ರಗಡ್ ಲುಕ್ನಲ್ಲಿ ಸುದ್ದಿಯಾದ ಸುದೀಪ್
Team Udayavani, Dec 21, 2018, 6:00 AM IST
ಸುದೀಪ್ ನಾಯಕರಾಗಿರುವ, ಬಹುನಿರೀಕ್ಷಿತ “ಪೈಲ್ವಾನ್’ ಚಿತ್ರದ ಒಂದೊಂದೇ ಸ್ಟಿಲ್ಗಳು ಬಿಡುಗಡೆಯಾಗುತ್ತಿದೆ. ಈ ಮೂಲಕ ಚಿತ್ರತಂಡ ಅಭಿಮಾನಿಗಳ ಕುತೂಹಲ ತಣಿಸುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಸುದೀಪ್ ಅವರ ಬಾಡಿ ಬಿಲ್ಡ್ ಮಾಡಿರುವ ಫೋಟೋ ಬಿಟ್ಟಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಸುದೀಪ್ “ಪೈಲ್ವಾನ್’ ಚಿತ್ರದ ಮತ್ತೂಂದು ಗೆಟಪ್ ಬಿಟ್ಟಿದೆ. ಅದು ಸುದೀಪ್ ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿ ನಿಂತಿರುವ ಫೋಟೋ. ಇದು ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ. ಈ ಹಿಂದೆ “ಹೆಬ್ಬುಲಿ’ ಚಿತ್ರವನ್ನು ನಿರ್ದೇಶಿಸಿದ್ದ ಕೃಷ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಬಾರಿ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಅವರದ್ದೇ.
“ಪೈಲ್ವಾನ್’ ಚಿತ್ರ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಮೊದಲನೇಯದಾಗಿ ಸುದೀಪ್ ತಮ್ಮ ಇಷ್ಟು ವರ್ಷದ ಕೆರಿಯರ್ನಲ್ಲಿ ಮೊದಲ ಬಾರಿಗೆ ಬರೀ ಮೈಯಲ್ಲಿ ಕಾಣಿಸಿಕೊಂಡಿದ್ದು ಒಂದಾದರೆ, ಈ ಚಿತ್ರಕ್ಕಾಗಿ ಜಿಮ್ಗೆ ಹೋಗಿ ಬಾಡಿ ಬಿಲ್ಡ್ ಮಾಡಿದ್ದು. ನೀವು ಗಮನಿಸಿದಂತೆ ಸುದೀಪ್ ಯಾವ ಚಿತ್ರದಲ್ಲಿ ಅಂಗಿಬಿಚ್ಚಿ ಬರೀ ಮೈಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ, “ಪೈಲ್ವಾನ್’ ಕಥೆ ಇಷ್ಟಪಟ್ಟ ಅವರು ಕುಸ್ತಿ ಅಖಾಡಕ್ಕಿಳಿಯಲು ನಿರ್ಧರಿಸಿ ಜಿಮ್ ಬಾಗಿಲು ಕೂಡಾ ಬಡಿದಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಈ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರೆ. ಇನ್ನು, “ಪೈಲ್ವಾನ್’ ಚಿತ್ರ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಭೋಜ್ಪುರಿ ಹಾಗೂ ಬೆಂಗಾಳಿಯಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ಹಿಂದಿ ಸೇರಿದಂತೆ ಇನ್ನಿತರ ಭಾಷೆಗಳಿಗೆ ಡಬ್ ಆಗಲಿದೆ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಕೃಷ್ಣ. ಈ ಚಿತ್ರಕ್ಕಾಗಿ 20 ಕ್ಕೂ ಹೆಚ್ಚು ಸೆಟ್ಗಳನ್ನು ಹಾಕಲಾಗಿದ್ದು, ಅಭಿಮಾನಿಗಳಿಗೆ ಖುಷಿ ನೀಡುವಂತಿದೆಯಂತೆ.
ಅಂದಹಾಗೆ, ಇದು ಅದ್ಧೂರಿ ಬಜೆಟ್ನ ಚಿತ್ರವಾಗಿದ್ದು, 45 ಕೋಟಿಗೂ ಅಧಿಕ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆಯಂತೆ. ಚಿತ್ರದ ಕಥೆ ಡಿಮ್ಯಾಂಡ್ ಮಾಡಿದ್ದರಿಂದ ಅಷ್ಟೊಂದು ಬಜೆಟ್ ನೀಡಬೇಕಾಯಿತು ಎನ್ನುವುದು ನಿರ್ದೇಶಕ-ನಿರ್ಮಾಪಕ ಕೃಷ್ಣ ಅವರ ಮಾತು. ಸುದೀಪ್ ಕೂಡಾ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದು, ಚಿತ್ರ ಕೊಟ್ಟ ಅನುಭವದ ಬಗ್ಗೆ ಟ್ವಿಟರ್ನಲ್ಲಿ ಪತ್ರವೊಂದನ್ನು ಬರೆದುಕೊಂಡಿದ್ದರು. ಸುದೀಪ್ ಅವರ ವೃತ್ತಿ ಜೀವನದಲ್ಲೇ “ಪೈಲ್ವಾನ್’ ಒಂದು ವಿಶಿಷ್ಟ ಅನುಭವ ಕೊಟ್ಟ ಸಿನಿಮಾವಂತೆ. ಅದೇನೇ ಆದರೂ ಅಭಿಮಾನಿಗಳು “ಪೈಲ್ವಾನ್’ ಗೆಟಪ್ಗೆ ಫಿದಾ ಆಗಿರೋದು ನಿಜ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…