ಗದಂಗಡಿ, ಮುತ್ತೂರುನಿಂದ ಮೂಲರ ಪಟ್ಣ, ಬಂಟ್ವಾಳ ಸಂಪರ್ಕ ಕಡಿತದಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಮುತ್ತೂರು ತೂಗುಸೇತುವೆಯಿಂದ ಗಂಜಿಮಠ, ಕೈಕಂಬ, ಎಡಪದವು, ಬಜಪೆ, ಸುರತ್ಕಲ್‌ ಭಾಗಕ್ಕೆ 8 ಖಾಸಗಿ ಬಸ್‌ಗಳಿವೆ. ಮುತ್ತೂರು ಶಾಲೆಯ ಬಳಿ ನಿರ್ಮಿಸಿದ ರಸ್ತೆಯಲ್ಲಿ ತಂಗುವ ಬಸ್‌ಗಳು ಅಲ್ಲಿಂದ ಮತ್ತೆ ತೆರಳುತ್ತವೆ.

ಅದೇ ರೀತಿ ಸೇತುವೆ ಮುರಿದು ಬಿದ್ದ ಭಾಗವಾದ ಮೂಲರಪಟ್ಣ ಸಮೀಪದ ಮಸೀದಿಯಿಂದ 2 ಖಾಸಗಿ ಹಾಗೂ 2 ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಖಾಸಗಿ ಬಸ್‌ ಗಳು ಮೂಲರಪಟ್ಣದಿಂದ ಬಿ.ಸಿ. ರೋಡ್‌ ವರೆಗೆ ಹಲವು ಟ್ರಿಪ್‌ ಇದೆ. ಅದರಲ್ಲಿ ಒಂದು ಬಸ್‌ ಮೂಲರಪಟ್ಣದಿಂದ ಕೊಳತ್ತಮಜಲ್‌, ಪೊಳಲಿಯಿಂದ ಕೈಕಂಬವರೆಗೆ ಬರುತ್ತಿದೆ. ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲಿಂದ ಬಿ.ಸಿ. ರೋಡ್‌ ಮುಖಾಂತರ ಸ್ಟೇಟ್‌ಬ್ಯಾಂಕ್‌ಗೆ ಸಂಚರಿಸುತ್ತವೆ. ಸೇತುವೆ ಸಂಪರ್ಕ ಕಡಿತಗೊಂಡಿದ್ದರಿಂದ ಬಸ್‌ಗಳಲ್ಲಿ ಹಿಂದಿನಷ್ಟು ಪ್ರಯಾಣಿಕರಿರದಿರುವುದು ಬಸ್‌ ಮಾಲಕರಿಗೂ ಸಮಸ್ಯೆಯಾಗಿ ಪರಿಣಮಿಸಿದೆ.

ತೂಗುಸೇತುವೆಯವರೆಗೆ ಬಾರದ ಬಸ್‌ಗಳು
ಬಿ.ಸಿ. ರೋಡ್‌ನಿಂದ ಬರುವ ಬಸ್‌ಗಳು ಮೂಲರಪಟ್ಣ ಸಮೀಪದ ಮಸೀದಿಯವರೆಗೆ ಬಂದು ಅಲ್ಲಿಂದಲೇ ರೌಂಡ್‌ ಹೊಡೆದು ತೆರಳುತ್ತವೆ. ಇಲ್ಲಿಂದ ತೂಗುಸೇತುವೆಯವರೆಗೂ ರಸ್ತೆ ನಿರ್ಮಿಸಲಾಗಿದ್ದರೂ ಅಲ್ಲಿ ತನಕ ಬಸ್‌ ಗಳು ಬರುವುದಿಲ್ಲ.  ಆದ್ದರಿಂದ ಮುತ್ತೂರಿಗೆ ತೆರಳುವ ಪ್ರಯಾಣಿಕರು ತೂಗುಸೇತುವೆಯಿಂದ ಮಸೀದಿವರೆಗೆ ಸುಮಾರು ಒಂದು ಕಿ.ಮೀ. ನಡೆದುಕೊಂಡು ಹೋಗಬೇಕಾಗುತ್ತದೆ. ನೂತನ ರಸ್ತೆಗೆ ಮೋರಿ ಅಳವಡಿಸಿದ್ದು, ಆದರೆ ಅದು ಗಟ್ಟಿಮುಟ್ಟಾಗಿಲ್ಲ. ಜತೆಗೆ ಅಗಲ ಕಿರಿದಾಗಿರುವುದು ಸಮಸ್ಯೆಯಾಗಿದೆ ಎನ್ನುತ್ತಾರೆ ಸ್ಥಳೀಯರು.

