ಮೂರನೇ ಕಣ್ಣು : ಸಂಕೋಚವಿಲ್ಲದೆ ಕನ್ನಡದಲ್ಲೇ ಮಾತಾಡಿ


Team Udayavani, Jun 29, 2018, 8:13 PM IST

kannada-copy-29-6.jpg

ಸ್ವಚ್ಛ, ಹಿತವಾದ ಕನ್ನಡ ಮಾತನಾಡುವುದು ಅತ್ಯಂತ ಹೆಮ್ಮೆಯ ಸಂಗತಿ. ಆದರೆ, ಅದೇನೋ ಕನ್ನಡಕ್ಕೆ ಕನ್ನಡದ ನೆಲದಲ್ಲೇ ಅನೇಕ ಸಂದರ್ಭದಲ್ಲಿ ಇಂಗ್ಲಿಷ್‌ ಪೈಪೋಟಿಗೆ ಇಳಿಯುತ್ತದೆ. ಇಂಗ್ಲಿಷ್‌ ಜಗತ್ತಿನ ಎಲ್ಲೆಡೆ ವ್ಯಾವಹಾರಿಕವಾದ ಭಾಷೆ. ಇಂಗ್ಲಿಷಿನ ಅಗಾಧತೆ ಹೇಗೆಂದರೆ ಇದನ್ನು ಕಡೆಗಣಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ದರಿಂದಲೇ ಕನ್ನಡಿಗರೂ ಅತ್ಯುತ್ತಮ ಕನ್ನಡ ಮಾತನಾಡಿ ಕನ್ನಡಿಗರನ್ನು ಸೆಳೆಯುವುದು ಬಿಟ್ಟು, ಇಂಗ್ಲಿಷ್‌ ಮಾತನಾಡಿ ಬೇರೆಯವರನ್ನು ಸೆಳೆಯುವುದೇ ಮುಖ್ಯ ಎಂದು ಭಾವಿಸುತ್ತಾರೆ. ಹಾಗೆ ಮಾತನಾಡುವಾಗ ಭಾಷಾ ಪ್ರಯೋಗದಲ್ಲಿ ಎಡವುತ್ತಾರೆ. ಹಾಗೆ ಎಡವಿದವರಲ್ಲಿ ನಮ್ಮ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರೂ ಒಬ್ಬರು.

ಕ‌ನ್ನಡದ ಸ್ಪಷ್ಟ ಮಾತುಗಾರಿಕೆ, ಸೊಗಸಾದ ಉಚ್ಚಾರ, ಆ ಏರಿಳಿತಗಳು ಒಟ್ಟಿನಲ್ಲಿ ಕನ್ನಡತನವೆನ್ನುವ ಎಲ್ಲವನ್ನೂ ಕೇಳಿಸಿಕೊಳ್ಳಬೇಕೆಂದರೆ ಕನ್ನಡ ಚಿತ್ರರಂಗದ ದಂತಕತೆ, ವರನಟ ಡಾ ರಾಜಕುಮಾರ್‌ ಚಿತ್ರಗಳನ್ನು ನೋಡಬೇಕು. ಕುಂದಿಲ್ಲದ ಕನ್ನಡದ ಮಾತು ಡಾ| ರಾಜ್‌ಕುಮಾರ್‌ ಅವರದು. ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ’ ಎಂದು ಕುವೆಂಪು ನುಡಿಗಳಿಗೆ ದನಿಯಾದರು ಕೂಡ ಡಾ ರಾಜಕುಮಾರ್‌. ಆ ಮೂಲಕ ಕನ್ನಡದ ಅಸ್ಮಿತೆಯಾಗಿ ಇಂದಿಗೂ ನಮ್ಮ ಜ್ಞಾಪಕಚಿತ್ರ ಶಾಲೆಯಲ್ಲಿ ಮಿನುಗುವ ನಕ್ಷತ್ರವಾಗಿದ್ದಾರೆ. ಇಂತಹ ಕನ್ನಡದ ಸಾರ್ವಭೌಮತೆಗೆ ನಟಸಾರ್ವಭೌಮನಾಗಿ ಮೆರುಗು ಹೆಚ್ಚಿಸಿದ ರಾಜಣ್ಣ ಅವರ ನೆನಪು ಒತ್ತರಿಸಿ ಬಂದಿದ್ದು ನೂತನ ಉನ್ನತ ಶಿಕ್ಷಣ ಸಚಿವರ ಇಂಗ್ಲಿಷ್‌ ಮಾತುಗಳು ಟ್ರೋಲ್‌ ಆದ ಕಾರಣ.

