ಆನಂದ, ಸ್ಫೂರ್ತಿಗಾಗಿ ಭಕ್ತಿ ಚಿತ್ರ ನೋಡಿ …


Team Udayavani, Apr 20, 2018, 6:15 AM IST

Sri-Mouneshwara-Mahatme_(14.jpg

ಮೊದಲು ಒಂದು ವೀಡಿಯೋ ಆಲ್ಬಂ ಮಾಡಿ, ಅದರ ಮೂಲಕ ಮೌನೇಶ್ವರರ ಮಹಾತ್ಮೆಯನ್ನು ಸಾರಬೇಕು ಎಂದುಕೊಂಡಿದ್ದರಂತೆ ಭೀಮರಾಜ್‌ ವಜ್ರದ್‌. ಆ ಆಲ್ಬಂನ ಹಾಡುಗಳಿಗೆ ಅವರೇ ಸಾಹಿತ್ಯ ಬರೆಯುವುದಕ್ಕೆ ಮುಂದಾದರಂತೆ. ಆದರೆ, ವೀಡಿಯೋ ಮಾಡುತ್ತಾ ಮಾಡುತ್ತಾ, ಮೌನೇಶ್ವರರ ಪವಾಡ ಹಾಗೂ ಮಹಾತೆ¾ಗಳನ್ನು ಹೇಳುವುದಕ್ಕೆ ಇದು ಚಿಕ್ಕ ಮಾಧ್ಯಮ ಎಂದನಿಸಿತಂತೆ. ಯಾಕೆ ಒಂದು ಚಿತ್ರ ಮಾಡಿ ಅಲ್ಲಿ  16ನೇ ಶತಮಾನದ ಪವಾಡ ಪುರುಷರಾದ ಮೌನೇಶ್ವರರ ಮಹಾತ್ಮೆ ತೋರಿಸಬಾರದು ಎಂಬ ಐಡಿಯಾ ಬಂದಿದ್ದೇ ತಡ, ಅವರು “ಶ್ರೀ ಮೌನೇಶ್ವರ ಮಹಾತ್ಮೆ’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಮುಂದಿನ ತಿಂಗಳು ಈ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ತೀರ್ಮಾನ ಮಾಡಿರುವ ಭೀಮರಾಜ್‌, ಅದಕ್ಕೂ ಮುನ್ನ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

“ಶ್ರೀ ಮೌನೇಶ್ವರ ಮಹಾತ್ಮೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಡಾ. ಚಂದ್ರಶೇಖರ್‌ ಕಂಬಾರ ಮತ್ತು ಡಾ. ದೊಡ್ಡರಂಗೇಗೌಡರು ಬರುತ್ತಾರೆ ಎಂದು ಹೇಳಲಾಗಿತ್ತು. ಕೊನೆಗೆ ಕಂಬಾರರ ಅನುಪಸ್ಥಿತಿಯಲ್ಲಿ ದೊಡ್ಡರಂಗೇಗೌಡರೇ ಬಿಡುಗಡೆ ಮಾಡಿದರು. ಅವರ ಜೊತೆಗೆ ವೇದಿಕೆಯಲ್ಲಿ ಮೌನೇಶ್ವರರ ಪಾತ್ರ ಮಾಡಿರುವ ಮಹೇಶ್‌, ಅವರ ತಂದೆ-ತಾಯಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಾಮಸ್ವಾಮಿ ಮತ್ತು ಸ್ಪಂದನ, ಸಂಗೀತ ನಿರ್ದೇಶಕ ಹರ್ಷ ಕೋಗೋಡ್‌, ಛಾಯಾಗ್ರಾಹಕ ಜಯಪ್ರಕಾಶ್‌ ಮುಂತಾದವರು ಇದ್ದರು.

