ಶತಾಯ ಗತಾಯ ಪ್ರಯತ್ನ


Team Udayavani, Jan 12, 2018, 11:19 AM IST

12-26.jpg

“ನಂಗೆ ಹೆಚ್ಚು ಮಾತಾಡೋಕೆ ಬರಲ್ಲ. ನರ್ವಸ್‌ ಆಗಿದ್ದೀನಿ …’
ಅಂತ ಸಂದೀಪ್‌, ಮುರಳಿಗೆ ಹೇಳಿದ್ದರಂತೆ. ಆದರೆ, ಸಂದೀಪ್‌ ಮೈಕು ಹಿಡಿದು ಮಾತಾಡಿದ್ದು ನೋಡಿ, ಮುರಳಿ ಆಶ್ಚರ್ಯಪಟ್ಟರು. ಇವರೇನಾ ತಮಗೆ ನರ್ವಸ್‌ ಆಗಿದೆ ಎಂದು ಹೇಳಿದ್ದು ಎಂದು ಇನ್ನೊಮ್ಮೆ ಮುಖ ನೋಡಿದರು. ಹಾಗೆ ನೋಡಿದರೆ, ಸಂದೀಪ್‌ ಗೌಡ ಹೇಳಬಾರದ್ದನ್ನೇನೂ ಹೇಳಲಿಲ್ಲ. ತಮ್ಮ ಹೊಸ ಚಿತ್ರದ ಬಗ್ಗೆ ಸ್ವಲ್ಪ ಎಕ್ಸೆ„ಟ್‌ ಆಗಿ ಮಾತನಾಡಿದರು.

“ಇದೊಂದು ಸಸ್ಪೆನ್ಸ್‌-ರಿವೆಂಜ್‌ ಚಿತ್ರ. ನನಗೆ ಚಿತ್ರದ ಬಗ್ಗೆ ಹೆಚ್ಚು ಗೊತ್ತಿಲ್ಲ. ಇಡೀ ತಂಡದ ಸಹಾಯದಿಂದ ಈ ಚಿತ್ರ ಮಾಡಿದೆ. ಟ್ರೇಲರ್‌ ನೋಡಿದರೆ, ಒಬ್ಬ ಹೊಸ ನಿರ್ದೇಶಕ ಮಾಡಿದ್ದಾನೆ ಅಂತನಿಸುವುದಿಲ್ಲ. ಈಗಾಗಲೇ ಚಿತ್ರ ಮುಗಿದಿದೆ. ಫೆಬ್ರವರಿ ಕೊನೆಯ ಹೊತ್ತಿಗೆ ಬಿಡುಗಡೆಯಾಗಲಿದೆ. ನಮ್ಮ ಸಂಗೀತ ನಿರ್ದೇಶಕರು ಬಾವಿ ಇದ್ದಂಗೆ. ಅವರಿಂದ ಚೆನ್ನಾಗಿ ತೋಡಿಕೊಂಡೆ. ಹಾಗಾಗಿ ಒಳ್ಳೆಯ ಹಾಡುಗಳು ಬಂದಿವೆ. ಇನ್ನು ನಮ್ಮ ಮತ್ತು ಪ್ರೇಕ್ಷಕರ ನಡುವೆ, ಮಾಧ್ಯಮದವರು ಸೇತುವೆ ಇದ್ದ ಹಾಗೆ. ಅವರ ಸಹಕಾರದಿಂದಲೇ ನಮಗೆ ಪ್ರೇಕ್ಷಕರನ್ನು ತಲುಪೋಕೆ ಸಾಧ್ಯ. ನಿಮ್ಮೆಲ್ಲರ ಸಹಕಾರ ಇರಲಿ’ ಎಂದು ಬಹಳ ಉತ್ಸಾಹದಿಂದ ಸಂದೀಪ್‌ ಗೌಡ ಹೇಳುತ್ತಾ ಹೋದರು.

ಹಾಗೆ ಅವರು ಮಾತನಾಡಿದ್ದು, “ಶತಾಯ ಗತಾಯ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ. ಈಗಾಗಲೇ ಸಂದೀಪ್‌ ಸದ್ದಿಲ್ಲದೆ ತಮ್ಮ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ರವಿನಂದನ್‌ ಜೈನ್‌ ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಅವರು ಬಿಡುಗಡೆ ಮಾಡಿಸಿದರು. ಅದಕ್ಕಾಗಿ ಮುರಳಿ ಅವರನ್ನೂ ಕರೆಸಿದ್ದರು.
ಮುಖ್ಯ ಅತಿಥಿಯಾಗಿ ಬಂದ ಮುರಳಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಮಾಧ್ಯಮದವರ ಸಹಕಾರ ಇದ್ದರೆ ಚಿತ್ರ ಓಡುತ್ತದೆ ಎಂಬ ನಿರ್ದೇಶಕರ ಹೇಳಿಕೆಯ ಕುರಿತು ಮಾತನಾಡಿದ ಅವರು, “ಮಾಧ್ಯಮದವರು ಚಿತ್ರರಂಗದ ಕೈ ಬಿಟ್ಟಿಲ್ಲ. ಚಿತ್ರ ಇಷ್ಟವಾದರೆ ಒಳ್ಳೆಯ ಮಾತುಗಳನ್ನು ಬರೆಯುತ್ತಾರೆ. ತಪ್ಪು ಮಾಡಿದಾಗ ತಿದ್ದಿದ್ದಾರೆ, ಬೆಳೆಸಿದ್ದಾರೆ, ಉಳಿಸಿದ್ದಾರೆ’ ಎಂದು ಹೇಳಿದರು.

ನಿರ್ದೇಶಕರೇ ಹೇಳಿದಂತೆ “ಶತಾಯ ಗತಾಯ’ ಒಂದು ಸೇಡಿನ ಚಿತ್ರ. ಹಾಸನದ ಹಿರಿಸಾವೆ ಗ್ರಾಮದಲ್ಲಿ ಚಿತ್ರೀಕರಣ ಮಾಡಲಾಗಿದೆ. “ಜಸ್ಟ್‌ ಪಾಸ್‌’ ಚಿತ್ರದಲ್ಲಿ ನಾಯಕನಾಗಿದ್ದ ರಘು ರಾಮಪ್ಪ, ಈ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದಾರೆ. ಇನ್ನು ಸೋನು ಗೌಡ ನಾಯಕಿ. ಅವರ ಜೊತೆಗೆ ಶಿವಪ್ರದೀಪ್‌, ಕುರಿ ಪ್ರತಾಪ್‌, ಗೋವಿಂದೇಗೌಡ ಮುಂತಾದವರು ನಟಿಸಿದ್ದಾರೆ. ಸಂದೀಪ್‌ ಈ ಚಿತ್ರವನ್ನು ನಿರ್ದೇಶಿಸಿರುವುದಷ್ಟೇ ಅಲ್ಲ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಗೆ, ಚಿತ್ರ ನಿರ್ಮಿಸಿ, ಅದರಲ್ಲೊಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಇನ್ನು “ಕೌರವ’ ವೆಂಕಟೇಶ್‌, ಈ ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಾರೆ.

ನಾಯಕ ರಘು ರಾಮಪ್ಪ, ನಾಯಕಿ ಸೋನು ಗೌಡ, ಸಂಗೀತ ನಿರ್ದೇಶಕ ರವಿನಂದನ್‌ ಚಿತ್ರದ ಬಗ್ಗೆ ಮಾತನಾಡಿದರು. 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.