ಬೆಳಂದೂರಿನ 10 ಸೆಂಟ್ಸ್‌ ಜಾಗದಲ್ಲಿ ತರಹೇವಾರಿ ಕೃಷಿ


Team Udayavani, Jan 9, 2019, 10:14 AM IST

8-january-1.jpg

ಬೆಳಂದೂರು : ಇಲ್ಲೊಬ್ಬರು ಕೇವಲ 10 ಸೆಂಟ್ಸ್‌ ಜಾಗದಲ್ಲಿ ತರಾವರಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈಗ ಹಲವು ಎಕ್ರೆ ಜಾಗವಿದ್ದರೂ ಹಾಗೆಯೇ ಹಡೀಲು ಬಿಡುವವರು ಇರುವ ಸಂದರ್ಭದಲ್ಲಿ ಕುದ್ಮಾರಿನ ವೆಂಕಪ್ಪ ಪೂಜಾರಿ ಅವರ ಕೃಷಿಯ ಉತ್ಸಾಹ ಮಾದರಿಯಾಗಿ ಕಾಣುತ್ತದೆ.

ವೆಂಕಪ್ಪ ಪೂಜಾರಿ ಅವರು ತಮ್ಮ 10 ಸೆಂಟ್ಸ್‌ ಜಾಗದಲ್ಲಿ ಹಲವು ಬಗೆಯ ಕೃಷಿ ಮಾಡಿದ್ದಾರೆ. ಜಾಂಗಿ, ಚಂದ್ರ ಬಾಳೆ, ಜಿ9, ಕ್ಯಾವೆಂಡೀಸ್‌, ಮೈಸೂರು, ಕದಳಿ, ನೇಂದ್ರ ಬಾಳೆಗಿಡಗಳು ಒಟ್ಟು 50, ತೆಂಗು 5, ತೈವಾನ್‌ ಪಪ್ಪಾಯಿ 5, ನುಗ್ಗೆ 10 ಗಿಡಗಳಲ್ಲದೆ ಬನಾರಸ್‌, ಸೇಲಂ ಹಾಗೂ ಊರಿನ ತಳಿಯ ವೀಳ್ಯದೆಲೆ ಬೆಳೆಸಿದ್ದಾರೆ.

ತರಹೇವಾರಿ ತರಕಾರಿ
ಸೋರೆಕಾಯಿ, ಹೀರೆ ಕಾಯಿ, ಬದನೆ, ತೊಂಡೆ, ಬೆಂಡೆ ಕಾಯಿ, ಬಸಳೆ, ಅಲ ಸಂಡೆ, ಮೆಣಸು ಹೀಗೆ ತರಹೇವಾರಿ ತರಕಾರಿಗಳ ಕೃಷಿ ಮಾಡಿದ್ದಾರೆ. ಹಳೆಯ ಗೋಣಿ ಚೀಲಗಳನ್ನು ಬಳಸಿಕೊಂಡು ಅವುಗಳಲ್ಲಿ ತರಕಾರಿ ಬೆಳೆಸಿದ್ದಾರೆ. ಮನೆಯ ಗೋಡೆಗೆ ವೀಳ್ಯದೆಲೆಯ ಬಳ್ಳಿಗಳನ್ನು ಹರಿಯಬಿಟ್ಟಿದ್ದಾರೆ. ಚಿಕ್ಕು, ಸೀತಾಫಲ ಗಿಡಗಳೊಂದಿಗೆ ಮಲ್ಲಿಕಾ ತಳಿಯ ಮಾವಿನ ಮರವೂ ಇಲ್ಲಿದೆ.

