ಸಿಂಧು, ಶ್ರೀಕಾಂತ್ ಕ್ವಾರ್ಟರ್ ಫೈನಲ್ಗೆ
Team Udayavani, Nov 9, 2018, 1:21 PM IST
ಫ್ಯೂಜು (ಚೀನ): ಭಾರತದ ಅನುಭವಿ ಶಟ್ಲರ್ಗಳಾದ ಪಿ.ವಿ. ಸಿಂಧು ಹಾಗೂ ಕೆ. ಶ್ರೀಕಾಂತ್ “ಚೀನ ಓಪನ್ ಬ್ಯಾಡ್ಮಿಂಟನ್’ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಶ್ರೀಕಾಂತ್ ಇಂಡೋನೇಶ್ಯದ ಟಾಮಿ ಸುಗಿ ಯಾರ್ಟೊ ವಿರುದ್ಧ 10-21, 21-9, 21-9 ಗೇಮ್ಗಳಿಂದ ಗೆದ್ದರು. ಮೊದಲ ಗೇಮ್ನಲ್ಲಿ ಹಿನ್ನಡೆ ಅನುಭವಿಸಿದ ಶ್ರೀಕಾಂತ್ ಬಳಿಕ ಉತ್ತಮ ಪ್ರದರ್ಶನ ತೋರಿ ಹಿಡಿತ ಸಾಧಿಸಿದರು.
ಶ್ರೀಕಾಂತ್ 2014ರಲ್ಲಿ ಚೀನ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಸ್ನಾಯು ಸೆಳೆತದಿಂದಾಗಿ ಕಳೆದ ಸಲ ಭಾಗವಹಿಸಿರಲಿಲ್ಲ. ಶ್ರೀಕಾಂತ್ ಅವರ ಕ್ವಾ.ಪೈನಲ್ ಎದುರಾಳಿ ಚೈನೀಸ್ ತೈಪೆಯ ಚುಹು ಟಿನ್ ಚೆನ್ ವಿರುದ್ಧ ಆಡಲಿದ್ದಾರೆ. ಟಿನ್ ಚೆನ್ ಜಕಾರ್ತಾ ಏಶ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಕಳೆದ ಮೂರು ವರ್ಷಗಳಲ್ಲಿ 2 ಬಾರಿ ಟಿನ್ ಚೆನ್ ಹಾಗೂ ಶ್ರೀಕಾಂತ್ ಮುಖಾಮುಖೀಯಾಗಿದ್ದು, ಟಿನ್ ಚೆನ್ ಎರಡರಲ್ಲೂ ಗೆದ್ದು ಮೇಲುಗೈ ಸಾಧಿಸಿದ್ದಾರೆ. ಇದಕ್ಕೂ ಮುನ್ನ ಶ್ರೀಕಾಂತ್ 2014 ಹಾಂಕಾಂಗ್ ಓಪನ್ನಲ್ಲಿ ಟಿನ್ ಚೆನ್ ಅವರನ್ನು ಸೋಲಿಸಿದ್ದರು.
ಸಿಂಧು ಸುಲಭ ಗೆಲುವು
ವನಿತಾ ಸಿಂಗಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಸಿಂಧು ಥಾಯ್ಲೆಂಡ್ನ ಬುಸನಾನ್ ಆನ್ಗ್ಬಮ್ರುಂಗಫಾನ್ ಅವರನ್ನು 21-12, 21-15 ನೇರ ಗೇಮ್ಗಳಿಂದ ಸೋಲಿಸಿದರು. ಥಾಯ್ಲೆಂಡ್ ಆಟಗಾರ್ತಿ ಹೆಚ್ಚಿನ ಫೈಪೋ ಟಿ ನೀಡದ ಕಾರಣ ಸಿಂಧುಗೆ ಸುಲ» ಜಯ ಒಲಿಯಿತು.
2016ರಲ್ಲಿ ಚೀನ ಪ್ರಶಸ್ತಿ ಗೆದ್ದಿರುವ ಸಿಂಧು ಮುಂದಿನ ಪಂದ್ಯದಲ್ಲಿ ಆತಿಥೇಯ ನಾಡಿನ ಹೀ ಬಿಂಗ್ಜಾವೊ ಅವರನ್ನು ಎದುರಿಸಲಿದ್ದಾರೆ. ವಿಶ್ವದ 7ನೇ ಶ್ರೇಯಾಂಕಿತೆ ಬಿಂಗ್ಜಾವೊ ಅವರನ್ನು ಎರಡು ಸಲ ಎದುರಿಸಿರುವ ಸಿಂಧು ಎರಡರಲ್ಲೂ ಸೋಲನುಭವಿಸಿದ್ದಾರೆ.
ಡಬಲ್ಸ್ನಲ್ಲೂ ಜಯ
ಪುರುಷರ ಡಬಲ್ಸ್ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಇಂಡೋನೇಶ್ಯದ ವಹ್ಯು ನಾಯಕ ಅರ್ಯ ಪಂಗಾರ್ಯನಿರ-ಅದೆ ಯೂ ಸುಫ್ ಸ್ಯಾಂಟೊಸೊ ವಿರುದ್ಧ 16-21, 21-14, 21-15 ಅಂತರದಿಂದ ಗೆದ್ದು ಕ್ವಾ ಫೈನಲ್ ಪ್ರವೇಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