ಶುರುವಾಗಿದೆ ಟಿಡಿಎಸ್‌ ಲೆಕ್ಕಾಚಾರ

ಆದಾಯ ಮೂಲದಲ್ಲಿ ತೆರಿಗೆ ಕಡಿತವೆಂದರೇನು? ಅದರ ಪ್ರಕ್ರಿಯೆಗಳೇನು?

Team Udayavani, Jul 17, 2020, 12:12 PM IST

ಶುರುವಾಗಿದೆ ಟಿಡಿಎಸ್‌ ಲೆಕ್ಕಾಚಾರ

ಪ್ರತೀವರ್ಷ ಏಪ್ರಿಲ್‌ ತಿಂಗಳು ಬಂತೆಂದರೆ ತೆರಿಗೆ ಲೆಕ್ಕಾಚಾರಗಳು ಶುರುವಾಗುತ್ತವೆ. ಈ ವರ್ಷ ಕೊರೊನಾ ಕಾರಣಕ್ಕೆ ಈ ಪ್ರಕ್ರಿಯೆ ಬಹಳ ವಿಳಂಬವಾಗಿದೆ. ಈ ಹಂತದಲ್ಲಿ ಗಮನಸೆಳೆಯುವ ಮಹತ್ವದ ಸಂಗತಿಯೆಂದರೆ ಟಿಡಿಎಸ್‌ ಸಲ್ಲಿಕೆ. ಟ್ಯಾಕ್ಸ್‌ ಡಿಡಕ್ಟೆಡ್‌ ಆ್ಯಟ್‌ ಸೋರ್ಸ್‌ ಎನ್ನುವುದು ಇದರ ವಿಸ್ತೃತ ರೂಪ. ಯಾರೂ ತೆರಿಗೆ ತಪ್ಪಿಸಿಕೊಳ್ಳಬಾರದು ಎನ್ನುವ ಹಿನ್ನೆಲೆಯಲ್ಲಿ ಟಿಡಿಎಸ್‌ ಕತ್ತರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟಿಡಿಎಸ್‌ ಅಂದರೇನು? ಅದನ್ನು ಹಿಂಪಡೆಯುವುದು ಹೇಗೆ? ಅದರ ಬೇರೆ ಬೇರೆ ಲೆಕ್ಕಾಚಾರಗಳೇನು ಎಂಬ ಮಾಹಿತಿ ಇಲ್ಲಿದೆ.

ಟಿಡಿಎಸ್‌ ಅಂದರೇನು?
ಟ್ಯಾಕ್ಸ್‌ ಡಿಡಕ್ಟೆಡ್‌ ಆ್ಯಟ್‌ ಸೋರ್ಸ್‌ ಎನ್ನುವುದು ಇದರ ವಿಸ್ತೃತ ರೂಪ. ಅಂದರೆ ತೆರಿಗೆಯನ್ನು ಹಣದ ಮೂಲದಲ್ಲಿಯೇ ಕತ್ತರಿಸುವುದು. ಇನ್ನೂ ಬಿಡಿಸಿ ಹೇಳುವುದಾದರೆ ಕಂಪನಿಯೊಂದು ಸಂಬಳ ನೀಡುವಾಗ, ಸರ್ಕಾರದಿಂದ ನಿರ್ದೇಶಿತವಾಗಿರುವ ಪ್ರಮಾಣದಲ್ಲಿ ತೆರಿಗೆ ಹಣವನ್ನು ಕತ್ತರಿಸಿ, ಬಾಕಿ ಮೊತ್ತವನ್ನು ಮಾತ್ರ ಉದ್ಯೋಗಿಗೆ ನೀಡುತ್ತದೆ. ಹೀಗೆ ಕತ್ತರಿಸಿರುವ ಹಣವನ್ನು ಉದ್ಯೋಗಿಯ ಪಾನ್‌ ಖಾತೆಯ (ಶಾಶ್ವತ ಖಾತೆ ಸಂಖ್ಯೆ) ಮೂಲಕ ಸರ್ಕಾರಕ್ಕೆ ಸಲ್ಲಿಸುತ್ತದೆ.

