ಶಾಲಾ ಬಸ್ ಕಂದಕಕ್ಕೆ ಉರುಳಿ ಎಂಟು ವಿದ್ಯಾರ್ಥಿಗಳು ಸಾವು
Team Udayavani, Aug 6, 2019, 11:33 AM IST
ಡೆಹ್ರಾಡೂನ್ : ಉತ್ತರಾಖಂಡ ರಾಜ್ಯದ ತೆಹ್ರೀ ಗರ್ಹ್ವಾಲ್ ಎಂಬ ಗ್ರಾಮದಲ್ಲಿ ಚಿಣ್ಣರನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಒಂದು ಕಂದಕಕ್ಕೆ ಉರುಳಿದ ಪರಿಣಾಮ ಎಂಟು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಈ ಶಾಲಾ ವಾಹನದಲ್ಲಿ ಸುಮಾರು 18 ಮಕ್ಕಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಕಂದಕಕ್ಕೆ ಉರುಳಿತು ಎಂಬ ಮಾಹಿತಿ ಇದೀಗ ಲಭಿಸಿದೆ.
ಘಟನಾ ಸ್ಥಳದಲ್ಲಿ ರಕ್ಷಣಾ ಪರಿಹಾರ ಕಾರ್ಯಗಳು ನಡೆಯುತ್ತಿದೆ. ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.