ಅಕ್ಷರಗಳಲ್ಲಿ ಬದುಕಿನ ಬೆಲೆ


Team Udayavani, Sep 16, 2018, 6:00 AM IST

life-style.jpg

ಇದು ಲೇಖಕ ಚಂದ್ರಶೇಖರ ಪಾತೂರು ಅವರ ಚೊಚ್ಚಲ ಕೃತಿ. ಸುಮಾರು ಅರುವತ್ತರಷ್ಟು ಲೇಖನಗಳ ಗುತ್ಛ . ಇಲ್ಲಿನ ಬಹುಪಾಲು ಬರಹಗಳು ಇನ್ನೂರು-ಮೂನ್ನೂರು ಶಬ್ದ ಮೀರಿಲ್ಲ. ಓದುವ ವ್ಯವಧಾನ ಕಳೆದುಕೊಂಡ ಕಾಲಕ್ಕೆ ಸೂಕ್ತವಾದ ಚುಟುಕು ಬರಹಗಳಾದರೂ ಲೇಖಕರನ್ನು ಕಾಡಿದ ವಸ್ತುವಿನ ಕಾರಣಕ್ಕಾಗಿ ಓದಲೇಬೇಕಾದ ಕೃತಿ. ಕಾದಂಬರಿಯಂತೆ ದೀರ್ಘ‌ವಾಗಿ ಬರೆಯಬಹುದಾದ ಅತ್ಯಮೂಲ್ಯ ಅಂಶಗಳನ್ನು ಆಯ್ದು ಸಂಕ್ಷೇಪಿಸಿದ ಕಲೆಗಾರಿಕೆ ಇಲ್ಲಿನ ಬರಹಗಳಲ್ಲಿದೆ.

ಕಳೆದೆರಡು ದಶಕಗಳಿಂದ ನಮ್ಮ ಜೀವನಶೈಲಿ-ಸಂಬಂಧ ಗಳಲ್ಲಿ ವಿಪರೀತ ಪಲ್ಲಟಗಳು ಸಂಭವಿಸಿವೆ. ಮನೆ-ಮನಗಳಿಗೆ ಬದಲಾವಣೆಯ ಗಾಳಿ ಬೀಸಿವೆ. ಸಾಕಷ್ಟು ಪಡೆದುಕೊಂಡಿವೆ. ಅವೆಲ್ಲ ಮೂರ್ತರೂಪದಲ್ಲಿ ನಮ್ಮ ಮುಂದಿವೆ. ಆದರೆ, ಅಭಿವೃದ್ಧಿಯ ವೇಗ, ತಂತ್ರಜ್ಞಾನಗಳ ಮಹಾಪೂರ, ಮಾರುಕಟ್ಟೆಯ ಕಬಂಧಬಾಹುಗಳಿಗೆ ಸಿಲುಕಿ ಜೀವನ ಸ್ಪರ್ಧೆಯಾಗುತ್ತಿದೆ. ಗ್ರಾಮೀಣ ಬದುಕಿನಲ್ಲಿದ್ದ ಬಾಯಿತುಂಬಾ ಮಾತುಕತೆ, ಬಾಲ್ಯದ ನಿರಾಳತೆ, ರೇಡಿಯೋ ಉಂಟು ಮಾಡುತ್ತಿದ್ದ ಬೆರಗು, ಊರ ಸಂತೆ, ಜಾತ್ರೆಯ ಸುತ್ತಾಟ- ಇವೆಲ್ಲ ಉಂಟು ಮಾಡುತ್ತಿದ್ದ ಆನಂದ ಲೇಖಕರನ್ನು ಕಾಡುತ್ತದೆ. ಸವಿಸವಿ ನೆನಪುಗಳೇ ಇಲ್ಲಿನ ಬರಹಗಳ ಜೀವಾಳ.

ಉಳಿದಂತೆ ಮನುಷ್ಯಲೋಕದ ಸಂಕುಚಿತತೆ, ಕೆಟ್ಟ ಕುತೂಹಲ, ಸಾಕಷ್ಟು ಇದ್ದೂ ಅತೃಪ್ತಿಗೊಳ್ಳುವ ಮನಸ್ಸು, ನೀರು, ಪ್ಲಾಸ್ಟಿಕ್‌, ಆರೋಗ್ಯ ಮೊದಲಾದ ಜೀವನ್ಮುಖೀ ವಿಷಯಗಳ ಕುರಿತ ಬೆಲೆಕಟ್ಟಲಾಗದ ಬರಹಗಳು ಈ ಕೃತಿಯಲ್ಲಿದೆ. ನಮ್ಮೆಲ್ಲರ ಬದುಕಿನ ಕಥನವಾಗಿರುವುದರಿಂದ ಇಲ್ಲಿನ ಬರಹಗಳು ನಮಗೆ ಆಪ್ತವಾಗುತ್ತವೆ. 

ಬದುಕಿನ ಬೆಲೆಯನೇನಾದರೂ ಬಲ್ಲಿರಾ…(ಅಂಕಣ ಬರಹಗಳ ಸಂಕಲನ)
ಲೇ.: ಚಂದ್ರಶೇಖರ ಪಾತೂರು (ಮೊ : 9964105598)
ಪ್ರ.: ಆಕೃತಿ-ಆಶಯ ಪಬ್ಲಿಕೇಶನ್ಸ್‌, ಲೈಟ್‌ಹೌಸ್‌ ಹಿಲ್‌ ರೋಡ್‌, ಮಂಗಳೂರು-1 (ಮೊ : 0824-2443002)
ಮೊದಲ ಮುದ್ರಣ: 2018  ಬೆಲೆ : 120 ರೂ.

– ಯೋಗೀಶ ಕೈರೋಡಿ

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.