ಎಲ್ಲ ಆದಾಯಕ್ಕೂ ಟಿಡಿಎಸ್‌ ಅನ್ವಯಿಸಲ್ಲ
ಟಿಡಿಎಸ್‌ ಎಲ್ಲ ರೀತಿಯ ಆದಾಯಗಳಿಗೆ ಅನ್ವಯಿಸುವುದಿಲ್ಲ. ಉದಾಹರಣೆಗೆ ಡೆಟ್‌ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಭಾರತೀಯರು ಹೂಡಿದ ಹಣ ಹಿಂಪಡೆದರೆ, ಅದಕ್ಕೆ ಟಿಡಿಎಸ್‌ ಇಲ್ಲ. ಅದೇ ಅನಿವಾಸಿ ಭಾರತೀಯರು ಹಣ ಪಡೆದರೆ ಟಿಡಿಎಸ್‌ ಅನ್ವಯಿಸುತ್ತದೆ. ಇನ್ನು ವೇತನ, ಬಡ್ಡಿ, ಕಮಿಷನ್‌, ಲಾಭಾಂಶ ನೀಡುವಾಗ ಟಿಡಿಎಸ್ ಕತ್ತರಿಸಲ್ಪಡುತ್ತದೆ. ಟಿಡಿಎಸ್‌ ವ್ಯಾಪ್ತಿಗೆ ಬರುವ ಬೇರೆ ಬೇರೆ ಆದಾಯ ಮೂಲವನ್ನು ಸರ್ಕಾರ ನಿಗದಿ ಮಾಡಿದೆ.

ವೇತನೇತರ ಕಡಿತದ ಪ್ರಮಾಣ ಇಳಿಕೆ
ಮೇ 14, 2020ರಿಂದ ಸರ್ಕಾರ ವೇತನೇತರ ಟಿಡಿಎಸ್‌ ಕಡಿ ತದ ಪ್ರಮಾಣವನ್ನು ಶೇ.25ರಷ್ಟು ತಗ್ಗಿಸಿದೆ. ಇದರಲ್ಲಿ ಮನೆ ಬಾಡಿಗೆ, ನಿಗದಿತ ಠೇವಣಿಗಳಿಂದ ಪಡೆದ ಬಡ್ಡಿ, ಲಾಭಾಂಶ ಇತ್ಯಾದಿಗಳು ಸೇರುತ್ತವೆ. ಆದರೆ ವೇತನ ನೀಡುವಾಗ ಮಾಡುವ ಕಡಿತದಲ್ಲಿ ಯಾವುದೇ ವ್ಯತ್ಯಾಸವಿಲ್ಲ
ಎನ್ನುವು ದನ್ನು ಗಮನಿಸಬೇಕು. ಜೊತೆಗೆ ಕಡಿತದ ಪ್ರಮಾಣ ಇಳಿಸಿದ್ದು 2021, ಮಾ.31ರವರೆಗೆ ಮಾತ್ರ ಅನ್ವಯ ಎನ್ನುವುದೂ ಗೊತ್ತಿರಬೇಕು.

ಫಾರ್ಮ್ 26 ಎಎಸ್‌ ಮತ್ತು ಫಾರ್ಮ್ 16
ಟಿಡಿಎಸ್‌ ಸಲ್ಲಿಕೆ ವೇಳೆ ಎರಡು ಮುಖ್ಯ ಪತ್ರಕಗಳನ್ನು ಗಮನಿಸಲೇಬೇಕು
1.  ಫಾರ್ಮ್ 26 ಎಎಸ್‌: ಆ್ಯನ್ಯುಯಲ್‌ ಸ್ಟೇಟ್‌ಮೆಂಟ್‌ ಅಥವಾ ವಾರ್ಷಿಕ ವಿವರ. ಇದರಲ್ಲಿ ವಿವಿಧಮೂಲಗಳಿಂದ ಕತ್ತರಿ ಸಲ್ಪಟ್ಟ ನಮ್ಮ ಟಿಡಿಎಸ್‌ ಮಾಹಿತಿಗಳನ್ನು ತಿಳಿಸಲಾಗಿರುತ್ತದೆ. ಪ್ರತೀ ವಿತ್ತೀಯವರ್ಷ ಮುಗಿದ ನಂತರ ಈ ವಿವರವನ್ನು ತೆರಿಗೆ ಕತ್ತರಿಸಿದ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸುತ್ತವೆ. ಅದನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ ಸೈಟ್‌ ಮೂಲಕ ನಾವು ಪಡೆಯಬಹುದು.

