ಕೋವಿಡ್ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 2 ವರ್ಷದ ಸಂಬಳ : ಖಾಸಗಿ ಕಂಪನಿ ಅಭಯ ಹಸ್ತ
Team Udayavani, May 1, 2021, 8:45 PM IST
ನವದೆಹಲಿ: ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣದ ಬಗ್ಗೆ ಆತಂಕ ಪಡುತ್ತಿರುವ ಉದ್ಯೋಗಿಗಳಿಗೆ ಖಾಸಗಿ ಕಂಪನಿ ಬೊರೊಸಿಲ್ ಲಿಮಿಟೆಡ್ ಅಭಯ ಹಸ್ತ ನೀಡಿದೆ.
ನಮ್ಮ ಕಂಪನಿಯ ಉದ್ಯೋಗಿ ಒಂದು ವೇಳೆ ಕೋವಿಡ್ ತುತ್ತಾಗಿ ಸಾವನ್ನಪ್ಪಿದರೆ, ಅವರ ಕುಟುಂಬದವರಿಗೆ ಮುಂದಿನ 2 ವರ್ಷಗಳ ಕಾಲ ಆ ಉದ್ಯೋಗಿಯ ಸಂಬಳ ಸಿಗಲಿದೆ ಎಂದು ಭರವಸೆ ನೀಡಿದೆ.
ಈ ಬಗ್ಗೆ ಮಾತಾಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀವರ್ ಖೆರುಕ, ನಮ್ಮ ಕಂಪನಿ ಕೋವಿಡ್ನಿಂದಾಗಿ ಈಗಾಗಲೇ ನಾಲ್ವರು ಉದ್ಯೋಗಿಗಳನ್ನು ಕಳೆದುಕೊಂಡಿದೆ. ಸಂತೋಷ್ ಚಳ್ಕೆ, ವಿಜಯ್ ಶಿರ್ಸತ್, ತುಷಾರ್ ಪಾಂಚಾಲ್ ಹಾಗೂ ಶಿವಶಂಕರ್ ಬಿಷ್ತ್ ಎಂಬವರು ಕರೊನಾದಿಂದಾಗಿ ಮೃತಪಟ್ಟಿದ್ದು, ಅವರ ಅಗಲಿಕೆಯಿಂದಾಗಿರುವ ನಷ್ಟವನ್ನು ವಿವರಿಸಿ ಹೇಳಲಾಗದು. ಹೀಗೆ ನಾಲ್ವರು ಕರೊನಾಗೆ ಬಲಿಯಾಗಿರುವುದರಿಂದ ನಮ್ಮ ಉಳಿದ ಎಲ್ಲ ಉದ್ಯೋಗಿಗಳಿಗೆ ಈ ಭರವಸೆ ನೀಡಲಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಬೋರೋಸಿಲ್ ಲಿಮಿಟೆಡ್ ಅಥವಾ ಬೊರೊಸಿಲ್ ರಿನ್ಯುವೇಬಲ್ ಲಿಮಿಟೆಡ್ನ ಯಾವುದೇ ಉದ್ಯೋಗಿ ಕರೊನಾದಿಂದಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಮುಂದಿನ 2 ವರ್ಷ ಕಾಲ ಸಂಬಳ ಮುಂದುವರಿಯಲಿದೆ. ಮಾತ್ರವಲ್ಲ ಅವರ ಮಕ್ಕಳು ಭಾರತದಲ್ಲಿ ಪದವಿ ಪಡೆಯುವವರೆಗಿನ ವಿದ್ಯಾಭ್ಯಾಸದ ಖರ್ಚನ್ನೂ ಭರಿಸಲಾಗುವುದು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!