ಸಾವಿರಕ್ಕೂ ಹೆಚ್ಚು ಪ್ರಸ್‌ ಮೀಟ್‌ ಗಳಲ್ಲಿ ಭಾಗವಹಿಸಿದ್ದೇನೆ. ಹೆಚ್ಚಾಗಿ ವಾಣಿಜ್ಯ ಪ್ರಸ್‌ ಮೀಟುಗಳಲ್ಲಿ ಸಹಜವಾಗಿ ಆಂಗ್ಲ ಪತ್ರಕರ್ತರು ಮಳೆ ಬಂದಂತೆ ಇಂಗ್ಲಿಷ್‌ ಮಾತಾಡುತ್ತಾ ಇರುತ್ತಿದ್ದರು. ಅದನ್ನು ಕನ್ನಡದ ಪತ್ರಕರ್ತನಾದ ನನ್ನ ಬಳಿ ಜತೆಗಿದ್ದ ಇತರ ಕನ್ನಡ ಪತ್ರಕರ್ತರು ಠುಸ್‌ ಪುಸ್‌ ಇಂಗ್ಲಿಷ್‌ ಎನ್ನುತಿದ್ದರು. ಕನ್ನಡ ತಿಳಿಯದ ಅಥವಾ ತಿಳಿದೂ ಇಂಗ್ಲಿಷ್‌ ಮಾತನಾಡುವವರ ಪತ್ರಿಕಾಗೋಷ್ಠಿಯಲ್ಲಿ ಇಂಗ್ಲಿಷ್‌ ಭಾಷೆಯೇ ನಡೆಯೋದು. ಕಾಲಕ್ರಮೇಣ ಮಾಧ್ಯಮ ಗೋಷ್ಠಿಗಳಲ್ಲಿ ಕನ್ನಡವೂ ರಾರಾಜಿಸುತ್ತಿತ್ತು. ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಉತ್ತರ ಕನ್ನಡದಿಂದ ಬಂದ ಆಂಗ್ಲ ಪತ್ರಿಕೆಗಳ ಪತ್ರಕರ್ತರೂ ಸೇರಿದಂತೆ ಮುಲಾಜಿಲ್ಲದೇ ಎಲ್ಲರೂ ಕನ್ನಡದಲ್ಲೇ ಮಾತಾಡುತ್ತಾ ವ್ಯವಹರಿಸುತ್ತಿದ್ದೆವು. ಪ್ರಾಯಶಃ ಈಗಲೂ ಹಾಗೇ ವ್ಯವಹರಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳು ಆರಂಭವಾಗುತ್ತಿದ್ದಂತೆ ಒಂದೊಮ್ಮೆ ಇಂಗ್ಲಿಷಿನಲ್ಲಿ ಬರೆಯಬೇಕಾದ ಅನಿವಾರ್ಯತೆ ಇದ್ದರೂ ಈಗ ಅಲ್ಲಿಯೂ ಜಸ್ಟ್‌ ಕನ್ನಡವನ್ನು ಬಳಸಿಕೊಂಡು ಕನ್ನಡದಲ್ಲೇ ಸಂಭಾಷಿಸುತ್ತಿರುವುದು ಕಾಣುತ್ತಿದ್ದೇವೆ. ‘ಗಾಂಚಾಲಿ ಬಿಡಿ ಕನ್ನಡ ಮಾತಾಡಿ’ ಎನ್ನುತ್ತಾ ಯುವ ಗುಂಪೊಂದು ಕನ್ನಡಿಗರನ್ನು ಮುಜುಗರ, ದಾಕ್ಷಿಣ್ಯ ಮತ್ತು ಹಿಂಜರಿಕೆಯಿಲ್ಲದೇ ಕನ್ನಡ ಮಾತಾಡಿ ಎಂದು ಕರೆ ಕೊಡುತ್ತಾ ಕನ್ನಡದ ಪ್ರೀತಿಯನ್ನು ಮೆರೆಯುತ್ತಿದೆ. ಇಷ್ಟೆಲ್ಲ ಬೆಳವಣಿಗೆಯ ನಡುವೆಯೂ ವಿದ್ಯಾವಂತರು ಕುಹಕ ಮಾಡುವುದನ್ನು ಬಿಟ್ಟಿಲ್ಲ ಎನ್ನುವಂತೆ ಮೊನ್ನೆ ಸಚಿವ ಜಿ.ಟಿ. ದೇವೇಗೌಡರ ಆಂಗ್ಲ ಮಾತುಗಳನ್ನು ಗೇಲಿ ಮಾಡಲಾಯಿತು. ಇದರಿಂದ ಯಾವ ಸಾಧನೆ ಮಾಡಿದಂತಾಯಿತು? ಹೀಗೆ ಗೇಲಿ ಮಾಡಿದ ಜನರಲ್ಲಿ ಎಷ್ಟು ಜನ ಸಾರ್ವಜನಿಕ ಸಭೆಗಳಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತಾಡಿದ್ದಾರೆ. ಇಂಥವರ ವೈಯಕ್ತಿಕ ಸಾಧನೆ ಏನು?

