ಕೇರಳ ಸಂತ್ರಸ್ತರಿಗೆ ವಿಶೇಷ ಸಾಲ
Team Udayavani, Sep 4, 2018, 6:00 AM IST
ಹೊಸದಿಲ್ಲಿ: ಕೇರಳ ಪ್ರವಾಹದಿಂದ ಹಾನಿಗೊಂಡಿರುವ ಮನೆಗಳ ಮಾಲೀಕರ ನೆರವಿಗೆ ಬಂದಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ), ಮನೆ ರಿಪೇರಿಗಾಗಿ ಕಡಿಮೆ ಬಡ್ಡಿ ದರವುಳ್ಳ ಸಾಲ ನೀಡಲು ಮುಂದಾಗಿದೆ. ಮನೆ ದುರಸ್ತಿ ಅಥವಾ ಮರು ನಿರ್ಮಾಣ ಮಾಡ ಬಯಸುವ ಸಂತ್ರಸ್ತರಿಗೆ 10 ಲಕ್ಷ ರೂ.ಗಳವರೆಗಿನ ಸಾಲಕ್ಕೆ ವಾರ್ಷಿಕ ಶೇ. 8.45ರ ಬಡ್ಡಿ ದರ ನಿಗದಿ ಪಡಿಸಿರುವ ಬ್ಯಾಂಕ್, ಈ ಸಾಲ ಪಾವತಿಗೆ ಸಾಮಾನ್ಯವಾಗಿ ವಿಧಿಸಲಾಗುವ ಪ್ರೊಸೆಸಿಂಗ್ ಶುಲ್ಕದಿಂದ ವಿನಾಯ್ತಿ ನೀಡಿದೆ. ಎಲ್ಐಸಿ ಹೌಸಿಂಗ್ ಸಂಸ್ಥೆ ಕೂಡ, ಮನೆ ರಿಪೇರಿ ಅಥವಾ ಮರು ನಿರ್ಮಾಣ ಮಾಡ ಬಯಸುವವರಿಗೆ ಶೇ. 8.50ರ ಬಡ್ಡಿ ದರದಲ್ಲಿ 15 ಲಕ್ಷ ರೂ.ವರೆಗೆ ಸಾಲ ನೀಡಲು ಹಾಗೂ ಮುತ್ತೂಟ್ ಹೋಂ ಫೈನಾನ್ಸ್ ಸಂಸ್ಥೆ ದೀರ್ಘಾವಧಿ ಗೃಹ ಸಾಲ ನೀಡಲು ಮುಂದಾಗಿದೆ.
ಕೇಂದ್ರ ಗರಂ: ಕೇರಳ ಪ್ರವಾಹ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡದ್ದಕ್ಕೆ ಕೇಂದ್ರ ಸರಕಾರ ಅಸಮಾಧಾನ ವ್ಯಕ್ತ ಪಡಿಸಿದೆ. ಅಲ್ಲಿ ಹವಾಮಾನ ಪ್ರತಿಕೂಲವಾಗಿ ಅದು ತಾರಕಕ್ಕೇರುತ್ತದೆ ಎಂದಷ್ಟೇ ಮಾಹಿತಿ ನೀಡಿತ್ತು. ಆದರೆ, ಅಗಾಧ ಮಳೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿರಲಿಲ್ಲ ಎಂದು ಕೇಂದ್ರ ಬೇಸರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