ಮೋದಿ-ಹಿಂದುತ್ವ-ಪರೇಶ ಹೆಸರಿನಿಂದ ಗೆಲುವು


Team Udayavani, May 16, 2018, 12:58 PM IST

2556.jpg

ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿಯವರ ಹವಾ, ಸಚಿವ ಅನಂತಕುಮಾರ ಹೆಗಡೆ ಹಿಂದುತ್ವ,ಪರೇಶ್‌ ಮೇಸ್ತ ಹೆಸರು ಕರಾವಳಿಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಿದ್ದು ಹವ್ಯಕರ ಒಕ್ಕಟ್ಟು ಘಟ್ಟದ ಮೇಲಿನ ಇಬ್ಬರ ಗೆಲುವಿಗೆ ಕಾರಣವಾಗಿ ನಾಲ್ವರು ಬಿಜೆಪಿ, ಇಬ್ಬರು ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದಾರೆ.

ಸಚಿವ ಅನಂತಕುಮಾರ ಹೆಗಡೆ ಸತತ ತಾವು ಸಂಸತ್ತಿಗೆ ಆಯ್ಕೆಯಾಗುವುದರ ಜೊತೆ ಜಿಲ್ಲೆಯಲ್ಲಿ ಹಿಂದುತ್ವವನ್ನು ಜಾಗೃತವಾಗಿಡಲು ತಮ್ಮ ಸರ್ವಶಕ್ತಿಯನ್ನು ಬಳಸಿದವರು. ಈ ಬಾರಿ ಡಿಸೆಂಬರ್‌ನಲ್ಲಿ ನಡೆದ ಪರೇಸ್‌ ಮೇಸ್ತ ಸಾವಿನ ಪ್ರಕರಣ ಬಿಜೆಪಿ ಗೆಲುವನ್ನು ವಾರದ ಮೊದಲೇ ಖಾತ್ರಿಗೊಳಿಸಿತ್ತು. ಶಿರಸಿ, ಯಲ್ಲಾಪುರ, ಸಿದ್ದಾಪುರ ಸೀಮೆಯಲ್ಲಿ ಎಲ್ಲ ರೀತಿಯಲ್ಲಿ ಬಲಾಡ್ಯರಾಗಿರುವ ಬ್ರಾಹ್ಮಣರು ಒಗ್ಗಟ್ಟಿಗೆ ಹೆಸರು ವಾಸಿ. ಶಿರಸಿಯಲ್ಲಿ ಇಬ್ಬರು ಬ್ರಾಹ್ಮಣರು ನಿಂತರೂ ಗೆಲ್ಲುವ ಕಾಗೇರಿಗೆ ಮತಹಾಕಿದಂತೆ ಹೆಬ್ಟಾರರನ್ನು ಯಲ್ಲಾಪುರದಲ್ಲಿ ಗೆಲ್ಲಿಸಿದ್ದಾರೆ.

ಮೀನುಗಾರ ಸಮಾಜದವರು ಮೊದಲಿನಿಂದಲೂ ಬಿಜೆಪಿ ಒಲವುಳ್ಳವರು. ಪರೇಸ್‌ ಮೇಸ್ತ ಹತ್ಯೆ ನಂತರ ಇದನ್ನು ಪರಿಣಾಮಕಾರಿಯಾಗಿ ಬಿಜೆಪಿ ಬಳಸಿಕೊಂಡಿದೆ. ಪಕ್ಷದ ಕಾರ್ಯಕರ್ತನಲ್ಲವಾದರೂ ನನ್ನ ಮಗ ಹಿಂದು ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಪರೇಶನ ತಂದೆ ಮತ್ತು ಕುಟುಂಬದವರು ಕಾರವಾರದಿಂದ ಕುಂದಾಪುರದವರೆಗೆ ಓಡಾಡಿ ತಮ್ಮ ಸಮಾಜದವರು ಒಟ್ಟಾಗಿ ಬಿಜೆಪಿಗೆ ಮತ ಹಾಕುವಂತೆ ಮಾಡಿದ್ದಾರೆ. ಪರೇಶನ ಚಿತ್ರಗಳು, ಗಲಾಟೆಯ ಚಿತ್ರ, ವಿಡಿಯೋಗಳನ್ನು ಬಿಜೆಪಿ ಯಶಸ್ವಿಯಾಗಿ ಬಳಸಿಕೊಂಡಿದೆ.