2.  ಫಾರ್ಮ್ 16: ಇದರಲ್ಲಿ ತನ್ನ ಉದ್ಯೋಗಿಯಿಂದ ಸಂಸ್ಥೆಯೊಂದು ಕತ್ತರಿಸಿದ ತೆರಿಗೆ ಹಣ ಮತ್ತು ಅದನ್ನು ಸರ್ಕಾರಕ್ಕೆ ಸಲ್ಲಿಸಿದ ಮಾಹಿತಿಯಿರುತ್ತದೆ. ಇದು ಉದ್ಯೋಗಿಗೆ ಸಂಸ್ಥೆ ನೀಡಲೇಬೇಕಾದ ವಾರ್ಷಿಕ ಪ್ರಮಾಣಪತ್ರ. ಇದು ಸಿಕ್ಕಿದ ನಂತರವೇ ಉದ್ಯೋಗಿ ಕಡಿತಗೊಂಡ ತನ್ನ ಹಣವನ್ನು ಮರಳಿ ಪಡೆಯಲು ಅರ್ಜಿ ಸಲ್ಲಿಸಬಹುದು.

ಟಿಡಿಎಸ್‌ ಹಣ ಹಿಂಪಡೆಯುವುದು ಹೇಗೆ?
ನಮಗೆ ಒಂದು ವರ್ಷದಲ್ಲಿ ಇರುವ ಆದಾಯ, ಅದಕ್ಕೆ ಎದುರಾಗುವ ತೆರಿಗೆ ಪ್ರಮಾಣ ಇದನ್ನು ಮೊದಲು ಪರಿಶೀಲಿಸಬೇಕು. ನಂತರ ತೆರಿಗೆ ಮಿತಿಗಿಂತ ಹೆಚ್ಚು ಹಣವನ್ನು ಕಡಿತ ಮಾಡಲಾಗಿದೆ ಅನಿಸಿದರೆ, ಅದನ್ನು ಹಿಂಪಡೆಯಲು ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಇದು ವಿತ್ತೀಯ ವರ್ಷಾಂತ್ಯದಲ್ಲಿ ನಡೆಯುವ ಪ್ರಕ್ರಿಯೆ. ಎರಡು ದಾರಿಗಳಲ್ಲಿ ಇದನ್ನು ಮಾಡಬಹುದು.

1. ಮಾಮೂಲಿ
ಪ್ರಕ್ರಿಯೆ: ಐಟಿಆರ್‌ ಅಥವಾ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಪತ್ರಕವನ್ನು ಭರ್ತಿ ಮಾಡಿ, ಅದನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸ ಬೇಕು. ಈ ವೇಳೆ ನಿಮ್ಮ ಬ್ಯಾಂಕ್‌ ಹೆಸರು, ಐಎಫ್ ಎಸ್‌ಸಿ, ಪಾನ್‌ ಸಂಖ್ಯೆಯನ್ನು ಸರಿಯಾಗಿ ನಮೂದಿ ಸಬೇಕು.