ಜಿ.ಟಿ. ದೇವೇಗೌಡರೇ ಇರಲಿ, ಯಾರೇ ಇರಲಿ ಮೊದಲು ಮಾತೃಭಾಷೆಯಲ್ಲಿ ಮಾತಾಡುವ ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು. ಚೀನಾ, ಜಪಾನು ದೇಶದವರ, ರಷ್ಯಾದ ಪುಟಿನ್ನನ ದೇಶಭಾಷಾ ಪ್ರೀತಿಯನ್ನು ಮೆಚ್ಚಿಕೊಳ್ಳದಿರಲು ಸಾಧ್ಯವೇ? ಅವರಿಗೆ ಆಗದ ಮುಜುಗರಗಳು ನಮಗ್ಯಾಕೆ ಆಗುತ್ತವೆ? ನಮಗ್ಯಾಕೆ ನಮ್ಮ ಮಾತೃಭಾಷೆಯಲ್ಲಿ ಮಾತಾಡಲು ಸಂಕೋಚ? ನಾವು ಯಾರನ್ನು ಮೆಚ್ಚಿಸಬೇಕಾಗಿದೆ? ಮೊದಲು ಇಷ್ಟನ್ನು ನಾವು ಯೋಚಿಸಬೇಕು. ನಮ್ಮ ನಾಡಿನ ರಾಜಕಾರಣಿಗಳೇ ಯಾವುದೇ ಭಾಷೆಯ ಪತ್ರಕರ್ತರು ಬಂದರೆ ಧಾರಾಳವಾಗಿ ಕನ್ನಡದಲ್ಲಿ ಮಾತಾಡಿ. ಅವರಿಗೆ ಅಗತ್ಯವಿದ್ದರೆ ಇಂಗ್ಲಿಷಿಗೆ ಅನುವಾದಿಸಿಕೊಳ್ಳಲಿ. ಅವರಿಗೆ ಬೇಕಾಗುವುದು ನಿಮ್ಮ ಉತ್ತರಗಳಷ್ಟೇ ಹೊರತು ನಿಮ್ಮ ಭಾಷಾ ಜಾಣ್ಮೆಯಲ್ಲ. ನಿಮ್ಮ ಭಾಷೆಯ ಮೂಲಕ ನಿಮ್ಮ ಘನತೆಯನ್ನು ಪ್ರಶ್ನಿಸುವವರನ್ನು ನಿರ್ಲಕ್ಷಿಸಿ. ಪತ್ರಿಕೆಗಾಗಲಿ, ವೈಯಕ್ತಿಕ ನೆಲೆಯಲ್ಲಾಗಲಿ ಯಾವುದೇ ರಾಜಕೀಯ ವ್ಯಕ್ತಿಗಳನ್ನು ಸಮರ್ಥಿಸುವ ಅಗತ್ಯವಿಲ್ಲ. ಆದರೆ ಇಲ್ಲಿ ಸಮರ್ಥಿಸಬೇಕಾಗಿ ಬಂದಿರುವುದು ಒಬ್ಬ ವ್ಯಕ್ತಿಯ ಘನತೆಯನ್ನು. ಈ ಹಿಂದೆಯೂ ಪ್ರಧಾನಿ ಮೋದಿಯವರ ಇಂಗ್ಲಿಷು ಉಚ್ಚಾರವನ್ನೂ ಗೇಲಿ ಮಾಡಿದ ಪ್ರಸಂಗಗಳನ್ನೂ ಸ್ಮರಿಸಬಹುದು. ಅಲ್ಲೆಲ್ಲ ಢಾಳಾಗಿ ಕಾಣುವುದು ಮನುಷ್ಯನ ಅಸಹನೆ ಅಷ್ಟೇ.

