ರಾಣೆ ಸಂಪುಟಕ್ಕೆ ಬಂದ್ರೆ ಸರ್ಕಾರಕ್ಕೆ ಗುಡ್‌ಬೈ


Team Udayavani, Nov 2, 2017, 10:53 AM IST

uddhav-thackeray.jpg

ಮುಂಬಯಿ: ರಾಜ್ಯದ  ಮಾಜಿ ಮುಖ್ಯಮಂತ್ರಿ ನಾರಾಯಣ  ರಾಣೆ ಅವರನ್ನು ಸಚಿವ ಸಂಪುಟಕ್ಕೆ  ಸೇರ್ಪಡೆ ಗೊಳಿಸಿದ್ದೇ ಆದಲ್ಲಿ ಪಕ್ಷ  ಸರಕಾರದಿಂದ ಹೊರನಡೆಯಲಿದೆ ಎಂದು ಶಿವಸೇನೆ  ಮುಖ್ಯಮಂತ್ರಿ  ಫ‌ಡ್ನವೀಸ್‌ಗೆ ನೇರ ವಾಗಿ ಬೆದರಿಕೆ ಒಡ್ಡಿದೆ ಎನ್ನಲಾಗಿದೆ. ಶಿವಸೇನೆ  ವರಿಷ್ಠ ಉದ್ಧವ್‌ ಠಾಕ್ರೆ  ಅವರ  ಆಪ್ತ ಸಹಾಯಕ ಮಿಲಿಂದ್‌ ನಾರ್ವೇಕರ್‌ ಅವರ ಮೂಲಕ  ಮುಖ್ಯಮಂತ್ರಿಯವರಿಗೆ ಈ  ಸಂದೇಶವನ್ನು  ರವಾನಿಸಲಾಗಿದೆ ಎನ್ನಲಾಗಿದೆ. ಆದರೆ ಮುಖ್ಯಮಂತ್ರಿ  ದೇವೇಂದ್ರ ಫ‌ಡ್ನವೀಸ್‌ ಶಿವಸೇನೆಯ ಆಪ್ತ ಸಹಾಯಕನಿಂದ ಎಚ್ಚರಿಕೆಯನ್ನು ಪಡೆಯುವಷ್ಟು ಅನಿವಾರ್ಯ ಪರಿಸ್ಥಿತಿ ತನಗಿನ್ನೂ ಬಂದೊದಗಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

ಮಿಲಿಂದ್‌ ನಾರ್ವೇಕರ್‌ ಅವರು ಕಳೆದ ವಾರ ಮುಖ್ಯಮಂತ್ರಿ  ದೇವೇಂದ್ರ ಫ‌ಡ್ನವೀಸ್‌ ಅವರನ್ನು  ಭೇಟಿ ಯಾಗಿ  ನಾರಾಯಣ ರಾಣೆ ಸಂಪುಟ ಸೇರ್ಪಡೆಯನ್ನು  ಶಿವಸೇನೆ  ವರಿಷ್ಠ  ಉದ್ಧವ್‌ ವಿರೋಧಿಸುತ್ತಿರುವ  ಮಾಹಿತಿಯನ್ನು ಅವರಿಗೆ ತಲುಪಿಸಿದರು ಎನ್ನಲಾಗಿದೆ. 

ಒಂದೇ ವೇಳೆ  ರಾಣೆ ಅವರನ್ನು  ಸಂಪುಟಕ್ಕೆ  ಸೇರ್ಪಡೆಗೊಳಿಸಿದ್ದೇ  ಆದಲ್ಲಿ  ಸರಕಾರದ  ಸ್ಥಿರತೆಯ  ಬಗೆಗೆ  ಶಿವಸೇನೆಯನ್ನು  ಅವಲಂಬಿಸದಿರುವಂತೆ  ನಾರ್ವೇಕರ್‌  ಸ್ಪಷ್ಟ ಮಾತುಗಳಲ್ಲಿ ಫ‌ಡ್ನವೀಸ್‌ಗೆ  ಎಚ್ಚರಿಕೆಯನ್ನು  ನೀಡಿದ್ದಾರೆ ಎನ್ನಲಾಗಿದೆ.                   