ರಿಕ್ಷಾ ಸಂಘದ ಅಧ್ಯಕ್ಷ ಸ್ಥಾನದಿಂದ ಆರಂಭಿಸಿ ಜನರ ಸಂಪರ್ಕ ಸಾಧಿ ಸಿದ ದಿನಕರ ಶೆಟ್ಟಿ ಅಧಿ ಕಾರ ಇರಲಿ, ಇಲ್ಲದಿರಲಿ ಒಂದು ಬಾರಿ ಗೆದ್ದು ಮೂರು ಬಾರಿ ಬೆರಳೆಣಿಕೆ ಅಂತರದಿಂದ ಸೋತಿದ್ದರೂ ಬೇಸರಿಸದೆ ಜನ ಸಂಪರ್ಕದಲ್ಲಿದ್ದರು. ಬಿಜೆಪಿ ಖಾಯಂ ಮತ ಮತ್ತು ದಿನಕರ ಶೆಟ್ಟಿಯವರ ಸಾರ್ವಜನಿಕ ಸಂಪರ್ಕ 32293 ಮತಗಳ ಅಂತರದ ಗೆಲುವು ದೊರಕಿಸಿದೆ. ಸೂರಜ್‌ರ ಭಾವನಾತ್ಮಕ ಸಂಗತಿ, ಯಶೋಧರ ನಾಯ್ಕರ ಸಂಘಗಳು, ಪ್ರದೀಪರ ಸಾಮಾಜಿಕ ಕೆಲಸ ಎಲ್ಲವೂ ಹಿಂದೆ ಸರಿದಿದೆ. ಉಳಿದವರು ಠೇವಣಿ ಕಳೆದುಕೊಂಡಿದ್ದಾರೆ.

ಎಲ್ಲ ಗಾಳಿ ಇದ್ದರೂ ಮಂಕಾಳ ವೈದ್ಯ ಸಾಕಷ್ಟು ಕೆಲಸ ಮಾಡಿದ ಕಾರಣ ಸುನಿಲ್‌ ನಾಯ್ಕ ಭಟ್ಕಳದಲ್ಲಿ 5930 ಮತಗಳ ಅಂತರದಿಂದ ಗೆಲ್ಲುವುದು ಸಾಧ್ಯವಾಯಿತು. ಈ ಎರಡು ಗೆಲುವಿನಲ್ಲಿ ಪರೇಸ್‌ ಮೇಸ್ತ ಹೆಸರು ಮತ್ತು ಮಾಗೋಡಿನ ವಿದ್ಯಾರ್ಥಿಯೊಬ್ಬಳ ಮೇಲೆ ನಡೆಯಿತು ಎನ್ನಲಾದ ಅತ್ಯಾಚಾರ ಪ್ರಯತ್ನದ ಪ್ರಕರಣದ ಸುದ್ದಿ ಕಾರಣವಾಗಿದೆ. ಈ ಎರಡು ಪ್ರಕರಣಗಳು ನಡೆದಾಗ ಶಾಸಕಿ ಶಾರದಾ ಶೆಟ್ಟಿ ಮತ್ತು ಮಂಕಾಳ ವೈದ್ಯ ಎರಡೂ ಸಮಾಜದ ಪ್ರಮುಖರನ್ನು ಸೇರಿಸಿ ಶಾಂತಿ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಬೇಕಿತ್ತು. ಅದರ ಬದಲು ಇಬ್ಬರೂ ಪ್ರಕರಣದಿಂದ ದೂರ ಉಳಿದರು. ಪೊಲೀಸರು ಯಾರ್ಯಾರನ್ನೋ ಬಂಧಿಸಿದರು. ಹಿಂದುಗಳ ಬಂಧನಕ್ಕೆ ಶಾಸಕರಿಬ್ಬರು ಕಾರಣ ಎಂದು ಜನ ಭಾವಿಸಿದರು. ಯಾವತ್ತೂ ತನ್ನ ಬೆಂಬಲವನ್ನು ಬಹಿರಂಗಗೊಳಿಸದೇ ಇದ್ದ ತಂಜಿಮ್‌ ವಾರ ಮೊದಲೇ ಮಂಕಾಳ ವೈದ್ಯರಿಗೆ ಬೆಂಬಲ ಘೋಷಿಸಿದ್ದು ಹಿಂದು ಶಾಸಕ ಬೇಕು ಎಂಬ ಭಾವನೆಗೆ ಪ್ರಚೋದನೆ ದೊರೆಯುವಂತಾಯಿತು. ಆದ್ದರಿಂದ ಮಂಕಾಳ ವೈದ್ಯರ ಕೆಲಸವನ್ನು ಮತದಾರರು ಮರೆತರು. ಇದೇ ಭಾವನೆ ಚುನಾವಣೆ ತನಕ ಮುಂದುವರಿದ ಕಾರಣ ಬಿಜೆಪಿಗೆ ಹೆಚ್ಚು ಲಾಭವಾಯಿತು.

