ರಾಷ್ಟ್ರಮಟ್ಟದ ಕರಕುಶಲ ಮಹಾ ಕುಂಭಮೇಳಕ್ಕೆ ಚಾಲನೆ
Team Udayavani, Feb 12, 2018, 3:42 PM IST
ಸಿದ್ಧಗಿರಿ (ಕೊಲ್ಹಾಪುರ): ನಗರದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಕರಕುಶಲ ಮಹಾ ಕುಂಭಮೇಳಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಮೇಳದಲ್ಲಿ ದೇಶದ ವಿವಿಧೆಡೆಯ 120ಕ್ಕೂ ಅಧಿಕ ಕರಕುಶಲಕರ್ಮಿಗಳು ತಮ್ಮ ಉತ್ಪನ್ನ ಹಾಗೂ ಪ್ರತಿಭಾ ಕೌಶಲ ಪ್ರದರ್ಶಿಸಿದರು.
ಬೆಳಗ್ಗೆ ನಡೆದ ಶೋಭಾಯಾತ್ರೆಗೆ ಉತ್ತರ ಪ್ರದೇಶದ ರಾಯಬರೇಲಿ ರಾಜಮನೆತನದ ಕೌಶಲೇಂದ್ರ ಸಿಂಹ ಅವರು ಚಾಲನೆ ನೀಡಿದರು. ಸಿದ್ಧಗಿರಿ ಕರಕುಶಲ ತರಬೇತಿ ಕೇಂದ್ರವನ್ನು ಗುಜರಾತ್ನ ಸ್ವಾಮಿ ನಾರಾಯಣ ಸಂಸ್ಥೆಯ ತ್ಯಾಗವಲ್ಲಭದಾತ್ ಅವರು ಉದ್ಘಾಟಿಸಿದರು. ಮಹಾಕುಂಭ ಮೇಳವನ್ನು ಕೇಂದ್ರ ಕೃಷಿ ಸಹಾಯಕ ಸಚಿವೆ ಕೃಷ್ಣಾ ರಾಜಾಜಿ ಉದ್ಘಾಟಿಸಿದರು. ಆಹಾರ ಮೇಳವನ್ನು ಮಹಾರಾಷ್ಟ್ರದ ಗೃಹ ಹಾಗೂ ಹಣಕಾಸು ಸಚಿವ ದೀಪಕಭಾಯಿ ಕೇಸರಕರ ಉದ್ಘಾಟಿಸಿದರು.
ಮಹಾರಾಷ್ಟ್ರದ ಕಂದಾಯ ಮತ್ತು ಮೂಲಭೂತ ಸೌಕರ್ಯ ಸಚಿವ ಚಂದ್ರಕಾಂತ ದಾದಾಪಾಟೀಲ ಸೇರಿ ಅನೇಕರಿದ್ದರು. ಕಾಡಸಿದ್ದೇಶ್ವರ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸುಮಾರು 120 ಬಗೆಯ ದೋಸೆ, ಮಧುಮೇಹಿಗಳಿಗೆ ಪೂರಕವಾಗುವ ಸಿರಿಧಾನ್ಯಗಳಿಂದ ತಯಾರಿಸಿದ ಉಪಾಹಾರ ಮತ್ತು ಊಟ, ಸುಮಾರು 140ಕ್ಕೂ ಅಧಿಕ ಪ್ರಕಾರದ ಪೊರಕೆ ಸೇರಿ ಇನ್ನಿತರೆ ಉತ್ಪನ್ನಗಳು ಗಮನ ಸೆಳೆಯುತ್ತಿವೆ. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಸು ಮತ್ತು ಹೋರಿಗಳ ಪ್ರದರ್ಶನವೂ ಗಮನ ಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…