ಉನ್ನತ ಸ್ಥಾನದಲ್ಲಿ, ಸಾಮಾಜಿಕ ಬದುಕಿನಲ್ಲಿರುವ ವ್ಯಕ್ತಿಗಳ ಬಗ್ಗೆ ಜನಸಾಮಾನ್ಯರಿಗೆ ಯಾವತ್ತೂ ಒಂದು ರೀತಿಯ ಕುತೂಹಲ ಮತ್ತು ಅಷ್ಟೇ ಅಸಹನೆಯಿರುವುದನ್ನು ಕಾಣುತ್ತೇವೆ. ರಾಜಕೀಯ ವ್ಯಕ್ತಿಗಳಿರಬಹುದು, ಕಲಾವಿದರಿರಬಹುದು. ಪತ್ರಿಕೆಯೊಂದರ ಸಂಪಾದಕ ಬದಲಾದ ಎಂದು ತಿಳಿದ ಕೂಡಲೇ ಆ ಸಂಪಾದಕನ ಬಗ್ಗೆ ಕುಹಕ ಮಾತುಗಳನ್ನು ಆಡುವುದು, ಮತ್ತೆ ಆ ಸಂಪಾದಕ ಇನ್ನೊಂದು ಪತ್ರಿಕೆಗೆ ಟವೆಲ್‌ ಹಾಕಿದ್ದಾನೆ ಎನ್ನುವಂತಹ ಕೀಳುಮಟ್ಟದ ಟೀಕೆಗಳನ್ನು ಆಡುತ್ತಾ, ಅವರಿಗೆ ಸಿಗದೇ ಹೋದ ಅವಕಾಶಗಳನ್ನು ಅಥವಾ ಸಿಕ್ಕ ಅವಕಾಶಗಳನ್ನು ಹೇಗೆ ಬಳಸಿಕೊಂಡ ಹೀಗೆ ಎಲ್ಲರೂ ಒಂಥರಾ ತಜ್ಞರಾಗಿ ತಂತಮ್ಮ ಊಹೆಗಳ ಆಧಾರದಲ್ಲಿ ಮಾತಾಡುವುದು ಅಭ್ಯಾಸವಾಗಿದೆ. ಹಾಗೆ ಬರೆದ ವ್ಯಕ್ತಿಗಳೂ ಅದೇ ಸಂಪಾದಕನಲ್ಲಿ ಉದ್ಯೋಗಾವಕಾಶ ಕೇಳಿಕೊಂಡು ಹೋಗಿರುವ ಉದಾಹರಣೆಗಳನ್ನು ನೀಡಬಹುದು. ಇದು ಮನಸ್ಥಿತಿಗಳ ವಿಷಯವಷ್ಟೇ.

ಎಲ್ಲ ನಿರುದ್ಯೋಗಿಗಳ ಹಾಗೆಯೇ ನಾನೂ ಮೂನ್ನೂರ ಅರುವತ್ತೈದು ದಿನಗಳ ಕಾಲ ನಿರುದ್ಯೋಗಿ ಆಗಿದ್ದೆ. ಇಂಗ್ಲಿಷ್‌ ತಿಳಿಯದವರನ್ನು ಗೇಲಿ ಮಾಡಿದಂತೆ, ಉದ್ಯೋಗವಿಲ್ಲದ ನನ್ನನ್ನೂ ಗೇಲಿ ಮಾಡಿದವರಿದ್ದಾರೆ. ನನ್ನ ಕೌಶಲ್ಯವನ್ನೂ ಅವಹೇಳನ ಮಾಡಿದವರಿದ್ದಾರೆ. ಶಿವ ಫೊಟೋ ತೆಗೆಯಲು ಕಾಡಿಗೆ ಹೋಗಿದ್ದರಿಂದ ಕಾಡಿನಿಂದ ನಾಡಿಗೆ ಹುಲಿಗಳು ಬರುತ್ತಿವೆ ಎಂದು ಹೇಳಿದ ಅವಿವೇಕಿಗಳೂ ಇದ್ದಾರೆ. ಈ ಅವಹೇಳನದಿಂದ ನಾನು ಭಯಪಡಲಿಲ್ಲ. ನನ್ನೊಳಗಿನ ಪತ್ರಕರ್ತ ಇನ್ನಷ್ಟು ಗಟ್ಟಿಯಾಗಿದ್ದ. ನನ್ನ ಫೋಟೋಗ್ರಫಿ ಕೌಶಲ್ಯ ಕೂಡಾ ಹೆಚ್ಚಿಸಿಕೊಂಡೆ ಅಷ್ಟೆ. ಹಾಗೆಯೇ ಕನ್ನಡ ಮಾತನಾಡುವುದರಿಂದ ಅವಹೇಳನಕ್ಕೆ ಒಳಗಾಗುತ್ತೇವೆಂದು ನಾವು ಹೆದರಬೇಕಾಗಿಲ್ಲ. ರಾಜಕೀಯ ಪಕ್ಷಗಳು ಸಂಸ್ಕಾರಹೀನರಾಗಿ ಪರಸ್ಪರ ಕೊಳಕು ಮಾತುಗಳನ್ನು ಆಡುವುದು ಸರ್ವೇಸಾಮಾನ್ಯವಾದ ವಿಚಾರವೇ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ರೋಗವಾಗಿ ಬಿಟ್ಟಿದೆ. ಯಾರನ್ನೋ ಗೇಲಿ ಮಾಡಿ ಬಿಟ್ಟರೆ ತಾವೇನೋ ದೊಡ್ಡ ಮನುಷ್ಯರಾಗಿ ಬಿಡುತ್ತೇವೆ ಎನ್ನುವ ಭ್ರಮೆಯಿಂದಲೇ ಬದುಕುತ್ತಾರೆ.