ಇತ್ತೀಚಿನ ವರ್ಷದಲ್ಲಿ ಆರ್‌.ವಿ. ದೇಶಪಾಂಡೆ ಹಳಿಯಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮೋದಿ ಮತ್ತು ಯೋಗಿ ಆದಿತ್ಯನಾಥ ಹೆಸರು ಗೆಲ್ಲಿಸುತ್ತದೆ ಎಂದು ಸುನಿಲ್‌ ಹೆಗಡೆ ದೇಶಪಾಂಡೆ ಟೀಕಿಸುತ್ತಾ ಕಾಲಕಳೆದರು. ಇದರಿಂದ ದೇಶಪಾಂಡೆ 5140 ಮತಗಳಿಂದ ಗೆಲುವು ಸಾಧಿ ಸಿದರು. ಶಿರಸಿ, ಸಿದ್ದಾಪುರ ಕ್ಷೇತ್ರದಲ್ಲಿ ಕಾಗೇರಿ ಗೆಲುವು ನಿಶ್ಚಿತವಾಗಿತ್ತು. ಅವರ ಸರಳತೆ, ಸಜ್ಜನಿಕೆ, ಅನುಭವ, ಕಾರ್ಯಕರ್ತರ ಬೆಂಬಲ ಒಂದು ಕಾರಣವಾದರೆ ಯಾರಿಗೂ ಕೆಡುಕು ಮಾಡದ ಗುಣ ಇನ್ನೊಂದು ಕಾರಣ. ಪರೇಶ ಮೇಸ್ತ ಪ್ರಕರಣದ ನಂತರ ಶಿರಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಗೇರಿ ಸಾವಿನ ಹತ್ತಿರ ಹೋಗಿ ಬಂದಿದ್ದರು. ಹಿಂದುತ್ವ ಮತ್ತು ಬ್ರಾಹ್ಮಣರ ಒಕ್ಕಟ್ಟು ಕಾಗೇರಿಯವರನ್ನು ಮತ್ತೆ ವಿಧಾನಸೌಧಕ್ಕೆ ಕಳಿಸಿದೆ.

ಇಬ್ಬರು ಬ್ರಾಹ್ಮಣರು ನಿಂತಾಗಲೆಲ್ಲಾ ಸೋಲಾಗಿರುವುದನ್ನು ನೆನಪಿಸಿಕೊಂಡು ಯಲ್ಲಾಪುರ ಭಾಗದ ಮತದಾರರು ಶಿವರಾಮ ಹೆಬ್ಟಾರರನ್ನು ಗೆಲ್ಲಿಸಿದ್ದಾರೆ. ವಿ.ಎಸ್‌. ಪಾಟೀಲ ಮತ್ತು ಸಚಿವ ಅನಂತ ನಡುವೆ ಸಂಬಂಧ ಸರಿಯಿರಲಿಲ್ಲ. ಮೋದಿ ಗಾಳಿಯಿದ್ದರೂ ಶಿವರಾಮ ಹೆಬ್ಟಾರ 1483ಮತಗಳಿಂದ ಗೆಲುವು ಸಾಧಿ ಸಿದ್ದಾರೆ. ಪ್ರಥಮವಾಗಿ ಸ ರ್ಧಿಸಿದ ರೂಪಾಲಿ ನಾಯ್ಕ ಮೋದಿ, ಅನಂತ, ಪರೇಶ್‌ ಹವಾದಿಂದಾಗಿ ಇಬ್ಬರು ಮಾಜಿಗಳನ್ನು 13809 ಮತಗಳಿಂದ ಸೋಲಿಸಿದ್ದಾರೆ.

ಮೂವರು ಬ್ರಾಹಣರು, ಇಬ್ಬರು ಹಿಂದುಳಿದ ವರ್ಗಕ್ಕೆ ಸೇರಿದವರು, ಇನ್ನೊಬ್ಬರು ಸಂಖ್ಯಾಬಲ ಕಡಿಮೆ ಇದ್ದ ಸಮಾಜದವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸುನಿಲ ಮತ್ತು ರೂಪಾಲಿ ಪ್ರಥಮವಾಗಿ ಶಾಸಕ ಸ್ಥಾನಕ್ಕೆ ಆಯ್ಕೆಯಾದವರು. ದಿನಕರ ಶೆಟ್ಟಿ, ಶಿವರಾಮ ಹೆಬ್ಟಾರ ಒಂದು ಅವಧಿಯ ಅನುಭವ ಇದ್ದರೆ ಕಾಗೇರಿಯವರಿಗೆ ಐದು ಅವ ಧಿಯ, ದೇಶಪಾಂಡೆಯವರಿಗೆ ಆರು ಅವಧಿಯ ಅನುಭವ ಇದೆ. 

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.