ತೂಗುಸೇತುವೆ ಸಮೀಪ ಬಸ್‌ಗಳು ತಿರುಗುವಷ್ಟು ಜಾಗವಿದ್ದರೂ ಬಸ್‌ಗಳು ಅಲ್ಲಿ ತನಕ ಹೋಗದ ಕಾರಣ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ. ಭಾರದ ವಸ್ತುಗಳೇನಿದ್ದರೂ ಅವುಗಳನ್ನು ಹೊತ್ತುಕೊಂಡು ಸಾಗಬೇಕು. ಆದರೆ ಮಸೀದಿಯಿಂದ ತೂಗುಸೇತುವೆಯವರೆಗೆ ರಿಕ್ಷಾಗಳು ಸಂಚರಿಸುತ್ತವೆ. ಸೇತುವೆ ಕುಸಿದ ಸಂದರ್ಭದಲ್ಲಿ ಈ ಭಾಗಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿದ್ದು, ತೂಗುಸೇತುವೆಯವರೆಗೂ ಬಸ್‌ಗಳು ಸಂಚರಿಸಬೇಕು ಎಂದು ಆದೇಶಿಸಿದ್ದರೂ ಈವರೆಗೆ ಬಸ್‌ಗಳು ಬಂದಿಲ್ಲ ಎನ್ನುತ್ತಾರೆ ಸ್ಥಳೀಯರು.

ಸೇತುವೆ ಮುರಿದುಬಿದ್ದ ಸಂದರ್ಭದಲ್ಲಿ ತಂಡೋಪತಂಡವಾಗಿ ಬಂದಿರುವ ಅಧಿಕಾರಿಗಳು, ರಾಜಕಾರಣಿಗಳು ಬಳಿಕ ಬಂದಿಲ್ಲ. ಅಲ್ಲದೇ ಜನರ ಸಮಸ್ಯೆಯನ್ನೂ ಕೇಳಿಲ್ಲ. ಅಲ್ಲಿ ನಡೆದಿರುವ ಬೆಳವಣಿಗೆಯೇನು ಎಂದೂ ಅರಿಯುವ ಪ್ರಯತ್ನವನ್ನು ಮಾಡಿಲ್ಲ ಎನ್ನುವುದು ಸ್ಥಳೀಯರ ಆರೋಪ.

ವಾಹನ ಮಾಲಕರಿಗೆ ನೋಟಿಸ್‌
ಮೂಲರಪಟ್ಣ ಸೇತುವೆಯಿಂದ ತೂಗು ಸೇತುವೆ ತನಕ ಬಸ್‌ ಬರುವುದಿಲ್ಲ ಎಂಬ ವಿಚಾರದ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಯಾವುದೆಲ್ಲ ಬಸ್‌ಗಳು ಅಲ್ಲಿ ತನಕ ಬರುವುದಿಲ್ಲ ಎಂದು ತಿಳಿದು, ಮೋಟಾರು ವಾಹನ ಮಾಲಕರಿಗೆ ನೋಟಿಸ್‌ ನೀಡಲಾಗುವುದು.
 - ರಮೇಶ್‌ ವರ್ನೇಕರ್‌,
    ಉಪ ಸಾರಿಗೆ ಆಯುಕ್ತರು, ಆರ್‌ಟಿಒ ಮಂಗಳೂರು

 ಗಿರೀಶ್‌ ಮಳಲಿ

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.