ಕುಸ್ತಿ ನಿರೀಕ್ಷೆಗಳು ಜಾಸ್ತಿ
Team Udayavani, Aug 19, 2018, 10:22 AM IST
ಜಕಾರ್ತಾ: ರವಿವಾರದಿಂದಲೇ ಆರಂಭವಾಗಲಿರುವ ಏಶ್ಯಾಡ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಮೇಲೆ ವಿಪರೀತ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಪುರುಷರ ಫ್ರೀಸ್ಟೈಲ್ ಕುಸ್ತಿಯ 6 “ಜಟ್ಟಿ’ಗಳಲ್ಲಿ ಐವರು ರವಿವಾರ ಅದೃಷ್ಟ ಪರೀಕ್ಷೆಗೆ ಇಳಿಯಲಿರುವುದು ವಿಶೇಷ. ಕಾಮನ್ವೆಲ್ತ್ ಬಂಗಾರ ವಿಜೇತ ಭಜರಂಗ್ ಪೂನಿಯ (65 ಕೆಜಿ) ಉಜ್ಬೆಕಿಸ್ಥಾನದ ಸಿರೋಜಿದ್ದಿನ್ ಕಸನೋವ್ ವಿರುದ್ಧ ಸೆಣಸುವುದರೊಂದಿಗೆ ಭಾರತದ ಹೋರಾಟ ಮೊದಲ್ಗೊಳ್ಳಲಿದೆ. ಸತತ 3 ಚಿನ್ನದ ಪದಕಗಳ ಸಾಧನೆಯೊಂದಿಗೆ ಭಜರಂಗ್ ಏಶ್ಯಾಡ್ ಅಖಾಡಕ್ಕೆ ಧುಮುಕಲಿದ್ದಾರೆ. ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್, ಜಾರ್ಜಿಯಾದಲ್ಲಿ ನಡೆದ ಟಿಬಿಸಿಲಿ ಗ್ರ್ಯಾನ್ಪ್ರಿ ಹಾಗೂ ಇಸ್ತಾನ್ಬುಲ್ನಲ್ಲಿ ಜರಗಿದ ಯಾಸರ್ ಡೋಗು ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಜರಂಗ್ ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದರು.
ಒಲಿಂಪಿಕ್ಸ್ನಲ್ಲಿ 2 ವೈಯಕ್ತಿಕ ಪದಕ ಗೆದ್ದ ಭಾರತದ ಏಕೈಕ ಕ್ರೀಡಾಳಾಗಿರುವ ಸುಶೀಲ್ ಕುಮಾರ್, ಟಿಬಿಸಿಲಿ ಗ್ರ್ಯಾನ್ಪ್ರಿ ಕೂಟದ ಮೊದಲ ಸುತ್ತಿನಲ್ಲೇ ಸೋತರೂ ತುಂಬು ಆತ್ಮವಿಶ್ವಾಸದಲ್ಲಿದ್ದಾರೆ. ಇದು ಕಳೆದ 4 ವರ್ಷ ಗಳಲ್ಲಿ ಸುಶೀಲ್ ಅನುಭವಿಸಿದ ಏಕೈಕ ಸೋಲಾಗಿದೆ. ಇವರ ಮೊದಲ ಸುತ್ತಿನ ಎದು ರಾಳಿ ಬಹ್ರೈನಿನ ಅದಾಮ್ ಬಟಿರೋವ್.
ಒಲಿಂಪಿಕ್ಸ್ನಷ್ಟೇ ಕಠಿನ ಸ್ಪರ್ಧೆ
ಇದು ಒಲಿಂಪಿಕ್ಸ್ನಷ್ಟೇ ಕಠಿನ ಸ್ಪರ್ಧೆ ಎಂಬುದಾಗಿ ಭಾರತದ ಕುಸ್ತಿ ಕೋಚ್ಗಳು ಅಭಿಪ್ರಾಯಪಟ್ಟಿದ್ದಾರೆ. ಒಲಿಂಪಿಕ್ಸ್ ಕುಸ್ತಿಯಲ್ಲೂ ಏಶ್ಯನ್ನರದೇ ಪ್ರಾಬಲ್ಯ ಇರುವುದರಿಂದ ಇದು ಏಶ್ಯನ್ ಗೇಮ್ಸ್ನಲ್ಲೂ ಪುನರಾವರ್ತನೆಗೊಳ್ಳುತ್ತದೆ ಎಂಬುದು ಫ್ರೀಸ್ಟೈಲ್ ನ್ಯಾಶನಲ್ ಕೋಚ್ ಜಗ¾ಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಅಷ್ಟೂ ಜಪಾನೀ ವನಿತಾ ಕುಸ್ತಿಪಟುಗಳು ಏಶ್ಯಾಡ್ನಲ್ಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ಗ್ರೀಕೊ ರೋಮನ್ ವಿಭಾಗದಲ್ಲಿ ಸುಲಭ ಡ್ರಾ ಪಡೆದಿರುವ ಹರ್ಪ್ರೀತ್ ಸಿಂಗ್ (87 ಕೆಜಿ) ಪದಕದ ದೊಡ್ಡ ಭರವಸೆಯಾಗಿದ್ದಾರೆ ಎಂಬುದು ಕೋಚ್ ಕುಲದೀಪ್ ಸಿಂಗ್ ಅನಿಸಿಕೆ. 2014ರ ಏಶ್ಯಾಡ್ನಲ್ಲಿ ರಜತ ಪದಕ ಗೆದ್ದ ಭಜರಂಗ್ ಪೂನಿಯ ಮೇಲೂ ಕುಲದೀಪ್ ವಿಶ್ವಾಸ ಹೊಂದಿದ್ದಾರೆ. ಜಪಾನ್ ಮತ್ತು ಇರಾನ್ ಬಲಿಷ್ಠ ಸ್ಪರ್ಧಿಗಳನ್ನು ಹೊಂದಿದ್ದರೂ ಇವರು ಇನ್ನೊಂದು ವಿಭಾಗ ದಲ್ಲಿದ್ದಾರೆ. ಕಳೆದ ಏಶ್ಯಾಡ್ನಲ್ಲಿ ಭಾರತ 5 ಕುಸ್ತಿ ಪದಕಗಳನ್ನು ಗೆದ್ದಿತ್ತು. ಚಿನ್ನ ಜಯಿಸಿದ್ದ ಏಕೈಕ ಸಾಧಕನೆಂದರೆ ಯೋಗೇಶ್ವರ್ ದತ್. ಪುರುಷರ ಗ್ರೀಕೊ ರೋಮನ್, ವನಿತಾ ಸ್ಪರ್ಧೆಗಳು ಸೋಮವಾರದಿಂದ ಆರಂಭವಾಗಲಿವೆ.
ಪದಕ ಹೆಚ್ಚಳ
ಈ ಏಶ್ಯಾಡ್ನಲ್ಲಿ ಭಾರತದ ಕುಸ್ತಿ ಪದಕಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದನ್ನು ಕಾಣಬಹುದು.
-ಕೋಚ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