ಆದರೆ ಇಲ್ಲೊಂದು ತಮಾಷೆೆಯಿದೆ. ಇಲ್ಲೂ ರಾಜಕೀಯ ಮತ್ತು ಜಾತಿ ಧರ್ಮಗಳ ಬಣ್ಣ ಹತ್ತಿಸಿಕೊಂಡು ಬಿಡುವುದು. ಹೀಗೆ ಗೇಲಿಗೆ ಗುರಿಯಾದ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಮತ್ತೆ ಅದೇ ಹಳೆಯ ರಾಗವನ್ನು ಹಾಡುವುದೂ ತಮಾಷೆಯಾಗಿ ಕಾಣುತ್ತದೆ. ಭಯಂಕರರು, ಅಸಹನಾ ಭಯಂಕರರು. ಇವರಿಗೆ ಯಾರೂ ಆಗುತ್ತಾರೆ, ಯಾವ ವಸ್ತುವೂ ಆಗುತ್ತದೆ, ಯಾವ ವಿಷಯವೂ ಆಗುತ್ತದೆ. ನಿರಂತರವಾಗಿ ಇವರ ಮನಸ್ಸಿನ ಅಸಹನೆಯನ್ನು ಬಹಿರಂಗ ಮಾಡಿಕೊಳ್ಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಚತುರರು. ಮೊನ್ನೆ ಸಚಿವೆ ಜಯಮಾಲಾ ಅವರು ಹೇಳಿದಂತೆ ‘ಹೊಟ್ಟೆಕಿಚ್ಚಿಗೆ ಔಷಧಿಯಿಲ್ಲ’ ಎನ್ನುವಂತೆ ಇಂಥವರ ಕುಹಕ ಇಂತಹ ಸಂದರ್ಭಗಳಿಂದ ಬಯಲಾಗುತ್ತದೆ ಅಷ್ಟೇ ಹೊರತು ಇಂಥ ವಾಗ್ಧಾಳಿಗಳಿಂದ ಯಾವ ಪುರುಷಾರ್ಥ ಸಾಧನೆಯೂ ಆಗದು.

