ಕೊಡಗು; ಮಹಾಮಳೆಗೆ ಕೊಚ್ಚಿ ಹೋಯ್ತು ಯುವತಿಯರಿಬ್ಬರ ಮದುವೆ ಕನಸು!
Team Udayavani, Aug 22, 2018, 6:42 PM IST
ಕೊಡಗು: ಮಹಾಮಳೆಗೆ ದಕ್ಷಿಣದ ಕಾಶ್ಮೀರ ಎನಿಸಿಕೊಂಡಿದ್ದ ಕೊಡಗಿನ ಜನರ ಬದುಕು ಕೊಚ್ಚಿ ಹೋಗಿದ್ದರೆ, ಮತ್ತೊಂದೆಡೆ ಒಬ್ಬೊಬ್ಬರದ್ದು ಕರುಣಾಜನಕ ಕಥೆಯಾಗಿದೆ. ಬದುಕಿನಲ್ಲಿ ಹಲವಾರು ನಿರೀಕ್ಷೆ, ಆಸೆಗಳನ್ನು ಇಟ್ಟುಕೊಂಡಿದ್ದ ಇಬ್ಬರು ಯುವತಿಯರ ಸಪ್ತಪದಿ ತುಳಿಯುವ ಕನಸು ಕೊಚ್ಚಿ ಹೋಗಿದೆ.
ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ಮಂಜುಳಾಗೆ ಆಗಸ್ಟ್ 26ರಂದು ಹಾಗು ರಂಜಿತಾಗೆ ಸೆಪ್ಟೆಂಬರ್ 12ರಂದು ಮದುವೆ ನಿಶ್ಚಯವಾಗಿತ್ತು. ಅಷ್ಟೇ ಅಲ್ಲ ಸುಮಾರು 500ಕ್ಕೂ ಅಧಿಕ ಆಮಂತ್ರಣ ಪತ್ರಿಕೆಗಳನ್ನು ಹಂಚಿದ್ದರು.
ಆದರೆ ಏಕಾಏಕಿ ಸುರಿದ ವರುಣನ ಅಬ್ಬರಕ್ಕೆ ಮದುವೆಗಾಗಿ ತೆಗೆದಿಟ್ಟಿದ್ದ ಸೀರೆ, ಬಟ್ಟೆ, ಹಣ, ಚಿನ್ನವೆಲ್ಲಾ ಮನೆಯ ಜೊತೆಯೇ ಕೊಚ್ಚಿ ಹೋಗಿದೆ. ಇದೀಗ ಇಡೀ ಕುಟುಂಬ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದೆ. ಇಬ್ಬರಿಗೂ ಕೇರಳದ ಯುವಕರ ಜೊತೆ ಮದುವೆ ನಿಶ್ಚಯವಾಗಿತ್ತು.
ಮಳೆ, ಪ್ರವಾಹಕ್ಕೆ ಕೇರಳ ಕೂಡಾ ನಲುಗಿ ಹೋಗಿದೆ. ಏತನ್ಮಧ್ಯೆ ವರನ ಕಡೆಯವರು ಆಡಂಬರವಿಲ್ಲದೆ ಮದುವೆಯಾಗಲು ಸಮ್ಮತಿ ಸೂಚಿಸಿದ್ದು, ಈ ಬಗ್ಗೆ ಮನೆಯ ಹಿರಿಯರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಹೋದರಿಯರ ಅಣ್ಣ ಮಾಧ್ಯಮದ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