2.ಅಂತರ್ಜಾಲದಲ್ಲಿ: ಐಟಿ ಇಲಾಖೆಯ https://incometaxindiaefi ling.gov.in ವೆಬ್‌ಸೈಟ್‌ ತೆರೆದು, ನಿಮ್ಮ ಲಾಗಿನ್‌ ಐಡಿಯನ್ನು ಸೃಷ್ಟಿಸಿಕೊಳ್ಳಬೇಕು. ನಂತರ ಸಂಬಂಧಪಟ್ಟ ಐಟಿಆರ್‌ ಪತ್ರಕವನ್ನು ಇಳಿಸಿಕೊಂಡು (ಡೌನ್‌ ಲೋಡ್‌) ಅದನ್ನು ಭರ್ತಿ ಮಾಡಬೇಕು. ಅದನ್ನು ವೆಬ್‌ ಮೂಲಕವೇ ಸಲ್ಲಿಸಬೇಕು. ಈ ಪ್ರಕ್ರಿಯೆ ಮುಗಿಸಿದ ನಂತರ ಐಟಿಆರ್‌ ಸಲ್ಲಿಕೆಯಾಗಿದೆ ಎಂಬುದನ್ನು ಪ್ರಮಾಣೀಕರಿಸಬೇಕಾಗುತ್ತದೆ. ಅದಕ್ಕೆಂದೇ ಒಂದು ಕೊಂಡಿ ನಮಗೆ ಸಿಗುತ್ತದೆ. ಅದನ್ನು ಇ-ವೆರಿಫೈ ಮಾಡಬೇಕು, ನಿಮ್ಮ ಡಿಜಿಟಲ್‌ ಸಹಿ, ಆಧಾರ್‌ ಒಟಿಪಿ ಅಥವಾ ನಿಮ್ಮ ನೆಟ್‌ಬ್ಯಾಂಕಿಂಗ್‌ ಮೂಲಕ ಇದನ್ನು ಸಾಧಿಸಬಹುದು. ಇ-ವೆರಿಫೈ ಸಾಧ್ಯವಾಗದಿದ್ದರೆ, ನೀವು ತುಂಬಿದ ಪತ್ರಕವನ್ನು ಡೌನ್‌ ಲೋಡ್‌ ಮಾಡಿಕೊಂಡು, ಮುದ್ರಿಸಿ (ಪ್ರಿಂಟ್‌ ತೆಗೆದು), ಸಹಿ ಹಾಕಿ, ಆದಾಯ ತೆರಿಗೆ ಇಲಾಖೆಗೆ ಕಳುಹಿಸಬೇಕು.

ಪ್ರಶ್ನೆಉತ್ತರ
ಪ್ರಶ್ನೆ: ಒಬ್ಬ ವ್ಯಕ್ತಿಗೆ ಹಲವು ರೀತಿಯ ಆದಾಯವಿದ್ದರೆ, ಎಲ್ಲ ಮೂಲಗಳಿಗೆ ಒಂದೇ ಟಿಡಿಎಸ್‌ ದರ ಇರುತ್ತದೆಯಾ? 
ಉತ್ತರ: ಇಲ್ಲ, ಟಿಡಿಎಸ್‌ ವ್ಯಾಪ್ತಿಗೆ ಬರುವ ಬೇರೆ ಬೇರೆ ಆದಾಯಗಳಿಗೆ, ನಿಯಮಗಳಿಗನುಗುಣವಾಗಿ ಬೇರೆ ಬೇರೆ ದರವಿರುತ್ತದೆ.

ಪ್ರಶ್ನೆ: ಸಂಬಳದಿಂದ ಕಡಿತ ಮಾಡುವ ಟಿಡಿಎಸ್‌ ದರವೆಷ್ಟು?
ಉತ್ತರ: ಇದನ್ನು ಆದಾಯ ತೆರಿಗೆಯ ವಿವಿಧ ದರಗಳನ್ನು ಗಮನಿಸಿ ನಿರ್ಧರಿಸಲಾಗುತ್ತದೆ. ಇದರಲ್ಲಿ ಸೆಸ್‌ ಕೂಡಾ ಸೇರಿರುತ್ತದೆ.

ಪ್ರಶ್ನೆ: ಯಾವಾಗ ಟಿಡಿಎಸ್‌ ಕತ್ತರಿಸಲಾಗುತ್ತದೆ?
ಉತ್ತರ: ಒಬ್ಬ ವ್ಯಕ್ತಿಗೆ ವೇತನ ಅಥವಾ ಇನ್ನಿತರ ಮೂಲಗಳಿಂದ ಹಣ ಬರುತ್ತಿದೆ ಎಂದುಕೊಳ್ಳೋಣ. ಆತನಿಗೆ ಹಣ ಕೊಡುವ ಸಂಸ್ಥೆ ಅಥವಾ ವ್ಯಕ್ತಿಗಳು, ದರಕ್ಕೆ ತಕ್ಕಂತೆ ಟಿಡಿಎಸ್‌ ಕತ್ತರಿಸಿ ಉಳಿದ ಹಣ ನೀಡುತ್ತಾರೆ.

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.