ಫ‌ಡ್ನವೀಸ್‌  ತಿರುಗೇಟು
ಆದರೆ ಈ ಕುರಿತಾಗಿನ  ವರದಿಗಳ  ಬಗೆಗೆ  ಪ್ರತಿಕ್ರಿಯೆ ನೀಡಿದ  ಮುಖ್ಯಮಂತ್ರಿ ದೇವೇಂದ್ರ  ಫ‌ಡ್ನವೀಸ್‌ ಅವರು “ನಾರ್ವೇಕರ್‌  ಓರ್ವ ಸಭ್ಯ ವ್ಯಕ್ತಿ. ಆದರೆ ರಾಜಕಾರಣಿಯೋರ್ವರನ್ನು  ಎನ್‌ಡಿಎ  ತೆಕ್ಕೆಗೆ  ಸೇರ್ಪಡೆಗೊಳಿಸುವ  ಕುರಿತಂತೆ  ಅವರಿಂದ  ಪಾಠ ಹೇಳಿಸಿಕೊಳ್ಳುವಂತಹ  ಅನಿವಾರ್ಯತೆ ಸೃಷ್ಟಿಯಾಗಿಲ್ಲ’ ಎಂದರು. 

ನಾರಾಯಣ ರಾಣೆ ಅವರು  ಶಿವಸೇನೆ ನಾಯಕರಲ್ಲವಾಗಿದ್ದು  ಅವರ ಸೇರ್ಪಡೆಗೆ  ಸಂಬಂಧಿಸಿದಂತೆ  ಪಕ್ಷಕ್ಕೆ  ಯಾವುದೇ  ಆಕ್ಷೇಪವಿರಬಾರದು. ಈ ಹಿಂದೆ  ರಾಣೆ ಅವರು ಶಿವಸೇನೆಯಲ್ಲಿದ್ದರಾದರೂ ಆ ಬಳಿಕ  ಕಾಂಗ್ರೆಸ್‌ಗೆ  ಸೇರ್ಪಡೆಯಾಗಿದ್ದರು. ಇದೀಗ ಕಾಂಗ್ರೆಸ್‌  ತೊರೆದು  ತಮ್ಮದೇ ಆದ  ಪಕ್ಷವನ್ನು  ರಚಿಸಿದ್ದಾರೆ. ರಾಣೆ  ಅವರ  ಪಕ್ಷ  ಎನ್‌ಡಿಎಗೆ  ಬೆಂಬಲ ನೀಡಿದ್ದು  ಅವರು  ತನ್ನ  ಸಂಪುಟವನ್ನು  ಸೇರ್ಪಡೆಗೊಳ್ಳುವ ಅಭಿಲಾಷೆಯನ್ನು  ವ್ಯಕ್ತಪಡಿಸಿದ್ದಾರೆ. ರಾಣೆ ಅವರನ್ನು ಸಂಪುಟಕ್ಕೆ  ಸೇರ್ಪಡೆಗೊಳಿಸುವ ವಿಚಾರದಲ್ಲಿ ಪಕ್ಷ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.  ಆದರೆ  ಶಿವಸೇನೆಯ ಯಾವನೇ ಓರ್ವ ನಾಯಕನನ್ನು ಬಿಜೆಪಿಗೆ ಸೇರ್ಪಡೆಗೊಳಿಸದಿರಲು  ಪಕ್ಷ  ನಿರ್ಧರಿಸಿದೆ ಎಂದವರು ಹೇಳಿದರು. ರಾಜ್ಯ ಮತ್ತು ರಾಷ್ಟ್ರ  ಮಟ್ಟದಲ್ಲಿ ಎನ್‌ಡಿಎಯನ್ನು ಬಲಪಡಿಸಲು ಎಲ್ಲಾ  ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ಹಲವಾರು ಸಣ್ಣ  ಪಕ್ಷಗಳು  ಎನ್‌ಡಿಎಯನ್ನು  ಬೆಂಬಲಿಸುತ್ತಿವೆ.ರಾಣೆ ಅವರೂ ಎನ್‌ಡಿಎಯನ್ನು ಬೆಂಬಲಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು. 

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.