ಕರಾವಳಿ ಅಪರಾಧ ಸುದ್ದಿಗಳು
Team Udayavani, Feb 9, 2019, 12:11 AM IST
ಬಾರೆಬೈಲ್: ವಿವಾಹಿತೆ ನಾಪತ್ತೆ
ಮಂಗಳೂರು: ನಗರದ ಬಾರೆಬೈಲಿನ ವಿವಾಹಿತ ಮಹಿಳೆ ರಾಧಿಕಾ ಯಾನೆ ಅಕ್ಷತಾ (21) ಅವರು ಫೆ. 6ರಂದು ನಾಪತ್ತೆಯಾಗಿದ್ದಾರೆ.
ಗಂಡ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾಧಿಕಾ ಮನೆಯಲ್ಲಿದ್ದು, 11.30ರ ವೇಳೆಗೆ ಮಾವ ನಲ್ಲಿ (ಗಂಡನ ತಂದೆ) ಇಸ್ತ್ರಿ ಅಂಗಡಿಗೆಂದು ಹೇಳಿ ಹೋಗಿದ್ದು, ವಾಪಸ್ ಬಂದಿಲ್ಲ. ಮರಾಠಿ ಮತ್ತು ಕನ್ನಡ ಮಾತನಾಡುವ ಈಕೆಯ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಕದ್ರಿ ಪೊಲೀಸರಿಗೆ ತಿಳಿಸಲು ಕೋರಲಾಗಿದೆ.
ಉಡುಪಿ: ಬಸ್ಸಿನಿಂದ ಬಿದ್ದು ಮಹಿಳೆ ಗಂಭೀರ
ಉಡುಪಿ: ಪ್ರಯಾಣಿಕರು ಇಳಿಯುವ ಮೊದಲೇ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಫೆ.7ರಂದು ಉಡುಪಿ ಎಂಜಿಎಂ ಕಾಲೇಜಿನ ಲೇಡಿಸ್ ಹಾಸ್ಟೆಲ್ ಬಳಿ ಸಂಭವಿಸಿದೆ.
ಮಣಿಪಾಲದಿಂದ ಉಡುಪಿ ಮಾರ್ಗವಾಗಿ ಚಲಿಸುತ್ತಿದ್ದ ಬಸ್ಸಿನಲ್ಲಿ ಘಟನೆ ಸಂಭವಿಸಿದ್ದು, ತಲೆಗೆ ಗಾಯವಾಗಿರುವ ತಾರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಸಂತೋಷನ ವಿರುದ್ಧ ಪ್ರಕರಣ ದಾಖಲಾಗಿದೆ.
ವೇಶ್ಯಾವಾಟಿಕೆ: ಸೆರೆ
ಮಂಗಳೂರು: ನಗರದ ಓಲ್ಡ್ ಕೆಂಟ್ ರಸ್ತೆಯ ಲಾಡ್ಜ್ ನಲ್ಲಿ ವೇಶ್ಯವಾಟಿಕೆ ಆರೋಪ ದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ಹೊಸಬಾಳೆ ಗ್ರಾಮದ ಗುರುನಾಥ (39)ನನ್ನು ಸಿಸಿಬಿ ಮತ್ತು ಪಾಂಡೇ ಶ್ವರ ಪೊಲೀಸರು ಬಂಧಿಸಿದ್ದಾರೆ. ವಸತಿ ಗೃಹದ ವ್ಯವಹಾರ ನೋಡಿಕೊಳ್ಳುತ್ತಿದ್ದ ಜಗನ್ನಾಥ ಪರಾರಿಯಾಗಿದ್ದಾನೆ.
ಬೈಕ್ ಪಲ್ಟಿ: ಸಾವು
ಕುಂದಾಪುರ: ಕರ್ಕುಂಜೆ ಗ್ರಾಮದ ಹಿಲ್ಕೂಡಿನಲ್ಲಿ ನಾಯಿ ಅಡ್ಡ ಬಂದ ಕಾರಣದಿಂದ ಬೈಕಿನಿಂದ ಬಿದ್ದು ಗಾಯಗೊಂಡಿದ್ದ ಹರಿಶ್ಚಂದ್ರ ಶೆಟ್ಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅವರು ಜ.14ರಂದು ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಹರಿಶ್ಚಂದ್ರ ಶೆಟ್ಟಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮಣಿಪಾಲದ ಆಸ್ಪತ್ರೆಯಲ್ಲಿ ಫೆ.7ರಂದು ಮೃತ ಪಟ್ಟಿದ್ದಾರೆ.
ಬೈಕ್ ಸ್ಕಿಡ್: ಯುವಕ ಸಾವು
ಕುಂದಾಪುರ: ಕೋಟೇಶ್ವರ ಗ್ರಾಮದ ಅರಳುಗುಡ್ಡೆ ರಸ್ತೆಯ ಶ್ರೀ ಹೈಗುಳಿ ಬೊಬ್ಬರ್ಯ ದೈವಸ್ಥಾನದ ತಿರುವಿನಲ್ಲಿ ಗುರುವಾರ ಬೈಕ್ ಸ್ಕಿಡ್ ಆಗಿ ಸಾಲಿಗ್ರಾಮ ಸಮೀಪದ ಕಾರ್ಕಡ ಗ್ರಾಮದ ಕಾಳ ಪೂಜಾರಿ ಅವರ ಪುತ್ರ ಸತೀಶ್ (36)ಮೃತಪಟ್ಟಿದ್ದಾರೆ.
ಅವರು ಬೈಕಿನಲ್ಲಿ ಕೋಟೇಶ್ವರ ಕಡೆಯಿಂದ ಹಳೆ ಅಳಿವೆ ಕಡೆಗೆ ಹೋಗುತ್ತಿದ್ದಾಗ ಸ್ಕಿಡ್ ಆಗಿ ರಸ್ತೆಗೆ ಬಿದ್ದರು. ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಸತೀಶ್ ಮೃತಪಟ್ಟಿರುವುದಾಗಿ ಘೋಷಿಸಿದರು.
ಗಾರೆ ಕಾರ್ಮಿಕರಾಗಿದ್ದ ಇವರು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಪ್ರಯಾಣದ ವೇಳೆ ಸ್ಕಿಡ್ ಆಗಲು ಕಾರಣ ಎಂದು ಹೇಳಲಾಗುತ್ತಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಹಲವರಿಗೆ ಹುಚ್ಚು ನಾಯಿ ಕಡಿತ
ಕಾರ್ಕಳ: ನಗರದ ಅನಂತಶಯನ ವಠಾರದಲ್ಲಿ ಫೆ. 7ರಂದು ಹುಚ್ಚು ನಾಯಿಯೊಂದು ಮಗು ಸಹಿತ 8 ಮಂದಿಗೆ ಕಚ್ಚಿ ಗಾಯಗೊಳಿಸಿದೆ. ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್