ಸಿನಿಮಾ ಎಂದರೆ ಬೆಚ್ಚಿ ಬೀಳಿಸಬೇಕು


Team Udayavani, Mar 9, 2018, 4:45 PM IST

thanks-koota.jpg

ಇನ್ನೇನು ಎಲ್ಲರೂ ಏಳಬೇಕು ಎನ್ನುವಷ್ಟರಲ್ಲಿ ಒಂದು ಪ್ರಶ್ನೆ ಎದುರಾಯಿತು. ಚಿತ್ರದಲ್ಲಿ ಸ್ವಲ್ಪ ಗೊಂದಲ ಜಾಸ್ತಿಯಾಯಿತು. ಯಾಕೆ ಆ ಗೊಂದಲ ಎಂಬ ಪ್ರಶ್ನೆ ಬರುತ್ತಿದ್ದಂತೆಯೇ, ಇಟ್ಟಿದ್ದ ಮೈಕನ್ನು ಮೇಲಕ್ಕೆತ್ತುಕೊಂಡರು ಸೂರಿ. “ಸಿನಿಮಾ ಎಂದರೆ ಹೀಗೇ ಇರಬೇಕು ಅಂತೇನಿಲ್ಲ. ನಾನು ಮಾಡಿರುವ ಪ್ರಯೋಗ ಹೊಸದೇನಲ್ಲ. ತುಂಬಾ ಆಗಿದೆ. “ಕಡ್ಡಿಪುಡಿ’ ಚಿತ್ರದಿಂದ ನಾನು ಈ ತರಹದ ಪ್ಯಾಟರ್ನ್ ಪ್ರಯತ್ನ ಮಾಡುತ್ತಿದ್ದೀನಿ.

ಅದಕ್ಕೆ ಕಾರಣವೂ ಇದೆ. ಚಿತ್ರದ ಕಥೆ ಬಹಳ ಥಿನ್‌ ಆಗಿದೆ. ಅದನ್ನು ಬೇರೆ ತರಹ ಹೇಳುವ ಪ್ರಯತ್ನ ಮಾಡಬೇಕು. ಸಿನಿಮಾ ಎಂದರೆ ಬೆಚ್ಚಿಬೀಳಿಸಬೇಕು. ಒಂದು ಸಾಧಾರಣ ಕಥೆ ಬೆಚ್ಚಿಬೀಳಿಸಬೇಕು ಎಂದರೆ, ಬೇರೆ ತರಹದ ಪ್ರಯೋಗಗಳನ್ನು ಮಾಡಬೇಕು. ಇದರಿಂದ ಚಿತ್ರದ ಮಾರ್ಕೆಟ್‌ ಹೇಗಿತ್ತು, ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯ್ತು ಅನ್ನೋದು ಮುಖ್ಯ ಅಲ್ಲ. ಜನರಿಗೆ ತಲುಪಿತಾ ಅನ್ನೋದಷ್ಟೇ ಮುಖ್ಯ’ ಎನ್ನುತ್ತಾರೆ ಸೂರಿ.

ಅಂದ ಹಾಗೆ, ಸೂರಿ ಮಾತನಾಡಿದ್ದು ಚಿತ್ರದ ಸಂತೋಷಕೂಟದಲ್ಲಿ. ಅದನ್ನು ಸಂತೋಷಕೂಟ ಎನ್ನಬೇಕೋ ಅಥವಾ ಧನ್ಯವಾದ ಕೂಟ ಎನ್ನಬೇಕೋ ಗೊತ್ತಿಲ್ಲ. ಏಕೆಂದರೆ, ಚಿತ್ರತಂಡದವರೆಲ್ಲರೂ ಅಂದು ಥ್ಯಾಂಕ್ಸ್‌ ಹೇಳ್ಳೋದಕ್ಕೆ ಬಂದಿದ್ದರು. ಹಾಗೆಯೇ ಥ್ಯಾಂಕ್ಸ್‌ ಹೇಳಿದರು ಕೂಡಾ. ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ, ಪ್ರಚಾರ ಕೊಟ್ಟ ಮಾಧ್ಯಮದವರಿಗೆ, ಸಹಕಾರ ಕೊಟ್ಟ ಚಿತ್ರತಂಡದವರಿಗೆ … ಹೀಗೆ ಎಲ್ಲರೂ ಇನ್ನೊಬ್ಬರಿಗೆ ಧನ್ಯವಾದ ಹೇಳುವುದಕ್ಕೆ ತಮ್ಮ ಮಾತುಗಳನ್ನು ಮೀಸಲಾಗಿಟ್ಟರು.

ಅಂದು ನಿರ್ದೇಶಕ ಸೂರಿ ಜೊತೆಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್‌, ಸಂಗೀತ ನಿರ್ದೇಶಕ ಚರಣ್‌ ರಾಜ್‌, ಛಾಯಾಗ್ರಾಹಕ ಮಹೇಂದ್ರ ಸಿಂಹ, ಚಿತ್ರಕ್ಕೆ ಸಂಭಾಷಣೆಗಳನ್ನು ಬರೆದು ಮಂಜು ಮಾಸ್ತಿ, ನಟರಾದ ಶಿವರಾಜಕುಮಾರ್‌, ವಸಿಷ್ಠ ಸಿಂಹ, ಧನಂಜಯ್‌, ಮಾನ್ವಿತಾ ಹರೀಶ್‌, ಭಾವನಾ ಮೆನನ್‌, ಸುಧೀರ್‌ ಸೇರಿದಂತೆ ಹಲವರು ಹಾಜರಿದ್ದರು. ಎಲ್ಲರೂ ಚಿತ್ರ ರೂಪುಗೊಂಡಿದ್ದರ ಜೊತೆಗೆ, ಈಗ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದರು.

ಇನ್ನು “ಟಗರು 2′ ಚಿತ್ರದ ಬಗ್ಗೆಯೂ ಮಾತು ಬಂತು. ಈ ಬಗ್ಗೆ ಮೊದಲು ಮಾತನಾಡಿದ ಶಿವರಾಜಕುಮಾರ್‌, “ಏನೋ ಗಿಮಿಕ್‌ ಮಾಡಿದ್ದಾರೆ. ಮುಂದುವರೆದ ಭಾಗ ಬಂದರೆ ಚೆನ್ನಾಗಿರುತ್ತದೆ. ನನ್ನ ಹತ್ತಿರ ಒಂದಿಷ್ಟು ವಿಷಯಗಳಿವೆ. ಇವೆಲ್ಲಾ ಮುಗಿದ ಮೇಲೆ ಸೂರಿ ಜೊತೆಗೆ ಮಾತಾಡುತ್ತೀನಿ’ ಎಂದರು. ಇನ್ನು ಇದೇ ವಿಷಯವನ್ನು ಸೂರಿ ಬಳಿ ಕೇಳಿದಾಗ, “ಶಿವರಾಜಕುಮಾರ್‌ ಅವರ ಪಾತ್ರವನ್ನು ಎಷ್ಟು ಬೇಕಾದರೂ ಮುಂದುವರೆಸಬಹುದು’ ಎಂದು ಹೇಳುವ ಮೂಲಕ ಪತ್ರಿಕಾಗೋಷ್ಠಿ ಮುಗಿಸಿದರು.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.