ದುಬೈ ತೀಯಾ ಸಮಾಜ: ಶಾಲೆಗೆ ಕಂಪ್ಯೂಟರ್ ಕೊಡುಗೆ
Team Udayavani, Jul 22, 2018, 12:14 PM IST
ಮುಂಬಯಿ: ತೀಯಾ ಸಮಾಜ ಯುಎಇ ಇದರ ವತಿಯಿಂದ ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದ ಸಂಚಾಲಕತ್ವದ ಕನಿಲ ಆಂಗ್ಲ ಮಾಧ್ಯಮಿಕ ಶಾಲೆಗೆ ಸುಮಾರು ಹತ್ತು ಕಂಪ್ಯೂಟರ್ ಹಾಗೂ ಅದಕ್ಕೆ ಬೇಕಾದ ಪೀಠೊಪಕರಣ ಹಾಗೂ ಇತರ ವಸ್ತುಗಳನ್ನು ಜು. 16 ರಂದು ಜರಗಿದ ಸಮಾರಂಭದಲ್ಲಿ ನೀಡಲಾಯಿತು.
ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ತೀಯಾ ಸಮಾಜ ಯುಎಇ ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಮಚಂದ್ರ ಬಂಗೇರ ಮರೋಳಿ ಅವರು ವಿವಿಧ ಸೌಲಭ್ಯಗಳಿಗೆ ಚಾಲನೆ ನೀಡಿದರು. ತೀಯಾ ಸಮಾಜ ಯುಎಇ ಇದರ ಅಧ್ಯಕ್ಷ ಮನೀಷ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಅಮರ್ ಉಮೇಶ್ ನಂತೂರು ಹಾಗೂ ಕಾರ್ಯನಿರ್ವಾಹಕ ಸಮಿತಿಯ ಇತರ ಸದಸ್ಯರ ನೇತೃತ್ವದಲ್ಲಿ ತವರೂರಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಈ ರೀತಿಯ ನೆರವನ್ನು ನೀಡಲಾಯಿತು.
ಸುಮಾರು ಹದಿನೈದು ವರ್ಷಗಳ ಹಿಂದೆ ದುಬೈಯ ಜನಪ್ರಿಯ ಸಂಘಟಕ ದಿ| ಉಮೇಶ ನಂತೂರರ ನೇತೃತ್ವದಲ್ಲಿ, ಸಮಾಜ ಸೇವಕಿ ಶ್ರೀಮತಿ ಬಿಸಾಜಾಕ್ಷಿಯವರ ಸಹಾಯದಿಂದ, ಮುಂಬಯಿಯ ಸಮಾಜ ಸೇವಕ, ಪತ್ರಕರ್ತ ಈಶ್ವರ ಎಂ. ಐಲ್ ಇವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ತೀಯಾ ಸಮಾಜ ದುಬೈ ಇದೀಗ ತವರೂರಲ್ಲಿ ನೆಲೆಸಿರುವ ಸಮಾಜದ ಸ್ಥಾಪಕ ಉಪಾಧ್ಯಕ್ಷರುಗಳಾದ ಸದಾಶಿವ ಬಿ. ಎಂ., ಯೋಗೇಶ್ ಉಳ್ಳಾಲ…, ಸ್ಥಾಪಕ ಕೋಶಾಧಿಕಾರಿ ನಾಗೇಶ್ ಸುವರ್ಣ ಮತ್ತಿತರ ನೇತೃತ್ವದಲ್ಲಿ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸಂಘಟನ ಸ್ಥಾಪನೆಯಾದ ಕೆಲವೇ ಸಮಯದಲ್ಲಿ ಮುಂಬಯಿಯ ಉದ್ಯಮಿ ಕುಮಾರ್ ಬಂಗೇರರ ಪ್ರೊತ್ಸಾಹದೊಂದಿಗೆ ದಾನಿಗಳ ಸಹಾಯದಿಂದ ಊರಲ್ಲಿ ಶೈಕ್ಷಣಿಕ ನೆರವನ್ನು ನೀಡಲು ಸೂಕ್ತ ಮೊತ್ತವನ್ನು ಠೇವಣಿಯಾಗಿಟ್ಟು ಕಳೆದ ಹಲವಾರು ವರ್ಷಗಳಿಂದ ಮಂಗಳೂರು, ಮಂಜೇಶ್ವರ ಪರಿಸರಗಳಲ್ಲಿ ಉತ್ತಮ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸುತ್ತಾ ಬರುತ್ತಿದೆ. ಮುಂದಿನ ವರ್ಷದ ಆದಿಯಲ್ಲಿ ತೀಯಾ ಸಮಾಜ ಯುಎಇ ತನ್ನ ಹದಿನೈದನೆಯ ಹುಟ್ಟು ಹಬ್ಬವನ್ನು ಅದ್ದೂರಿಯಿಂದ ಆಚರಿಸಲಿದೆ ಎಂದು ಇದೇ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್