ಫಾತಿಮಾ ಮನೆ ಧ್ವಂಸ
Team Udayavani, Oct 20, 2018, 6:00 AM IST
ಕೊಚ್ಚಿ: ಶಬರಿ ಮಲೆ ಸನ್ನಿಧಾನ ಪ್ರವೇಶಿಸಲು ಯತ್ನಿಸಿದ ಸಾಮಾಜಿಕ ಕಾರ್ಯಕರ್ತೆ ರೆಹಮಾ ಫಾತಿಮಾ ಅವರ ಕೊಚ್ಚಿಯಲ್ಲಿರುವ ಮನೆಯನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಅವರು ಶಬರಿಮಲೆಗೆ ತಮ್ಮ ಸಂಗಾತಿಯೊಂದಿಗೆ ತೆರಳಿದ್ದರು. ಅವರು ಶಬರಿಮಲೆಗೆ ತೆರಳಿರುವ ವಿಡಿಯೋಗಳು ವಾಹಿನಿಗಳಲ್ಲಿ ದಿನವಿಡೀ ಪ್ರಸಾರಗೊಂಡಿದ್ದವು. ಸಂಜೆ ವೇಳೆ, ಕೊಚ್ಚಿಯಲ್ಲಿರುವ ಮನೆಯ ಮೇಲೆ ಕೆಲ ಯುವಕರ ತಂಡ ದಾಳಿ ನಡೆಸಿದೆ. ವಿಷಯ ತಿಳಿದ ಪೊಲೀಸರು ಮನೆಗೆ ಧಾವಿಸುವಷ್ಟರಲ್ಲಿ ದಾಳಿ ನಡೆಸಿದ ಯುವಕರ ಗುಂಪು ಜಾಗ ಖಾಲಿ ಮಾಡಿತ್ತು.
ಮೇಲ್ಮನವಿಗೆ ಸಂಪಾದಕಿ ನಿರ್ಧಾರ: ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕೇರಳ ಸರಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಮಲಯಾಳಂ ಸುದ್ದಿ ಜಾಲತಾಣವೊಂದರ ಸಂಪಾದಕಿ ಸಿ.ಎಸ್.ಲಿಬಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾರೆ.
ಕೇಂದ್ರದಿಂದ ಸೂಚನೆ: ದಿನಕಳೆದಂತೆ ಶಬರಿಮಲೆಯಲ್ಲಿ ವಾತಾವರಣ ಉದ್ವಿಗ್ನವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯ ಸರಕಾರಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಈ ಮೂರೂ ರಾಜ್ಯಗಳಲ್ಲಿ ಶಬರಿಮಲೆಯ ಅಪಾರ ಭಕ್ತರು ಇರುವ ಹಿನ್ನೆಲೆಯಲ್ಲಿ ಶಬರಿಮಲೆಯ ಬಿಸಿ ಈ ರಾಜ್ಯಗಳಿಗೆ ತಟ್ಟ ದಿರುವಂತೆ ಕಾನೂನು ಸುವ್ಯವಸ್ಥೆ ಪಾಲಿಸ ಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಸಂದೇಶಗಳು ರವಾನೆ ಯಾಗದಂತೆ ಎಚ್ಚರ ವಹಿಸಬೇಕು ಎಂದು ಕೇಂದ್ರ ಸೂಚಿಸಿದೆ.
ದೇಗುಲ ಶುದ್ಧಗೊಳಿಸಿ
ಯಾವುದೇ ಮಹಿಳೆ ಅಯ್ಯಪ್ಪ ಸ್ವಾಮಿ ಸನ್ನಿಧಾನದೊಳಕ್ಕೆ ಕಾಲಿಟ್ಟರೆ, ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಪದ್ಧತಿಗೆ ಚ್ಯುತಿಯಾದರೆ ಕೂಡಲೇ ದೇಗುಲವನ್ನು ಮುಚ್ಚಬೇಕು ಹಾಗೂ ಇಡೀ ದೇವಾಲಯವನ್ನು ಶುದ್ಧಗೊಳಿಸ ಬೇಕು ಎಂದು ಅಯ್ಯಪ್ಪ ಸ್ವಾಮಿಯ ಆಡಳಿತಾಧಿಕಾರಿಗಳಿಗೆ ಪಂದಳಂ ಅರಮನೆಯ ಟ್ರಸ್ಟ್ ಪತ್ರ ಬರೆದಿದೆ.
ಹಿಂದುತ್ವ ವಾದಿಗಳು ಬಾಬ್ರಿ ಮಸೀದಿ ಕೆಡವಿದ ಸಂದರ್ಭದಲ್ಲಿ ಏನು ಮಾಡಿದ್ದವೋ, ಅದನ್ನೇ ಈಗ ಶಬರಿಮಲೆ ವಿಚಾರದಲ್ಲೂ ಮಾಡುತ್ತಿವೆ.
ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ
ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್ಕೌಂಟರ್… ಇಬ್ಬರು ಉಗ್ರರು ಹತ
Monsoon: ನಿಗದಿತ ಸಮಯಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ
Hoarding Collapse: ಅಪ್ಪಚ್ಚಿಯಾದ ಕಾರಿನಲ್ಲಿತ್ತು ನಿವೃತ್ತ ಅಧಿಕಾರಿ, ಪತ್ನಿಯ ಮೃತದೇಹ
ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಣಕ್ಕಿಳಿದಿದ್ದ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತ
MUST WATCH
ಹೊಸ ಸೇರ್ಪಡೆ
Bengaluru: ಕಾಲೇಜಿನ 6ನೇ ಮಹಡಿಯಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ
ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ
Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು
Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
Bidar; ಯುವಕರ ಬದುಕು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