ಜಬರ್ದಸ್ತ್ ಶಂಕರ ಶೂಟಿಂಗ್ ಪೂರ್ಣ
Team Udayavani, Feb 28, 2019, 7:42 AM IST
ದೇವದಾಸ್ ಕಾಪಿಕಾಡ್ ನಿರ್ದೇಶನದ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ ನಿರ್ಮಾಣದ ‘ಜಬರ್ದಸ್ತ್ ಶಂಕರ’ ಸಿನೆಮಾ ಶೂಟಿಂಗ್ ಮುಗಿಸಿದೆ.
ಇರುವೈಲು, ಉಲಾಯಿಬೆಟ್ಟು, ಎಡಪದವು, ಬೆಂಜನಪದವು, ಕೊಡ್ಮಾಣ್, ಮೆಲ್ಕಾರ್, ಪನೋಲಿಬೈಲ್ ಬಳಿಯ ಕೇಶವನಗರ ಮುಂತಾದ ಕಡೆಗಳಲ್ಲಿ ಸಿನೆಮಾ ಶೂಟಿಂಗ್ ಆಗಿತ್ತು.
ಸಿನೆಮಾದಲ್ಲಿ ನಾಲ್ಕು ಸಾಹಸ ದೃಶ್ಯಗಳಿದ್ದು ಮಾಸ್ ಮಾದ ಸಾಹಸದ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಚಂಡಿಕೋರಿ, ಬರ್ಸ, ಅರೆ ಮರ್ಲೆರ್, ಏರಾ ಉಲ್ಲೆರ್ಗೆ ಸಿನೆಮಾಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಸಿನೆಮಾ ನಿರ್ದೇಶಿಸಿದ್ದ ದೇವದಾಸ್ ಕಾಪಿಕಾಡ್ ಈ ಬಾರಿ ವಿಭಿನ್ನ ರೀತಿಯ ಕತೆ ರಚಿಸಿದ್ದಾರೆ.
ಸುಜಿತ್ ನಾಯಕ್ ಎಡಿಟಿಂಗ್ ಕೆಲಸ ಪೂರೈಸಿದ್ದಾರೆ. ತುಳುನಾಡಿನ ಸಂಸ್ಕೃತಿ, ಆಚಾರ- ವಿಚಾರ, ಸಂಪ್ರದಾಯ ಎಲ್ಲವೂ ಇಲ್ಲಿದೆ. ಸಿನೆಮಾವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಿ ಹಿಂದಿ, ತಮಿಳು, ತೆಲುಗಿಗೆ ಡಬ್ಬಿಂಗ್ ಹಕ್ಕು ಮಾರಾಟ ಮಾಡುವ ಕುರಿತು ಮಾತುಕತೆ ನಡೆದಿದೆ.
ಸಿನೆಮಾಕ್ಕೆ ಸಿದ್ದು ಕೆಮರಾ, ಮಣಿಕಾಂತ್ ಕದ್ರಿ ಸಂಗೀತ, ಮಾಸ್ ಮಾದ ಸಾಹಸ, ಸ್ಟಾರ್ಗಿರಿ ನೃತ್ಯ, ಸುಜಿತ್ ನಾಯಕ್ ಸಂಕಲನ, ಕೇಶವ ಸುವರ್ಣ ಕಲೆ, ಶರತ್ ಪೂಜಾರಿ ವಸ್ತ್ರಾಲಂಕಾರದಲ್ಲಿ ದುಡಿದಿದ್ದಾರೆ.
ಜಬರ್ದಸ್ತ್ ಶಂಕರನ ಪಾತ್ರದಲ್ಲಿ ಅರ್ಜುನ್ ಕಾಪಿಕಾಡ್, ಗ್ಯಾರೇಜ್ ಮಾಲಕನ ಪಾತ್ರದಲ್ಲಿ ದೇವದಾಸ್ ಕಾಪಿಕಾಡ್ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ಸಾಯಿಕೃಷ್ಣ, ಸತೀಶ್ ಬಂದಲೆ, ಲಕ್ಷ್ಮಣ್ ಕುಮಾರ್ ಮಲ್ಲೂರು, ಗೋಪಿನಾಥ ಭಟ್, ಚೇತನ್ ರೈ ಮಾಣಿ, ಸರೋಜಿನಿ ಶೆಟ್ಟಿ, ಗಿರೀಶ್ ಎಂ. ಶೆಟ್ಟಿ ಕಟೀಲ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಸುನೀಲ್ ನೆಲ್ಲಿಗುಡ್ಡೆ ಪ್ರತೀಕ್ ಶೆಟ್ಟಿ, ನೀತಾ ಅಶೋಕ್, ನಿಶ್ಮಿತಾ ಬಂಗೇರ, ಶರಣ್ ಕೈಂಕಂಬ ಮುಂತಾದವರು ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