ಸೋಂಕಿತ ಸೀನುವಾಗ ಹೊರಬರುವ ಏರೋಸಾಲ್ 10 ಮೀಟರ್ ದೂರ ಹೋಗಬಹುದು : ಕೇಂದ್ರ
Team Udayavani, May 20, 2021, 6:05 PM IST
ನವ ದೆಹಲಿ : ಕೋವಿಡ್ ಸೋಂಕಿತ ಸೀನಿದಾಗ ಹಾಗೂ ಕೆಮ್ಮಿದಾಗ ಅಥವಾ ಉಸಿರು ಬಿಟ್ಟಾಗ ಬಾಯಿ ಮತ್ತು ಮೂಗಿನಿಂದ ಹೊರ ಬರುವ ಹನಿಗಳು 2 ಮೀಟರ್ ದೂರದವರೆಗೂ ಚಿಮ್ಮಿ ಬೀಳುತ್ತವೆ. ಆ ಹನಿಗಳ ಸಣ್ಣ ಕಣಗಳು ಅಥವಾ ಏರೋಸಾಲ್ ಗಾಳಿಯಲ್ಲಿ ಸುಮಾರು 10 ಮೀಟರ್ಗಳ ವರೆಗೂ ಸಾಗಬಹುದಾಗಿದೆ ಎಂದು ಸರ್ಕಾರ ತಮಾಹಿತಿ ನೀಡಿದೆ.
ಕೋವಿಡ್ ಸೋಂಕಿನ ಎರಡನೇ ಅಲೆಯ ಕಾರಣದಿಂದಾಗಿ ಇಡೀ ದೇಶದ ವೈದ್ಯಕೀಯ ವ್ಯವಸ್ಥೆ ಅಡಿಮೇಲಾಗಿದೆ. ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆಗೊಳಿಸಿ ಈ ಮಾಹಿತಿಯನ್ನು ನಿಡಿದೆ.
ಇದನ್ನೂ ಓದಿ : ಲಾಕ್ ಡೌನ್ ಮುಂದುವರಿಕೆ ಬಗ್ಗೆ ಮೇ.23ರಂದು ಸಿಎಂ ನಿರ್ಧಾರ: ಡಿಸಿಎಂ ಅಶ್ವಥ್ ನಾರಾಯಣ್
ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಶುಚಿತ್ವ ಹಾಗೂ ಸಾಕಷ್ಟು ಗಾಳಿ ಇರುವಂತೆ ಗಮನಿಸುವುದರ ಕುರಿತು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಹೊಸ ಕೋವಿಡ್ ಮಾರ್ಗ ಸೂಚಿಯನ್ನು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಿಂದ ಹೊರಡಿಸಲಾಗಿದ್ದು, ‘ತೆರೆದ ಸ್ಥಳಗಳಲ್ಲಿ ಅಥವಾ ಹೆಚ್ಚು ಗಾಳಿಯ ಸಂಚಾರ ಇರುವ ಜಾಗದಲ್ಲಿ ಕೋವಿಡ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಅಪಾಯ ಕಡಿಮೆ ಇದೆ. ತೆರೆದಿರುವ ಕಿಟಕಿಗಳು, ಬಾಗಿಲುಗಳು, ಫ್ಯಾನ್ ಮೂಲಕ ಸಾಕಷ್ಟು ಗಾಳಿಯು ಒಳಗೆ ಮತ್ತು ಹೊರಗೆ ಹೋಗುವ ವ್ಯವಸ್ಥೆಯು ವೈರಸ್ ಒಂದೇ ಸ್ಥಳದಲ್ಲಿ ಸೇರದಂತೆ ತಡೆಯುವುದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಕೋವಿಡ್ ಸೋಂಕಿತ ವ್ಯಕ್ತಿಗೆ ರೋಗದ ಲಕ್ಷಣಗಳು ಇಲ್ಲದಿದ್ದರೂ ಅವರಿಂದ ವೈರಸ್ ಹರಡಬಹುದಾಗಿರುತ್ತದೆ. ಮುಖ್ಯವಾಗಿ ಬಾಯಿಯಿಂದ ಹೊರ ಬೀಳುವ ಸಲೈವಾ ಹಾಗೂ ಮೂಗಿನಿಂದ ಹೊರಬೀಳುವ ಕಣಗಳು ಸೋಂಕು ಹರಡುವ ಪ್ರಾಥಮಿಕ ಸಾಧ್ಯತೆಗಳು ಎಂದು ತಿಳಿಸಿದೆ.
ಉಸಿರು ಹೊರಬಿಡುವಾಗ, ಮಾತನಾಡುವಾಗ, ಕೂಗುವಾಗ, ಹಾಡುವಾಗ, ನಗುವಾಗ, ಕೆಮ್ಮವಾಗ ಹಾಗೂ ಸೀನುವಾಗ ವೈರಸ್ ಹೊತ್ತ ಹನಿಗಳು ಚಿಮ್ಮುವ ಸಾಧ್ಯತೆ ಇರುವ ಕಾರಣದಿಂದಾಗಿ ಎರಡು ಮಾಸ್ಕ್ ಧರಿಸುವಂತೆ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಸಲಹೆ ನೀಡಿದೆ.
?Key routes of virus transmission from one person to another.
1. Aerosols
2. Droplets
3. Surface➡️Even one infected person showing no symptoms can release enough droplets to create a “viral load” that can infect many others.#Unite2FightCorona #StaySafe pic.twitter.com/7hGc5f9RXr
— #IndiaFightsCorona (@COVIDNewsByMIB) May 20, 2021
ಇದನ್ನೂ ಓದಿ : ವಿಶ್ವಪರಂಪರಾ ಪಟ್ಟಿಯ ಸಂಭವನೀಯ ಸ್ಥಳಗಳಲ್ಲಿ ಹಿರೇಬೆಣಕಲ್ ಶಿಲಾಯುಗದ ಸಮಾಧಿಗಳ ಪ್ರಸ್ತಾಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