ಮತ್ತೆ ಕನ್ನಡ ಮಾತಾಡುವ ಯೋಚನೆಗೆ ಬರೋಣ. ದೂರದ ಪಂಜಾಬಿನಿಂದ ಬಂದು ಇಲ್ಲಿ ಅಧಿಕಾರಿಯಾಗಿದ್ದುಕೊಂಡು ಇಲ್ಲೇ ಇರುವ IAS ಅಧಿಕಾರಿ ಚಿರಂಜೀವಿ ಸಿಂಗ್‌ ಅವರ ಸರಳ, ಸುಲಲಿತ ಕನ್ನಡ ನೆನಪಿಗೆ ಬರುತ್ತದೆ. ಸಂಸತ್ತಿನಲ್ಲಿ ಜೆ.ಎಚ್‌.ಪಟೇಲ, ಮುದ್ದಹನುಮೇಗೌಡ, ಪುಟ್ಟರಾಜು ಮೊದಲಾದವರು ಕನ್ನಡದಲ್ಲಿ ಮಾತಾಡಿರುವ ಸಂದರ್ಭವೂ ಇದೆ. ಇಲ್ಲಿನವರೇ ಆದ ಅನೇಕ ಅಧಿಕಾರಿಗಳು ಇಂಗ್ಲಿಷಿನಲ್ಲಿ ಮಾತಾಡುವುದನ್ನು, ಬೇರೆ ರಾಜ್ಯದಿಂದ ಬಂದು ಇಲ್ಲಿ ನೆಲೆಸಿ ಕನ್ನಡ ಮಾತಾಡುವವರನ್ನು ನೋಡುತ್ತೇವೆ. ಇಂಗ್ಲಿಷ್‌ ಮಾತಾಡಿದ ತಕ್ಷಣ ಶ್ರೇಷ್ಠವೆಂದು ನಿರ್ಧರಿಸುವುದು ಅಜ್ಞಾನವೆಂದಷ್ಟೇ ಹೇಳಬಹುದು. ಮಂಗಳೂರಿನ ರೆಸ್ಟೋರೆಂಟ್‌ ಒಂದರಲ್ಲಿ ನೇಪಾಳಿ ಯುವಕ ಸುಲಲಿತವಾಗಿ ತುಳು ಮಾತನಾಡುತ್ತಿದ್ದುದು ನೋಡಿದ್ದೇನೆ. ಇಂಗ್ಲಿಷು ಬಾರದ ಹರೇಕಳ ಹಾಜಬ್ಬ ಕಿತ್ತಳೆ ಮಾರಿ ಶಾಲೆ ಕಟ್ಟಿಸಿರುವುದು ಅವರೊಳಗಿನ ಜ್ಞಾನಿಯನ್ನು ಪರಿಚಯಿಸುತ್ತದೆ. ಜ್ಞಾನಕ್ಕೆ ವಿದ್ಯೆಯ, ಅಕ್ಷರದ ಹಂಗಿಲ್ಲ. ಭಾರಿ ವಿದ್ಯಾವಂತರಲ್ಲದ ಕೃಷಿಯಲ್ಲಿ ಅದ್ಭುತ ಜ್ಞಾನವಿರುವ ಸಾವಿರಾರು ಜನರನ್ನು ಬಲ್ಲೆ. ಅತ್ತಿತ್ತ ಸೂಕ್ಷ್ಮವಾಗಿ ಮಣ್ಣನ್ನು ನೋಡಿ ಇಂಥದೇ ಸ್ಥಳದಲ್ಲಿ ನೀರಿದೆ ಎಂದು ಕರಾರುವಕ್ಕಾಗಿ ಹೇಳುವವರಿದ್ದಾರೆ. ಅವರೆಲ್ಲರನ್ನು ಇಂಗ್ಲಿಷು ಬಾರದೆಂದು ಗೇಲಿ ಮಾಡಿದರೆ ನಾವು ನಮ್ಮ ಸಣ್ಣತನಗಳನ್ನು ಬಹಿರಂಗವಾಗಿಸುತ್ತೇವಷ್ಟೆ. ನಮಗೆ ಹೆಚ್ಚು ಭಾಷೆ ತಿಳಿದಷ್ಟೂ ಅನುಕೂಲವೇ. ಆದರೆ, ನಾವು ಏಕಭಾಷಿಯಾಗಿದ್ದರೂ ತಪ್ಪೇನಲ್ಲ. ಮಂತ್ರಿಗಳು ಏಕಭಾಷಿ­ಗಳಾ­ಗಿದ್ದರೆ ಅನುವಾದಕರನ್ನು ನೇಮಿಸಿಕೊಳ್ಳಬಹುದು. ಅದನ್ನು ಬಿಟ್ಟು ಇಂಗ್ಲಿಷ್‌ ತಿಳಿಯದೆಂದು ಪರಿತಪಿಸಬಾರದು. ಕುಚೋದ್ಯ ನಡೆಸಿ ಟ್ರೋಲ್‌ ಮಾಡುವವರಿಗೆ ಆಹಾರವಾಗಬಾರದು!

— ಶಿವಸುಬ್ರಹ್ಮಣ್ಯ ಕೆ.

ಟಾಪ್ ನ್ಯೂಸ್

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.