ಈ ಚಿತ್ರವನ್ನು ಮಾಡಲು ಹೊರಟಾಗ, ಭೀಮೇಶ್ವರ್‌ ಅವರನ್ನು ಹಲವರು ಒಂದು ಪ್ರಶ್ನೆ ಕೇಳಿದರಂತೆ. “ಅಲ್ಲಪಾ, ಭಕ್ತಿ ಸಿನಿಮಾ ಮಾಡೋದ್ರಿಂದ ಏನು ಸಿಗೆôತಿ …’ ಅಂತ ಪ್ರಶ್ನಿಸಿದರಂತೆ. ಭೀಮೇಶ್ವರ್‌ ಹೇಳುವಂತೆ ಅವರಿಗೆ ಈ ಚಿತ್ರ ಮಾಡಿದ್ದಕ್ಕೆ ಆನಂದ ಸಿಕ್ಕಿತಂತೆ. “ಇಂತಹ ಚಿತ್ರಗಳಿಂದ ಆನಂದ ಸಿಗುತ್ತದೆ. ಬದುಕಿಗೆ ಬೇಕಾದ ಸ್ಫೂರ್ತಿ ಸಿಗುತ್ತದೆ. ಇಲ್ಲಿ ಮೌನೇಶ್ವರರ ಪವಾಡ ಮತ್ತು ಮಹಾತ್ಮೆಗಳನ್ನು ಸಾರುವುದರ ಜೊತೆಗೆ, ಈ ಚಿತ್ರದಿಂದ ಒಂದೊಳ್ಳೆಯ ಸಂದೇಶ ಕೊಡುವ ಪ್ರಯತ್ನ ಮಾಡಿದ್ದೇವೆ’ ಎಂದರು ಭೀಮೇಶ್ವರ್‌.

ಸಂತ ಶಿಶುನಾಳ ಷರೀಫ‌ರ ತರಹ ಮೌನೇಶ್ವರರದ್ದು ವಿಶಾಲವಾದ ದೃಷ್ಠಿಕೋನ ಎಂದ ದೊಡ್ಡರಂಗೇಗೌಡರು, “ನಮ್ಮದು ಅನುಭವ. ಅವರದ್ದು ಅನುಭಾವ. ಅವರ ಅನುಭಾವ ತವನಿದಿಯಿಂದ ಆಯ್ದ ಭಾಗಗಳನ್ನು ಇಲ್ಲಿ ಕೊಡಲಾಗಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ ಇದು. ಮೌನವೇಶ್ವರರ ವಚನಗಳನ್ನಾಧರಿಸಿ ಈ ಚಿತ್ರ ಮಾಡಲಾಗಿದೆ. ಮನುಕುಲಕ್ಕೆ ಬೇಕಾದ ಸಂದೇಶವನ್ನು ಈ ಚಿತ್ರದ ಮೂಲಕ ಕೊಡಲಾಗಿದೆ. ಇಂತಹ ಒಳ್ಳೆಯ ಅಭಿರುಚಿ ಸಾರುವ ಚಿತ್ರಗಳು ಈ ಕಾಲಕ್ಕೆ ಹೇಳಿ ಮಾಡಿಸಿದಂತಿದೆ’ ಎಂದು ಹೇಳಿದರು.

ಚಿತ್ರದಲ್ಲಿ ಮೌನವೇಶ್ವರರ ಪಾತ್ರವನ್ನು ಮಾಡಿರುವವರು ಮಹೇಶ್‌. ಅವರು ಈ ಪಾತ್ರ ಮಾಡುವುದಕ್ಕಾಗಿ, ಸುಮಾರು 70 ದಿನಗಳ ಕಾಲ ನಾನ್‌-ವೆಜ್‌ ಬಿಟ್ಟು, ಭಕ್ತಿಯಿಂದ ನಟಿಸಿದ್ದಾರಂತೆ. ಆ ನಂತರ ರಾಮಸ್ವಾಮಿ, ಸ್ಪಂದನ, ಶಿವಕುಮಾರ್‌ ಆರಾಧ್ಯ, ಬಾಲ ಮೌನವೇಶ್ವರರ ಪಾತ್ರ ಮಾಡಿರುವ ಮಾಸ್ಟರ್‌ ಚಿನ್ಮಯ್‌ ಮುಂತಾದವರು ಮಾತನಾಡಿದರು. ಎಲ್ಲರೂ ಈ ಚಿತ್ರದಲ್ಲಿ ನಟಿಸಿದ್ದಕ್ಕೆ ಖುಷಿಪಟ್ಟರು.

ಟಾಪ್ ನ್ಯೂಸ್

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.