ಧವನ್ ಫಾರ್ಮ್; ರೋಹಿತ್ ಸಂತಸ
Team Udayavani, Nov 13, 2018, 6:55 AM IST
ಚೆನ್ನೈ: ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕೂ ಮುನ್ನ ಆರಂಭಕಾರ ಶಿಖರ್ ಧವನ್ ಫಾರ್ಮ್ಗೆ ಮರಳುವುದು ಮುಖ್ಯ ವಾಗಿತ್ತು, ಇದರಲ್ಲಿ ಅವರು ಯಶಸ್ವಿಯಾದದ್ದು ಸಂತಸದ ಸಂಗತಿ ಎಂಬುದಾಗಿ ಭಾರತದ ಟಿ20 ತಂಡದ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ. ಚೆನ್ನೈ ಟಿ20 ಪಂದ್ಯದಲ್ಲಿ 92 ರನ್ ಬಾರಿಸುವ ಮೂಲಕ ಧವನ್ ಭಾರತದ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು.
“ಆಸ್ಟ್ರೇಲಿಯ ಪ್ರವಾಸಕ್ಕೂ ಮುನ್ನ ಕೆಲವು ಆಟಗಾರರು ರನ್ಗಳಿಸುವುದು ಬಹಳ ಅಗತ್ಯವಾಗಿತ್ತು. ಮುಖ್ಯವಾಗಿ ಧವನ್ ಏಕದಿನ ಸರಣಿಗಳಲ್ಲಿ ಉತ್ತಮವಾಗಿ ಆಡುತ್ತಾರೆ. ಆದರೆ, ಉತ್ತಮ ಆರಂಭ ಕಂಡುಕೊಂಡರೂ ಹೆಚ್ಚು ರನ್ಗಳಿಸಲು ಸಾಧ್ಯವಾಗುತ್ತಿಲ್ಲ. ಆಸ್ಟ್ರೇಲಿಯದೆದುರಿನ ಕಠಿನ ಸರಣಿಗೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಅವರ ಮ್ಯಾಚ್ ವಿನ್ನಿಂಗ್ ಆಟ ಉತ್ತಮವಾಗಿತ್ತು. ಈ ಪಂದ್ಯದಲ್ಲಿ ರಿಷಬ್ ಪಂತ್ ಕೂಡ ರನ್ಗಳಿಸಲು ಉತ್ಸುಕರಾಗಿದ್ದರು. 6 ಓವರ್ ಗಳಲ್ಲೇ ನಾವು 2 ವಿಕೆಟ್ ಕಳೆದುಕೊಂಡಿದ್ದೆವು. ಒತ್ತಡದ ಸನ್ನಿವೇಶವನ್ನು ಉತ್ತಮವಾಗಿ ನಿಭಾಯಿಸಿದ ಧವನ್-ಪಂತ್ ಮ್ಯಾಚ್ ವಿನ್ನಿಂಗ್ ಜತೆಯಾಟವಾಡಿ ದರು’ ಎಂದು ರೋಹಿತ್ ಶರ್ಮ ಅಭಿಪ್ರಾಯ ಪಟ್ಟರು.
ಆಸ್ಟ್ರೇಲಿಯ ಸರಣಿ ವಿಭಿನ್ನ
“ಆಸ್ಟ್ರೇಲಿಯಕ್ಕೆ ತೆರಳಿ ಉತ್ತಮ ಪ್ರದರ್ಶನ ನೀಡುವುದು ಯಾವತ್ತೂ ಒಂದು ಸವಾಲು. ಅದೊಂದು ಡಿಫರೆಂಟ್ ಬಾಲ್ ಗೇಮ್. ಪ್ರತಿ ಬಾರಿಯೂ ಅಲ್ಲಿಗೆ ತೆರಳಿದಾಗ ಆಟಗಾರನಾಗಿ, ವ್ಯಕ್ತಿಯಾಗಿ ಹಾಗೂ ತಂಡವಾಗಿ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಆಸ್ಟ್ರೇಲಿಯ ಸರಣಿ ಉಳಿದ ಸರಣಿಗಿಂತಲೂ ವಿಭಿನ್ನ. ಇದೇ ಆತ್ಮವಿಶ್ವಾಸದೊಂದಿಗೆ ಆಸ್ಟ್ರೇ ಲಿಯಕ್ಕೆ ಪ್ರವಾಸ ಬೆಳೆಸಬೇಕು ಹಾಗೂ ಇಲ್ಲಿ ನೀಡಿದ ಪ್ರದರ್ಶನವನ್ನು ಮುಂದುವರಿಯಬೇಕು. ಇದೊಂದು ನಿರಂತಯರ ಪ್ರಕ್ರಿಯೆ…’ ಎಂದು ರೋಹಿತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