ನಾಟಿಕೋಳಿ, ರಿಕ್ಷಾ
ಬಹು ವಿಧದ ಕೃಷಿಯ ಜತೆಗೆ ನಾಟಿಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ನಾಟಿ ಕೋಳಿಗಳಿಗೆ ಹಬ್ಬ ಹರಿದಿನಗಳಲ್ಲೂ ಹೆಚ್ಚು ಹೆಚ್ಚು ಬೇಡಿಕೆ ಇದೆ. ಸ್ವಂತ ರಿಕ್ಷಾ ಹೊಂದಿದ್ದು, ರಿಕ್ಷಾ ಚಾಲಕನಾಗಿ, ಸೈಕಲ್‌ ರಿಪೇರಿ, ಸಾರಣೆ ಕೆಲಸ, ಬಾವಿ ರಚನೆ ಹಾಗೂ ಬಾವಿಗೆ ರಿಂಗ್‌ ಅಳವಡಿಕೆ, ಎಲೆಕ್ಟ್ರಿಶಿಯನ್‌ ಆಗಿ ಹಾಗೂ ಸಂಜೆ ಹೊತ್ತಲ್ಲಿ ಸವಣೂರಿನಲ್ಲಿ ಫಾಸ್ಟ್‌ಫುಡ್‌ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ತನ್ನ ಫಾಸ್ಟ್‌ಫುಡ್‌ ಅಂಗಡಿಯ ಆವರಣದಲ್ಲೂ ತರಕಾರಿ ಕೃಷಿ ಮಾಡಿದ್ದಾರೆ.

ಹವ್ಯಾಸಿ ಕಲಾವಿದ
ವೆಂಕಪ್ಪ ಪೂಜಾರಿ ಅವರು ಹವ್ಯಾಸಿ ಕಲಾವಿದರೂ ಆ ದ್ದಾರೆ. ಜನಪದ, ಸಿನಿಮಾ ಹಾಡುಗಳಿಗೆ ನೃತ್ಯ, ಅತಿಥಿ ಕಲಾವಿದನಾಗಿ ಯಕ್ಷಗಾನ ಹಾಗೂ ನಾಟಕಗಳಲ್ಲಿ ಹಾಸ್ಯಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವರ ಎಲ್ಲ ಕೆಲಸ- ಕಾರ್ಯಗಳಿಗೆ ಪತ್ನಿ ಸುಜಾತಾ, ಪುತ್ರ ಹರ್ಷಿತ್‌ ಸಾಥ್‌ ನೀಡುತ್ತಿದ್ದಾರೆ.

ಜೇನು ಕೃಷಿಕ
ಕಡಿಮೆ ಜಾಗದಲ್ಲಿ ಹೆಚ್ಚು ಕೃಷಿ ಮಾಡುತ್ತಿರುವ ವೆಂಕಪ್ಪ ಪೂಜಾರಿ ಅವರು ಜೇನು ಕೃಷಿಯನ್ನೂ ಮಾಡುತ್ತಿದ್ದಾರೆ. ತಮ್ಮ ಮನೆಯ ಸುತ್ತ ಸುಮಾರು 20 ಜೇನುಪೆಟ್ಟಿಗೆ ಇಟ್ಟು ಜೇನು ಸಾಕಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಇತರರ ಜಾಗದಲ್ಲೂ ಅಂದಾಜು 50 ಪೆಟ್ಟಿಗೆ ಇರಿಸಿ, ಜೇನುಕೃಷಿ ಮಾಡುತ್ತಿದ್ದಾರೆ. ಹೆಚ್ಚು ಔಷಧೀಯ ಗುಣವುಳ್ಳ ಮೊಜೆಂಟಿ ಜೇನನ್ನೂ ಸಾಕಿದ್ದಾರೆ. ಜೇನು ಕೃಷಿಗೆ ಪೂರಕವಾಗಿ ಕಾಡುಜಾತಿಯ ಹೂವಿನ ಗಿಡಗಳನ್ನೂ ಬೆಳೆಸಿದ್ದಾರೆ. ಜೇನು ಕೃಷಿಯ ಜತೆಗೆ ಆಸಕ್ತರಿಗೆ ಜೇನು ಕೃಷಿ ಮಾಹಿತಿ, ತರಬೇತಿ ನೀಡುತ್ತಾರೆ. ಜೇನಿಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆಯಷ್ಟು ಜೇನು ಉತ್ಪಾದನೆ ಮಾಡಲಾಗುತ್ತಿಲ್ಲ. ಪ್ರತೀ ವರ್ಷ ಪೆಟ್ಟಿಗೆಯಲ್ಲಿ ಮಾಡಿದ ಜೇನಿಗೆ ಬೇಡಿಕೆ ಹೆಚ್ಚಳವಾಗುತ್ತಿದೆ ಎಂದು ಹೇಳುತ್ತಾರೆ ವೆಂಕಪ್ಪ ಪೂಜಾರಿ.

ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.