ಸಮರ್ಥ ಪೌಷ್ಟಿಕಾಂಶ ಪೂರೈಕೆಯಿಂದ ಅನೇಕ ಜೀವ ರಕ್ಷಣೆ ಸಾಧ್ಯ: ಮೋದಿ
Team Udayavani, Feb 12, 2019, 12:30 AM IST
ಮಥುರಾ: “ದೇಶದ ಪ್ರತಿ ತಾಯಿಗೆ ಹಾಗೂ ಮಗುವಿಗೆ ಅತ್ಯಗತ್ಯ ಪೌಷ್ಟಿಕ ಆಹಾರ ತಲುಪಿಸುವ ಅಭಿಯಾನದಲ್ಲಿ ನಾವು ಯಶಸ್ವಿಯಾದರೆ, ಹಲವು ಜೀವಗಳನ್ನು ಉಳಿಸಿದಂತಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಥುರಾದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಮೂಲದ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆಯ ಸಮಾರಂಭವೊಂದರಲ್ಲಿ ಅವರು ಮಾತನಾಡಿದರು.
17 ವರ್ಷಗಳ ಹಿಂದೆ ಬೆಂಗಳೂರು ಮೂಲದ ಇಸ್ಕಾನ್ ಸಂಸ್ಥೆ “ಅಕ್ಷಯ ಪಾತ್ರೆ’ ಯೋಜನೆಯಡಿ ಆರಂಭಿಸಿದ್ದ ಬಡಮಕ್ಕಳಿಗೆ ಉಚಿತ ಅನ್ನದಾನ ಸೇವೆಯು 300 ಕೋಟಿ ಊಟದ ಗಡಿ ಮುಟ್ಟಿದ್ದು, ಈ ಹಿನ್ನೆಲೆಯಲ್ಲಿ, 300ನೇ ಕೋಟಿಯ ಊಟವನ್ನು ಬಡಿಸಲು ಇಸ್ಕಾನ್ ಸಂಸ್ಥೆ ಪ್ರಧಾನಿಗೆ ಆಹ್ವಾನ ನೀಡಿತ್ತು. ಈ ಹಿನ್ನೆಲೆಯಲ್ಲಿ, ಮಥುರಾದ ಬೃಂದಾವನ ಚಂದ್ರೋದಯ ಮಂದಿರಕ್ಕೆ ಆಗಮಿಸಿದ್ದ ಮೋದಿ, ಬಡಮಕ್ಕಳಿಗೆ ಊಟ ಬಡಿಸಿದರು. ಕೆಲವರಿಗೆ ತಮ್ಮ ಕೈಯಾರೆ ಊಟ ಮಾಡಿಸಿದರು.
ಯೋಚನೆ ಮಾಡದೇ ಅರ್ಹರಿಗೆ ನೀಡುವ ದೇಣಿಗೆಯು ಸಾತ್ವಿಕ ದಾನ ಎನಿಸಿಕೊಳ್ಳುತ್ತದೆ. “ಅಕ್ಷಯ ಪಾತ್ರೆ’ಯ ಎಲ್ಲ ಸಿಬಂದಿಯಿಂದ ದೇಶಕ್ಕೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ಶ್ಲಾ ಸಿದ ಅವರು, ಭಾರತದ ಸಂಪ್ರದಾಯ ಹಾಗೂ ಸಂಸ್ಕೃತಿಯಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ ಎಂದೂ ಹೇಳಿದರು. ಹಸಿವು ಮುಕ್ತ ಭಾರತಕ್ಕಾಗಿ ಶ್ರಮಿಸುತ್ತಿರುವ ಅಕ್ಷಯ ಪಾತ್ರೆಯಂಥ ಎನ್ಜಿಒಗಳ ಸೇವೆಯನ್ನು ಶ್ಲಾಘಿಸಿದರು.
ದೇಣಿಗೆ ಕೊಟ್ಟ ಪಿಎಂ ಮೋದಿ
ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಕ್ಷದ ಚುನಾವಣಾ ನಿಧಿಗೆ ತಲಾ 1 ಸಾವಿರ ರೂ. ದೇಣಿಗೆ ನೀಡಿದ್ದಾರೆ. ನಮೋ ಆ್ಯಪ್ ಮೂಲಕ ದೇಣಿಗೆ ಪಾವತಿಸಿದ್ದಾರೆ. ಈ ವೇಳೆ ಮಾತನಾಡಿದ ಅಮಿತ್ ಶಾ “ನಮ್ಮ ಪಕ್ಷ ಕಾರ್ಯಕರ್ತರು ನೀಡಿದ ದೇಣಿಗೆಯಿಂದಲೇ ನಡೆಯುತ್ತದೆಯೇ ವಿನಃ ದೊಡ್ಡ ಹಣದ ಗಂಟನ್ನು ಅವಲಂಬಿಸಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!